ಅಭ್ಯಾಸ ಹಾಳೆ-10 | 10ನೇ ತರಗತಿ ಸಮಾಜ ವಿಜ್ಞಾನ | ಇತಿಹಾಸ ಅಧ್ಯಾಯ-4 | ಸಮಾಜ ವಿಜ್ಞಾನ ಸಾಮಾನ್ಯ ಜ್ಞಾನದ ಪ್ರಶ್ನೆಗಳು | ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು |

ಅಭ್ಯಾಸ ಹಾಳೆ -10 | ಇತಿಹಾಸ ಅಧ್ಯಾಯ 4 | ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು |

I. ಕೊಟ್ಟಿರುವ ಹೇಳಿಕೆಯ ಕೆಳಗೆ ನಾಲ್ಕು ಪರ್ಯಾಯಗಳನ್ನು ನೀಡಲಾಗಿದೆ, ಸರಿಯಾದುದನ್ನು ಆರಿಸಿ ಬರೆಯಿರಿ.

1) ಮೊದಲನೇ ಆಂಗ್ಲೋ ಮೈಸೂರು ಯುದ್ಧವನ್ನು ಕೊನೆಗಾಣಿಸಿದ ಒಪ್ಪಂದ.

A) ಮಂಗಳೂರು

B) ಶ್ರೀರಂಗಪಟ್ಟಣ

C) ಮದ್ರಾಸ್

D) ಸಾಲ್ಬಾಯಿ

ಉತ್ತರ : C) ಮದ್ರಾಸ್

2) ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸಲು ಕಾರಣವಾದ ನೀತಿ.

A) ಸಹಾಯಕ ಸೈನ್ಯ ಪದ್ಧತಿ

B) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

C) ವಿಭಜಿಸಿ ಆಳುವ ನೀತಿ

D) ಮಧ್ಯಸ್ತಿಕೆಯ ನೀತಿ

ಉತ್ತರ : B) ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

3) ಕಿತ್ತೂರನ್ನು ವಶಪಡಿಸಿಕೊಳ್ಳಲೆಬೇಕೆಂಬ ನಿರ್ಧಾರದಿಂದ ದಾಳಿನಡೆಸಿದ ಬ್ರಿಟಿಷರ ಲೆಫ್ಟಿನೆಂಟ್.

A) ಕರ್ನಲ್ ಡಿಕ್

B) ಕ್ಯಾಂಪ್ ಬೆಲ್

C) ಥಾಮಸ್ ಮನ್ರೋ

D) ಥ್ಯಾಕರೆ

ಉತ್ತರ : A) ಕರ್ನಲ್ ಡಿಕ್

 

II. ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.

1) ಎರಡನೇ ಆಂಗ್ಲೋ-ಮೈಸೂರು ಯುದ್ಧವು _ ಒಪ್ಪಂದದೊಂದಿಗೆ ಕೊನೆಗೊಂಡಿತು.

ಉತ್ತರ : ಮಂಗಳೂರು

2) ಕಿತ್ತೂರು ಚೆನ್ನಮ್ಮ __ ಎಂಬ ಹುಡುಗನನ್ನು ದತ್ತು ಪಡೆದಿದ್ದಳು.

ಉತ್ತರ : ಶಿವಲಿಂಗಪ್ಪ

3) ಈಗಿನ ಬಾಗಲಕೋಟೆ ಜಿಲ್ಲೆಯ __ ಬೇಡರು ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು.

ಉತ್ತರ : ಹಲಗಲಿ

4) ಮೊದಲನೇ ಆಂಗ್ಲೋ-ಮೈಸೂರು ಯುದ್ಧವು _ ಒಪ್ಪಂದದೊಂದಿಗೆ ಮುಕ್ತಾಯವಾಯಿತು.

ಉತ್ತರ : ಮದ್ರಾಸ್

5) ಹೈದರಾಲಿಯನ್ನು 1781 ರಲ್ಲಿ ಸೋಲಿಸಿದ ಬ್ರಿಟಿಷ್ ಸೇನಾನಾಯಕ ___

ಉತ್ತರ : ಸರ್ ಐರ್ ಕೂಟ್

6) ಹಲಗಲಿಯಲ್ಲಿ ಬೇಡರು ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸಲು ಕಾರಣ __

ಉತ್ತರ: "ಶಸ್ತ್ರಗಳ ಬಳಕೆಯ ನಿರ್ಬಂಧ" ಕಾನೂನು ಜಾರಿಗೆ ತಂದಿರುವುದು

 

III. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

1) ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನಾಯಕ ಯಾರು?

ಉತ್ತರ :  ಸರ್ ಐರ್ ಕೂಟ್

2) 1781 ರಲ್ಲಿ ಪೋರ್ಟೊ ನೋವೇ ಎಂಬಲ್ಲಿ ನಡೆದ ಕದನದಲ್ಲಿ ಯಾರು ಪರಾಭವಗೊಂಡರು?

ಉತ್ತರ : ಹೈದರಾಲಿ

3) ಭಾರತದ ಚರಿತ್ರೆಯಲ್ಲಿ 18ನೇ ಶತಮಾನವನ್ನು ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲಾಗಿದೆ. ಏಕೆ?

ಉತ್ತರ : ಮೊಘಲ್  ಚಕ್ರವರ್ತಿ ಔರಂಗಜೇಬ ಮರಣ (1707)

ಪ್ರಮುಖವಾದ ಕಾರಣ.

4) ಎರಡನೆಯ ಆಂಗ್ಲೋ-ಮೈಸೂರು ಯುದ್ಧಕ್ಕೆ ಮುಖ್ಯ ಕಾರಣವೇನು?

ಉತ್ತರ : ಬ್ರಿಟಿಷರು ಮಾಹೇ ಯನ್ನು ವಶಪಡಿಸಿಕೊಂಡಿದ್ದು.

5) ಸಂಗೊಳ್ಳಿ ರಾಯಣ್ಣನನ್ನು ಎಲ್ಲಿ ಗಲ್ಲಿಗೇರಿಸಲಾಯಿತು?

ಉತ್ತರ : ನಂದಗಡ

 

IV. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

1) ಕಿತ್ತೂರಿನ ರಾಣಿ ಚೆನ್ನಮ್ಮಳ ಸಾಧನೆಯನ್ನು ವಿವರಿಸಿ. ಅಥವಾ ಕಿತ್ತೂರು ಚೆನ್ನಮ್ಮ ವೀರಯೋದೇ ಎಂದು ಹೇಗೆ ಹೇಳುವಿರಿ.

ಉತ್ತರ : ಶಿವಲಿಂಗರುದ್ರಸರ್ಜನ ಮರಣಾನಂತರ ಶಿವಲಿಂಗಪ್ಪ ಎಂಬ ಹುಡುಗನನ್ನು ದತ್ತು ಪಡೆದು ಚೆನ್ನಮ್ಮ ಆಡಳಿತವನ್ನು ನಿರ್ವಹಿಸಲು ಪ್ರಾರಂಭಿಸಿದಳು.

ಥ್ಯಾಕರೆ ಆಗ ದಾರವಾಡದ ಕಲೆಕ್ಟರ್ ಮತ್ತು ಪೊಲಿಟಿಕಲ್ ಏಜೆಂಟ ನಾಗಿದ್ದನು.

ಅವನು ಬಾಂಬೆಯ ಗೌರ್ನರ್ ನಿಗೆ ದತ್ತಕದ ಬಗ್ಗೆ ವರದಿಯನ್ನು ಸಲ್ಲಿಸಿ.

ದತ್ತು ಮಕ್ಕಳಿಗೆ ಹಕ್ಕನ್ನು ನೀಡುವುದನ್ನು ನಿರಾಕರಿಸಿ ಕಿತ್ತೂರಿನ ಆಡಳಿತವನ್ನು ವಶಪಡಿಸಿಕೊಳ್ಳಲು ಯತ್ನಿಸಿದನು.

ಚೆನ್ನಮ್ಮ ತ್ಯಾಕರೆಯ ಪ್ರಯತ್ನಗಳನ್ನು ವಿಫಲಗೊಳಿಸಲು ಯುದ್ಧವನ್ನು ಅನಿವಾರ್ಯವೆಂದು ಬಗೆಗಳು.

ಬ್ರಿಟಿಷರು ತಮ್ಮ ಸೈನ್ಯವನ್ನು ಸಿದ್ಧ ಮಾಡಲು ಆರಂಭಿಸಿದರು.

ಕಿತ್ತೂರಿನ ಸೈನ್ಯದ ಬ್ರಿಟಿಷ್ ಸೈನ್ಯದ ಮೇಲೆ ದಾಳಿ ಮಾಡಿತು.

ದಾಳಿಯಲ್ಲಿ ತ್ಯಾಕರೆ ಗುಂಡೇಟಿಗೆ ಬಲಿಯಾದ.

ಅನೇಕ ಬ್ರಿಟಿಷ್ ಸೈನಿಕರನ್ನು ಸೆರೆಮನೆಗೆ ದೋಡಲಾಯಿತು.

ಲೆಫ್ಟಿನೆಂಟ್ ಕರ್ನಲ್ ಡಿಕ್ ನೇತೃತ್ವದಲ್ಲಿ ಬ್ರಿಟಿಷ ಸೈನ್ಯ ಕಿತ್ತೂರಿಗೆ ಮುತ್ತಿಗೆ ಹಾಕಿತು.

ಸೈನಿಕರು ವೀರಾವೇಶದಿಂದ ಹೋರಾಡಿದರು.

ಬ್ರಿಟಿಷರ ಸೈನ್ಯದಿಂದ ತಪ್ಪಿಸಿಕೊಂಡ ಚೆನ್ನಮ್ಮನನ್ನು ಸೆರೆಹಿಡಿಯಲಾಯಿತು.

ಕಿತ್ತೂರು ಬ್ರಿಟಿಷರ ವಶವಾಯಿತು.

ಚೆನ್ನಮ್ಮಳನ್ನು ಬೈಲುಹೊಂಗಲ ಕೋಟೆಯಲ್ಲಿ ಸೆರೆಮನೆಯಲ್ಲಿ ಇರಿಸಲಾಯಿತು.

ಇಂದಿಗೂ ಕೂಡ ನಾಡಿಗೆ ಅವಳು ಆದರ್ಶಪ್ರಾಯರಾಗಿದ್ದಾಳೆ.

*****

Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon