KSEEB Model Question Paper-2 With Answers Part-4 | 10th Social Science Question Paper Model Ans |
IV. ಈ ಪ್ರಶ್ನೆಗಳಿಗೆ ಪ್ರತಿಯೊಂದಕ್ಕೂ 3 ರಿಂದ 6 ವಾಕ್ಯಗಳಲ್ಲಿ ಉತ್ತರಿಸಿ. 9 X 3 = 27
25. ಬ್ರಿಟಿಷ್ ಶಿಕ್ಷಣದಿಂದ ಭಾರತದ ಮೇಲಾದ ಪರಿಣಾಮಗಳನ್ನು ವಿವರಿಸಿ?
· ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ರಾಷ್ಟ್ರೀಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಾಧ್ಯವಾಯಿತು.
· ಸ್ಥಳೀಯ ಭಾಷೆ ಮತ್ತು ಸಾಹಿತ್ಯ ರಚನೆಗೆ ಪ್ರೋತ್ಸಾಹ
· ವೃತ್ತ ಪತ್ರಿಕೆಗಳ ಬೆಳವಣಿಗೆ
· ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳುವಳಿಗಳ ಹುಟ್ಟು
· ಜೆ.ಎಸ್.ಮಿಲ್, ರೂಸೋ, ಮಾಂಟೆಸ್ಕೋರವರ ಚಿಂತನೆಗಳಿಂದ ಪ್ರಭಾವ
· ವಿಶ್ವದ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲೆ ಉಂಟಾಯಿತು
· ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿಯಲು ಸಾಧ್ಯವಾಯಿತು.
25. ಬ್ರಿಟಿಷ್ ಶಿಕ್ಷಣದಿಂದ ಭಾರತದ ಮೇಲಾದ ಪರಿಣಾಮಗಳನ್ನು ವಿವರಿಸಿ?
· ಭಾರತೀಯರು ಆಧುನಿಕತೆ, ಜಾತ್ಯಾತೀತತೆ, ಪ್ರಜಾಪ್ರಭುತ್ವ, ರಾಷ್ಟ್ರೀಯ ದೃಷ್ಟಿಕೋನ ಬೆಳೆಸಿಕೊಳ್ಳಲು ಸಾಧ್ಯವಾಯಿತು.
· ಸ್ಥಳೀಯ ಭಾಷೆ ಮತ್ತು ಸಾಹಿತ್ಯ ರಚನೆಗೆ ಪ್ರೋತ್ಸಾಹ
· ವೃತ್ತ ಪತ್ರಿಕೆಗಳ ಬೆಳವಣಿಗೆ
· ಸಾಮಾಜಿಕ & ಧಾರ್ಮಿಕ ಸುಧಾರಣಾ ಚಳುವಳಿಗಳ ಹುಟ್ಟು
· ಜೆ.ಎಸ್.ಮಿಲ್, ರೂಸೋ, ಮಾಂಟೆಸ್ಕೋರವರ ಚಿಂತನೆಗಳಿಂದ ಪ್ರಭಾವ
· ವಿಶ್ವದ ಸ್ವಾತಂತ್ರ್ಯ ಚಳುವಳಿಗಳ ಪ್ರಭಾವ ಭಾರತೀಯರ ಮೇಲೆ ಉಂಟಾಯಿತು
· ಭಾರತೀಯರು ತಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆಗಳನ್ನು ಅರಿಯಲು ಸಾಧ್ಯವಾಯಿತು.
26. ಮೂರನೇ ಆಂಗ್ಲೋ ಮೈಸೂರು ಯುದ್ಧದ ಪರಿಣಾಮಗಳೇನು?
· ಶ್ರೀರಂಗಪಟ್ಟಣ ಒಪ್ಪಂದಕ್ಕೆ ಸಹಿ
· ಟಿಪ್ಪುವನ್ನು ಮಣಿಸಲು ಅಸಮಾನ ಷರತ್ತುಗಳು
· ಟಿಪ್ಪು ತನ್ನ ಅರ್ಧ ರಾಜ್ಯ ಬಿಟ್ಟುಕೊಡುವುದು
· ಮೂರು ಕೋಟಿ ರೂಪಾಯಿ ಯುದ್ಧನಷ್ಟ ಭರ್ತಿ ಮಾಡುವುದು
· ಯುದ್ಧನಷ್ಟ ಭರ್ತಿಗೆ ಗ್ಯಾರಂಟಿಯಾಗಿ ಇಬ್ಬರು ಮಕ್ಕಳ ಒತ್ತೆಯಾಗಿ ಇಡುವುದು
· ಯುದ್ಧ ಸಂದರ್ಭದಲ್ಲಿ ಸೆರೆ ಹಿಡಿದಿದ್ದ ಸೈನಿಕರ ಬಿಡುಗಡೆ
· ಬ್ರಿಟಿಷ್ ಸೈನ್ಯದ ಹಿಂತೆಗೆತ
ಅಥವಾ
ಭಾರತಕ್ಕೆ ಅನಿಬೆಸೆಂಟರ ಕೊಡುಗೆಗಳೇನು?
· ಭಗವದ್ಗೀತೆಯನ್ನು ಇಂಗ್ಲಿಷ್ ಗೆ ಅನುವಾದ ಮಾಡಿ ಶ್ವೇತ ಸರಸ್ವತಿ ಎನಿಸಿದರು
· ಎಲ್ಲ ವರ್ಗಗಳಿಗೂ ಶಿಕ್ಷಣವನ್ನು ಪ್ರತಿಪಾದಿಸಿ ಶಾಲೆಗಳನ್ನು ತೆರೆದರು
· ಬನಾರಸ್ ನಲ್ಲಿ ಹಿಂದೂ ಸೆಂಟ್ರಲ್ ಕಾಲೇಜು ಪ್ರಾರಂಭಿಸಿದರು
· ನ್ಯೂ ಇಂಡಿಯಾ ಮತ್ತು ಕಾಮನ್ ವ್ಹೀಲ್ ಪತ್ರಿಕೆಗಳ ಪ್ರಾರಂಭ
· 1916ರಲ್ಲಿ ಹೋಮ್ ರೂಲ್ ಚಳುವಳಿಯ ಪ್ರಾರಂಭ
· ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷೆಯಾಗಿದ್ದರು
27. 1857ರ ಕ್ರಾಂತಿಗೆ ಕಾರಣವಾದ ಆರ್ಥಿಕ ಅಂಶಗಳನ್ನು ಪಟ್ಟಿಮಾಡಿರಿ.
· ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮ
· ಭಾರತದ ಕರಕುಶಲತೆ & ದೇಶೀಯ ಕೈಗಾರಿಕೆಗಳ ನಾಶ
· ಭಾರತದ ಕರಕುಶಲಗಾರರು ನಿರುದ್ಯೋಗಿಗಳಾದರು
· ಬಟ್ಟೆ & ಉಣ್ಣೆ ಕೈಗಾರಿಕೆಗಳ ಅವನತಿ
· ಗೃಹ ಕೈಗಾರಿಕೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೊಳಗಾದವು
· ಭಾರತದ ವಸ್ತುಗಳ ಮೇಲೆ ದುಬಾರಿ ಸುಂಕ
· ಜಮೀನ್ದಾರನು ರೈತರನ್ನು ಶೋಷಿಸುತ್ತಿದ್ದನು
· ತಾಲ್ಲೂಕುದಾರರಿಗಿದ್ದ ಕಂದಾಯ ವಸೂಲಿ ಹಕ್ಕನ್ನು ಹಿಂಪಡೆಯಲಾಯಿತು
· ಇನಾಂ ಆಯೋಗ ನೇಮಕ- ಇನಾಂ ಭೂಮಿ ವಾಪಸು ಪಡೆಯಲಾಯಿತು
· ಕೃಷಿಕರಿಗೆ ತೀವ್ರ ಅವಮಾನ & ಆರ್ಥಿಕ ಸಂಕಷ್ಟ
28. ಭಾರತ ಮತ್ತು ರಷ್ಯಾಗಳ ನಡುವಿನ ಸಂಬಂಧಗಳನ್ನು ವಿವರಿಸಿ.
· ಭಾರತವು ರಷ್ಯಾದೊಂದಿಗೆ ಉತ್ತಮ ಸಂಬಂಧ ಹೊಂದಿದೆ
· 1962ರ ಚೈನಾ ದಾಳಿಯನ್ನು ರಷ್ಯಾ ಖಂಡಿಸಿತು
· 1961ರಲ್ಲಿ ಗೋವಾ ವಿಮೋಚನೆಯ ಸಂದರ್ಭದಲ್ಲಿ ರಷ್ಯಾ ಸಹಕರಿಸಿತು
· 1966ರಲ್ಲಿ ತಾಷ್ಕೆಂಟ್ ನಲ್ಲಿ ಭಾರತ – ಪಾಕಿಸ್ತಾನಗಳ ಮಧ್ಯೆ ಒಪ್ಪಂದಕ್ಕೆ ಸಹಕಾರ
· 1971ರಲ್ಲಿ ಭಾರತ & ರಷ್ಯಾಗಳು 20 ವರ್ಷಗಳ ಶಾಂತಿ, ಮೈತ್ರಿ & ಸಹಕಾರ ಒಪ್ಪಂದಕ್ಕೆ ಸಹಿ
· ಭಾರತದ ಭಿಲೈ & ಬೊಕಾರೋ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ರಷ್ಯಾ ಸಹಕಾರ
· ರಾಷ್ಟ್ರದ ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಗೆ ನೆರವು
· ವಿಶ್ವ ಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ ನೀಡಲು ಆಗ್ರಹ
29. ಅಸ್ಪೃಶ್ಯತೆ ನಿವಾರಣೆಗೆ ಕೈಗೊಂಡಿರುವ ಕಾನೂನು ಕ್ರಮಗಳನ್ನು ವಿವರಿಸಿ.
· ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಿದೆ.
· 1955ರಲ್ಲಿ ಅಸ್ಪೃಶ್ಯತೆ ಅಪರಾಧಗಳ ಕಾಯ್ದೆ ಜಾರಿ
· 1976ರಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ ಜಾರಿ
· ಎಲ್ಲ ನಾಗರಿಕರಿಗೆ ಸಮಾನ ಅವಕಾಶ
· ಪ.ಜಾ, ಪ.ಪಂ & ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ & ಉದ್ಯೋಗ ಮೀಸಲಾತಿ
· 1989 ಶಾಸನದನ್ವಯ ರಾಜ್ಯ ಸರ್ಕಾರಗಳಿಗೆ ವಿಶೇಷ ಜವಾಬ್ದಾರಿ
30. ದೇಶದ ಅಭಿವೃದ್ಧಿಯಲ್ಲಿ ಸಂಪರ್ಕದ ಪ್ರಾಮುಖ್ಯತೆಯನ್ನು ವಿವರಿಸಿ.
· ಸರ್ಕಾರದ ನೀತಿ & ಅಭಿವೃದ್ಧಿ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸಹಾಯಕ
· ನೈಸರ್ಗಿಕ ವಿಪತ್ತು, ಹವಾಗುಣದ ಬಗ್ಗೆ ಮುನ್ನೆಚ್ಚರಿಕೆ ಸಾದ್ಯ
· ಕೃಷಿಯ ಪ್ರಗತಿ
· ಕೈಗಾರಿಕಾ ಪ್ರಗತಿಗೆ ಉತ್ತೇಜನ
· ವ್ಯಾಪಾರ & ವಾಣಿಜ್ಯ ಪ್ರಗತಿ
· ಕೈಗಾರಿಕಾ ಪ್ರಗತಿಗೆ ಉತ್ತೇಜನ
· ಮನೋರಂಜನೆ
· ಪ್ರಪಂಚದ ಪ್ರತಿನಿತ್ಯದ ಮಾಹಿತಿ ಒದಗಿಸುವುದು
· ದೇಶದ ಏಕತೆ ಮತ್ತು ಸಮಗ್ರತೆ ನಿರ್ವಹಣೆ
ಅಥವಾ
ಕೈಗಾರಿಕೆಗಳು ಕೆಲವೇ ಪ್ರದೇಶಗಳಲ್ಲಿ ಸ್ಥಾನೀಕರಣಗೊಂಡಿವೆ ಏಕೆ?
· ಕಚ್ಚಾವಸ್ತುಗಳ ಸರಬರಾಜು
· ಶಕ್ತಿಸಂಪನ್ಮೂಲಗಳ ಪೂರೈಕೆ
· ಸಾರಿಗೆ & ಸಂಪರ್ಕ ವ್ಯವಸ್ಥೆ
· ಮಾರುಕಟ್ಟೆ ಸೌಲಭ್ಯ
· ಬಂಡವಾಳ
· ಕಾರ್ಮಿಕರು ಮತ್ತು ನೀರು ದೊರೆಯುವಿಕೆ
· ಸೂಕ್ತವಾಯುಗುಣ
· ಸರ್ಕಾರದ ನೀತಿಗಳು
31. ಭೂಕಂಪಗಳಿಂದಾಗುವ ಪರಿಣಾಮಗಳನ್ನು ಹೇಗೆ ಮಿತಗೊಳಿಸಬಹುದು?
· ಭೂಕಂಪನ ವಲಯಗಳಲ್ಲ; ಜನವಸತಿ ನಿರ್ಮಾಣ ನಿಷೇಧ
· ಭೂಕಂಪನ ನಿರೋಧಕ ಕಟ್ಟಡಗಳ ನಿರ್ಮಾಣ
· ಬಹುಮಹಡಿ ಕಟ್ಟಡ ನಿರ್ಮಾಣ ಕೈಬಿಡುವುದು
· ಆಳ ಬಾವಿಗಳ ಕೊರೆತ ನಿಷೇಧ
· ಭೂಕಂಪನ ಬೆಟ್ಟಗುಡ್ಡ ಪ್ರದೇಶಗಳಲ್ಲಿ ನಗರ ನಿರ್ಮಾಣ ನಿಷೇಧ
· ಬಹುದೊಡ್ಡ ಅಣೆಕಟ್ಟು & ಜಲಾಶಯಗಳ ನಿರ್ಮಾಣ ನಿಷೇಧ
· ಅರಣ್ಯ ನಾಶ & ಗಣಿಗಾರಿಕೆ ಚಟುವಟಿಕೆಗಳಿಗೆ ತಡೆ
· ಭೂಕಂಪನ ಸಂಭವಿಸಿದಾಗ ಪರಿಹಾರ ಕಾರ್ಯ ಉದಾ: ಆಹಾರ, ವಸತಿ, ರೋಗ ನಿಯಂತ್ರಣ
32. ಸ್ವಸಹಾಯ ಸಂಘಗಳ ಕಾರ್ಯಗಳನ್ನು ತಿಳಿಸಿ.
· ಸಣ್ಣ ಉಳಿತಾಯ ಸಂಗ್ರಹ
· ಉತ್ಪಾದಕ ಚಟುವಟಿಕೆಗಳು
· ಸಾಲವಸೂಲಾತಿ
· ಕುಡಿತ, ಜೂಜು, ವರದಕ್ಷಿಣೆ, ಬಾಲ್ಯ ವಿವಾಹಗಳ ವಿರುದ್ಧ ಸಂಘಟಿತ ಹೋರಟ
· ಆರ್ಥಿಕ ಸ್ವಾವಲಂಬನೆ
· ಸ್ವಚ್ಛ ಮತ್ತು ಪ್ರಗತಿಪರ ಸಮಾಜ ನಿರ್ಮಾಣ
· ಪಂಚಾಯತ ರಾಜ್ಯ ಸಂಸ್ಥೆಗಳಲ್ಲಿ ಅವಕಾಶ
ಅಥವಾ
ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಲಕ್ಷಣಗಳನ್ನು ತಿಳಿಸಿ.
· ಗ್ರಾಮ, ತಾಲ್ಲೂಕು & ಜಿಲ್ಲಾ ಪಂಚಾಯತಿಗಳು
· ನೇರ & ನಿಯಮಿತ ಚುನಾವಣೆಗಳು
· ಪ.ಜಾ, ಪ.ಪಂ, ಹಿಂದುಳಿದ ವರ್ಗ & ಮಹಿಳಾ ಮೀಸಲಾತಿ
· ಹಣಕಾಸು & ಆಡಳಿತಾತ್ಮಕ ಜವಾಬ್ದಾರಿಗಳು
· ಕಾರ್ಯನಿರ್ವಾಹಕ & ಇತರ ಸಿಬ್ಬಂದಿ ನೀಡಿಕೆ
· ಪಂಚಾಯತಿ ವಿಸರ್ಜನಾ ಕ್ರಮಗಳು
33. ಬ್ಯಾಂಕು ಖಾತೆ ತೆರೆಯುವುದರಿಂದಾಗುವ ಅನುಕೂಲತೆಗಳಾವುವು?
· ಹಣದ ಭದ್ರತೆ ಕಾಪಾಡುತ್ತದೆ
· ಹಣದ ಪಾವತಿಗಳನ್ನು ಮಾಡಲು ಸಹಾಯಕ
· ಹಣ ವಸೂಲಿ ಮಾಡಲು ಸಹಾಯಕ
· ಖಾತೆ ಹೊಂದಿದವರು ಸಾಲ ಪಡೆಯಲು ಸಹಾಯಕ
· ವ್ಯವಹಾರ ಸುಗಮವಾಗಿ ನಡೆಯಲು ಸಹಾಯಕ
· ಭದ್ರತಾ ಕಪಾಡುಗಳನ್ನು ಪಡೆಯಬಹುದು
ಅಥವಾ
ಬಳಕೆದಾರರ ಶೋಷನೆಗೆ ಕಾರಣಗಳಾವುವು?
· ಮಧ್ಯವರ್ತಿಗಳ ಹಾವಳಿ
· ಮಾರಾಟದ ವಿಧಾನದಲ್ಲಿ ಬದಲಾವಣೆ
· ಗ್ರಾಹಕ ಮತ್ತು ಪೂರೈಕೆದಾರರ ನಡುವೆ ಅಂತರ ಹೆಚ್ಚಾಗಿರುವುದು
· ನೇರ ವ್ಯವಹಾರವಿಲ್ಲದಿರುವುದು
· ಮಧ್ಯವರ್ತಿಗಳಿಂದ ಬೆಲೆ ನಿರ್ಧಾರ
· ಗ್ರಾಹಕರಿಗೆ ಕಷ್ಟ-ನಷ್ಟ
Comments
Post a Comment
If any doubt Comment me