Posts

Showing posts with the label 10ನೇ ತರಗತಿ

ಪದ್ಯ-2 ಹಕ್ಕಿ ಹಾರುತಿದೆ ನೋಡಿದಿರಾ? | 10ನೇ ತರಗತಿ ಪ್ರಥಮ ಭಾಷೆ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು | SSLC Kannada Question Ans |

Image
ಪದ್ಯ-2 ಹಕ್ಕಿ ಹಾರುತಿದೆ ನೋಡಿದಿರಾ? | SSLC Kannada Notes | -ದ.ರಾ.ಬೇಂದ್ರೆ ಕೃತಿಕಾರರ ಪರಿಚಯ: ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕ್ರಿ.ಶ. 1896ರಲ್ಲಿ ಧಾರವಾಡ ಜಿಲ್ಲೆಯ ಸಾಧನಕೇರಿಯಲ್ಲಿ ಜನಿಸಿದರು. ಗರಿ, ಗಂಗಾವತರಣ, ನಾದಲೀಲೆ, ಮೇಘದೂತ, ಸಖೀಗೀತ, ಸೂರ್ಯಪಾನ, ನಗೆಯ ಹೊಗೆ, ಸಾಹಿತ್ಯವಿರಾಟ್ ಸ್ವರೂಪ ಮೊದಲಾದವು ಇವರು ಬರೆದ ಪ್ರಮುಖ ಕೃತಿಗಳು. ಇವರ ಅರಳು-ಮರಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಪ್ರಸ್ತುತ ಹಕ್ಕಿ ಹಾರುತಿದೆ ನೋಡಿದಿರಾ? ಪದ್ಯಭಾಗವನ್ನು ಇವರ ಗರಿ ಕವನ ಸಂಕಲನದಿಂದ ಆರಿಸಲಾಗಿದೆ. Video Lesson I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ? ಉ: ಹಕ್ಕಿಯು ಕಣ್ಣುರೆಪ್ಪೆ ಮುಚ್ಚಿ ತೆರೆಯುವ ವೇಗದಲ್ಲಿ ಹಾರುತ್ತಿದೆ. 2. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ? ಉ: ಹಕ್ಕಿಯ ಗರಿಯಲ್ಲಿ ಬಿಳಿ ಹೊಳೆ ಬಣ್ಣಗಳಿವೆ. 3. ಹಕ್ಕಿಯ ಕಣ್ಣುಗಳು ಯಾವುವು? ಉ: ಹಕ್ಕಿಯ ಕಣ್ಣುಗಳು ಸೂರ್ಯಚಂದ್ರರು. 4. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ? ಉ: ಹಕ್ಕಿಯು ಸಾರ್ವಭೌಮರ ನೆತ್ತಿಯನ್ನು ಕುಕ್ಕಿದೆ. 5. ಹಕ್ಕಿ ಯಾರನ್ನು ಹರಸಿದೆ? ಉ: ಹಕ್ಕಿಯು ಹೊಸಗಾಲದ ಹಸುಮಕ್ಕಳನ್ನು ಹರಸಿದೆ. 6. ಹಕ್ಕಿಯು ಯವುದರ ಸಂಕೇತವಾಗಿದೆ? ಉ: ಹಕ್ಕಿಯು ಕ

ಪದ್ಯ-1- ಸಂಕಲ್ಪಗೀತೆ | ಜಿ.ಎಸ್.ಶಿವರುದ್ರಪ್ಪ | 10ನೇ ತರಗತಿ ಪ್ರಥಮ ಭಾಷೆ ಕನ್ನಡ ಅಭ್ಯಾಸ ಪ್ರಶ್ನೋತ್ತರಗಳು |

Image
ಪದ್ಯ-1- ಸಂಕಲ್ಪಗೀತೆ | 10ನೇ ತರಗತಿ ಕನ್ನಡ ನೋಟ್ಸ್ | ಅಭ್ಯಾಸ ಪ್ರಶ್ನೋತ್ತರಗಳು | ಜಿ.ಎಸ್.ಶಿವರುದ್ರಪ್ಪ ಕೃತಿಕಾರರ ಪರಿಚಯ: ಜಿ.ಎಸ್.ಶಿವರುದ್ರಪ್ಪ ಎಂದು ಪ್ರಸಿದ್ಧರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪನವರ ಕಾಲ 7-2-1926ರಿಂದ 23-12-2013. ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ಇವರು ಸಾಮಗಾನ, ಚೆಲುವು ಒಲವು, ದೇವ ಶಿಲ್ಪಿ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೋದಲ್ಲಿ ಇಪ್ಪತ್ತೆರಡುದಿನಗಳು, ಸೌಂದರ್ಯಸಮೀಕ್ಷೆ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ಕಾವ್ಯಾರ್ಥ ಚಿಂತನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರು ನಾಡೋಜ, ರಾಷ್ಟ್ರಕವಿ ಮತ್ತು ಪಂಪ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪ್ರಸ್ತುತ ಸಂಕಲ್ಪಗೀತೆ ಪದ್ಯಭಾಗವನ್ನು –ಎದೆತುಂಬಿಹಾಡಿದೆನು ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ. Video Lesson I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು? ಉ: ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಎಚ್ಚರದಲಿ ಮುನ್ನಡೆಸಬೇಕು. 2. ನದೀಜಲಗಳು ಏನಾಗಿವೆ? ಉ: ನದೀಜಲಗಳು ಕಲುಷಿತವಾಗಿವೆ. 3.ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು? ಉ: ಕಲುಷಿತವಾದ ನದೀಜಲಗಳಿಗೆ ಮುಂಗಾರಿನ ಮಳೆಯಾಗಬೇಕು. 4. ಕಾಡುಮೇಡುಗಳ ಸ್ಥಿತಿ ಹೇಗಿದೆ? ಉ: ಕಾಡುಮೇಡುಗಳು ಬರಡಾದ ಸ್ಥಿತಿ ತಲುಪಿವೆ. 5. ಯಾವ ಎಚ್ಚರದೊಳು ಬದುಕಬೇಕಿದೆ? ಉ: ಮತಗಳೆಲ್ಲವೂ ಪಥಗಳು ಎನ್ನುವ

ಗದ್ಯಪಾಠ-8- ವೃಕ್ಷಸಾಕ್ಷಿ ಅಭ್ಯಾಸ ಪ್ರಶ್ನೋತ್ತರಗಳು | ದುರ್ಗಸಿಂಹ | 10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್ |

Image
ಗದ್ಯಪಾಠ-8- ವೃಕ್ಷಸಾಕ್ಷಿ | 10th First Language Kannada Question Answers | Video Lesson -ದುರ್ಗಸಿಂಹ ಕೃತಿಕಾರರ ಪರಿಚಯ: ದುರ್ಗಸಿಂಹನ ಕಾಲ ಸುಮಾರು ಕ್ರಿ.ಶ.1031. ಇವನು ಗದಗ ಜಿಲ್ಲೆಯ ರೋಣ ತಾಲ್ಲೋಕಿನ ಕಿಸುಕಾಡುನಾಡಿನ ಸಯ್ಯಡಿಯವನು. ಇವನು ಕರ್ನಾಟಕ ಪಂಚತಂತ್ರಂ ಎಂಬ ಕೃತಿಯನ್ನು ರಚಿಸಿದ್ದಾನೆ. ಪ್ರಸ್ತುತ ವೃಕ್ಷಸಾಕ್ಷಿ ಗದ್ಯಭಾಗವನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಗುಂಡ್ಮಿ ಚಂದ್ರಶೇಖರ ಐತಾಳರು ಸಂಪಾದಿಸಿರುವ ಕರ್ನಾಟಕ ಪಂಚತಂತ್ರ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ಹೊಸಗನ್ನಡ ರೂಪ: ಮಧುರಾ ನಗರದಲ್ಲಿದ್ದ ಧರ್ಮಬುದ್ಧಿ ಮತ್ತು ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿಗಳ ಮಕ್ಕಳು ಒಟ್ಟಿಗೆ ವ್ಯಾಪಾರಕ್ಕಾಗಿ ಹೋಗಿ ಬಹಳಷ್ಟು ಸಂಪತ್ತು (ಹೊನ್ನು) ಪಡೆದು ಹಿಂದಿರುಗಿ ಪುನಃ ತಮ್ಮ ಹುಟ್ಟೂರಾದ ಮಧುರಾಪುರದ ಹೊರವಲಯದ ಹೂದೋಟದಲ್ಲಿ ಬೀಡು ಬಿಟ್ಟರು. ಅರ್ಧರಾತ್ರಿಯಾದಾಗ ಧರ್ಮಬುದ್ಧಿಯು ದುರ್ಬುದ್ಧಿಯವನಾದ ದುಷ್ಟಬುದ್ಧಿಯನ್ನು ಕರೆದು ಗಳಿಸಿರುವ ಹೊನ್ನನ್ನು ಪಾಲು ಮಾಡಿಕೊಳ್ಳೋಣ ಎನ್ನಲು ದುಷ್ಟಬುದ್ಧಿಯು ಪಾಪಬುದ್ಧಿಯನ್ನು ಹೊಂದಿದವನಾಗಿ ಹೀಗೆಂದನು. ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರುವವರು ಅಲ್ಲ. ಮತ್ತೆ ವ್ಯಾಪಾರಕ್ಕೆ ಹೋಗಬೇಕು. ಆದ ಕಾರಣದಿಂದ ನಿನಗೂ ನನಗೂ ವೆಚ್ಚಕ್ಕೆ ಬೇಕಾಗುವಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಡೋಣ ಎಂದನು. ಧರ್ಮಬುದ್ಧಿಯು ಆ ಪ

ಗದ್ಯಪಾಠ- 7- ಶ್ರೇಷ್ಠ ಭಾರತೀಯ ಚಿಂತನೆಗಳು | 10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್ | 10ನೇ ತರಗತಿ ಪ್ರಶ್ನೋತ್ತರಗಳು | ಶತಾವಧಾನಿ ಡಾ.ಆರ್.ಗಣೇಶ್

Image
ಗದ್ಯಪಾಠ-7-ಶ್ರೇಷ್ಠ ಭಾರತೀಯ ಚಿಂತನೆಗಳು | SSLC First Language Kannada Lesson 7 | Video Lesson -ಶತಾವಧಾನಿ ಡಾ.ಆರ್.ಗಣೇಶ್ ಕೃತಿಕಾರರ ಪರಿಚಯ:  ಶತಾವಧಾನಿ ಡಾ.ಆರ್.ಗಣೇಶ್ರವರು ಕೋಲಾರದವರು. ಇವರು ಕರ್ನಾಟಕದಲ್ಲಿ ಕಣ್ಮರೆಯಾಗಿದ್ದ “ಅವಧಾನʼ ಕಲೆಯನ್ನು ಪುನರುಜ್ಜೀವನ ಮಾಡಿದ್ದಾರೆ. ಇದುವರೆಗೆ 1200ಕ್ಕೂ ಹೆಚ್ಚು ಅಷ್ಟಾವಧಾನಗಳನ್ನು, ಐದು ಶತಾವಧಾನಗಳನ್ನು ನಡೆಸಿದ್ದಾರೆ. ಕನ್ನಡ, ತೆಲಗು, ಸಂಸ್ಕೃತ, ಪ್ರಾಕೃತ, ಪಾಲಿ ಮೊದಲಾದ ಭಾರತೀಯ ಭಾಷೆಗಳಲ್ಲಿ ಪರಿಣತಿ ಗಳಿಸಿರುವ ಇವರು ಗ್ರೀಕ್ ಮೊದಲಾದ ಪಾಶ್ಚಾತ್ಯ ಭಾಷೆಗಳ ಪರಿಚಯವನ್ನೂ ಹೊಂದಿದ್ದಾರೆ. ಅರವತ್ತಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಆರ್ಷಕಾವ್ಯಗಳ ನುಡಿಬೆಡಗು, ಷಡ್ದರ್ಶನ ಸಂಗ್ರಹ, ಭಾರತೀಲೋಚನ, ಬ್ರಹ್ಮಪುರಿಯ ಭಿಕ್ಷುಕ, ನಿತ್ಯನೀತಿ, ಭಾರತೀಯ ಕ್ಷಾತ್ರಪರಂಪರೆ, ಕಲಾಕೌತುಕ ಮುಂತಾದವು ಇವರ ಕನ್ನಡ ಕೃತಿಗಳು. “ಮಣ್ಣಿನ ಕನಸು ಇವರು ಬರೆದಿರುವ ವಿಶಿಷ್ಟ ಕಾದಂಬರಿ.” “ಕನ್ನಡದಲ್ಲಿ ಅವಧಾನ ಕಲೆ” ಎಂಬ ಅವರ ಮಹಾಪ್ರಬಂಧಕ್ಕೆ ಹಂಪಿ ವಿಶ್ವವಿದ್ಯಾಲಯವು ತನ್ನ ಪ್ರಪ್ರಥಮ ಡಿ.ಲಿಟ್.ಪದವಿಯನ್ನು ನೀಡಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಪತಿಗಳು ನೀಡುವ ಬಾದರಾಯಣ ವ್ಯಾಸ ಸಮ್ಮಾನವೇ ಮೊದಲಾದ ಅನೇಕ ಪ್ರಶಸ್ತಿಗಳು ಇವರನ್ನು ಅಲಂಕರಿಸಿವೆ. I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಧರ್ಮ ಎಂದು ನಮ್ಮ ಪರಂಪರೆ ಯಾವುದನ್ನು ಒಕ್ಕಣಿಸಿದೆ? ಉ: ಒಮ್ಮೆ ನಾವು ನಮ್ಮ

ಗದ್ಯ-6 | ಎದೆಗೆ ಬಿದ್ದ ಅಕ್ಷರ | ದೇವನೂರ ಮಹದೇವ | 10th Kannada Gadya 6 Edege Bidda Akshara | Devanuru Mahadev |

Image
ಗದ್ಯ- 6 : ಎದೆಗೆ ಬಿದ್ದ ಅಕ್ಷರ-ದೇವನೂರ ಮಹದೇವ Video Lesson ಕೃತಿಕಾರರ ಪರಿಚಯ: ದೇವನೂರ ಮಹಾದೇವ ಅವರು ಕ್ರಿ.ಶ. 1948ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೊ, ನಂಬಿಕೆಯ ನೆಂಟ, ನೋಡು ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರ ಕುಸುಮಬಾಲೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪ್ರಶಸ್ತಿ ದೊರಿತಿದೆ. ಪ್ರಸ್ತುತ ಎದೆಗೆ ಬಿದ್ದ ಅಕ್ಷರ ಗದ್ಯಭಾಗವನ್ನು ಇವರ ಎದೆಗೆ ಬಿದ್ದ ಅಕ್ಷರ ಕೃತಿಯಿಂದ ಆರಿಸಲಾಗಿದೆ. I. ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವುವು? ಉ: ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಇವು ಇಂದಲ್ಲ ನಾಳೆ ಫಲ ಕೊಡುವ ಅಂಶಗಳು. 2. ಮನೆ ಮಂಚಮ್ಮ ಯಾರು? ಉ: ಮನೆ ಮಂಚಮ್ಮ ಊರಿನ ಗ್ರಾಮ ದೇವತೆ. 3. ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು? ಉ: ಮನೆ ಮಂಚಮ್ಮನ ಕತೆ ಹೇಳಿದ ಕವಿ ಸಿದ್ದಲಿಂಗಯ್ಯ. 4. “ಶಿವಾನುಭವ ಶಬ್ದಕೋಶ” ಪುಸ್ತಕ ಬರೆದವರು ಯಾರು? ಉ: “ಶಿವಾನುಭವ ಶಬ್ದಕೋಶ” ಪುಸ್ತಕ ಬರೆದವರು ಹಳಕಟ್ಟಿಯವರು. (ಫ.ಗು.ಹಳಕಟ್ಟಿ) 5. ವಚನಕಾರರಿಗೆ ಯಾವುದು ದೇವರಾಗಿತ್ತು? ಉ: ವಚನಕಾರರಿಗೆ ಅವರವರ ಇಷ್ಟದೈವ ಅಂದರೆ ಅವರಿಗೆ ಅವರವರ ಪ್ರಜ್ಞೆಯೇ ದೇವರಾಗಿತ್ತು. 6. ಅಶೋಕ ಪೈ ಅವರ ವೃತ್ತಿ ಯಾವುದು? ಉ: ಅಶೋಕ ಪೈ ಅವರ

ಗದ್ಯ-5 ನಿಜವಾದ ಆದರ್ಶ ಪುರುಷ ಯಾರಾಗಬೇಕು? | ಕೇಶವ ಬಲಿರಾಮ ಹೆಡಗೇವಾರ | Gady 5 Nijavada Adarsha Purusha Yaragabeku | Keshava Baliram Hedagevar

Image
ಗದ್ಯಪಾಠ-5 ನಿಜವಾದ ಆದರ್ಶ ಪುರುಷ ಯಾರಾಗಬೇಕು? -ಕೇಶವ ಬಲಿರಾಮ ಹೆಡಗೇವಾರ Video Lesson ಗಾಗಿ ಇಲ್ಲಿ ಕ್ಲಿಕ್ ಮಾಡಿ ಕೃತಿಕಾರರ ಪರಿಚಯ:  ಕೇಶವ ಬಲಿರಾಮ ಹೆಡಗೇವಾರರು ವಿಶ್ವದ ಅತಿದೊಡ್ಡ ಸ್ವಯಂ ಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರು. ಇವರು 1889ರಲ್ಲಿ ಏಪ್ರಿಲ್ 1 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು. ಇವರು ಸ್ವಾಮಿ ವಿವೇಕಾನಂದರು, ಶ್ರೀ ಅರವಿಂದರು ಹಾಗೂ ವಿನಾಯಕ ದಾಮೋದರ ಸಾವರ್ಕರರ ಚಿಂತನೆಗಳಿಂದ ಪ್ರಭಾವಿತರಾದರು. ತಿಲಕರ ಸ್ವರಾಜ್ಯ ಹೋರಾಟದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಅವರು ಪ್ರಾರಂಭಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದು ಸರಿಸುಮಾರು 60 ಲಕ್ಷ ಸದಸ್ಯರನ್ನು ಒಳಗೊಂಡಿದೆ. ಪ್ರಸ್ತುತ ಪಾಠವನ್ನು ಅವರ ಪ್ರೇರಣಾ ಎನ್ನುವ ಕೃತಿಯಿಂದ ಆರಿಸಲಾಗಿದೆ. I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ಯಾವುದು ಎಂದೆಂದೂ ನಮ್ಮ ಆದರ್ಶವಾಗಿರಬೇಕು? ಉ: ತತ್ವವೇ ಎಂದೆಂದೂ ನಮ್ಮ ಆದರ್ಶವಾಗಿರಬೇಕು. 2. ಯಾವ ವ್ಯಕ್ತಿ ನಮಗೆ ಆದರ್ಶವಾಗಬಲ್ಲನು? ಉ: ನಮ್ಮಿಂದ ಎಂದೂ ದೂರವಾಗದಂತಹ ಹಾಗೂ ನಾವೂ ಆತನಿಂದ ದೂರ ಹೋಗದಂಥ ವ್ಯಕ್ತಿಯೇ ನಮ್ಮ ಆದರ್ಶವಾಗಬಲ್ಲನು. 3. ಗುರು ಪೂರ್ಣಿಮಾ ದಿನದಂದು ಲೇಖಕರು ಯಾರನ್ನು ಪೂಜಿಸುತ್ತಾರೆ? ಉ:  ಗುರು ಪೂರ್ಣಿಮಾ ದಿನದಂದು ಲೇಖಕರು ಧ್ವಜವನ್ನೇ ಗುರುವೆಂದು ಭಾವಿಸಿ ಪೂಜಿಸುತ್ತಾರೆ. 4. ತಿಲಕರನ್ನು ಯಾವ ರೀತಿ ಚಿತ್ರ

ಗದ್ಯ-4 ಭಾಗ್ಯಶಿಲ್ಪಿಗಳು ನೋಟ್ಸ್ | ನಾಲ್ವಡಿ ಕೃಷ್ಣರಾಜ ಒಡೆಯರು | Gadya 4 Bhagyashilpigalu Notes | 10th First Language Kannada Notes

Image
ಗದ್ಯಪಾಠ – 4 ಭಾಗ್ಯಶಿಲ್ಪಿಗಳು 1. ನಾಲ್ವಡಿ ಕೃಷ್ಣರಾಜ ಒಡೆಯರು, (ಸಮಿತಿ ರಚನೆ) 2. ಸರ್ ಎಂ. ವಿಶ್ವೇಶ್ವರಯ್ಯ  -ಡಿ.ಎಸ್.ಜಯಪ್ಪಗೌಡ ಕೃತಿಕಾರರ ಪರಿಚಯ: ಡಿ.ಎಸ್.ಜಯಪ್ಪಗೌಡ ಅವರ ಕಾಲ 1947. ಇವರು ಚಿಕ್ಕಮಗಳೂರು ಜಿಲ್ಲೆಯ ದಾರದ ಹಳ್ಳಿಯವರು. ಇವರು ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಮೈಸೂರು ಒಡೆಯರು, ಜನಪದ ಆಟಗಳು, ದಿವಾನ್ ಸರ್ ಎಂ.ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ ಇವರು ಭಾಜನರಾಗಿದ್ದಾರೆ. ಪ್ರಸ್ತುತ ಗದ್ಯಭಾಗದ ಸರ್.ಎಂ.ವಿಶ್ವೇಶ್ವರಯ್ಯ ಲೇಖನವನ್ನು ಡಿ.ಎಸ್.ಜಯಪ್ಪಗೌಡರ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು  ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. ವಿಡಿಯೋ ಪಾಠ ವೀಕ್ಷಿಸಿ I. ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ: 1. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು? ಉ: ನಾಲ್ವಡಿ ಕೃಷ್ಣರಾಜ ಒಡೆಯರು ಕ್ರಿ.ಶ.1895ರಲ್ಲಿ ತಮ್ಮ 10ನೇ ವಯಸ್ಸಿನಲ್ಲಿ ಪಟ್ಟಾಭಿಷಿಕ್ತರಾದರು. 2. ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು? ಉ: ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಕಂಕಣಬದ್ಧರಾದರು. 3

Middle Adds

amezon