10ನೇ ತರಗತಿ ಸಮಾಜ ವಿಜ್ಞಾನ | ಅಧ್ಯಾಯ 1 ಭಾರತಕ್ಕೆ ಯುರೋಪಿಯನ್ನರ ಆಗಮನ | ಸ್ಕೋರಿಂಗ್ ಪ್ಯಾಕೇಜ್ | ಪಾಸಿಂಗ್ ಪ್ಯಾಕೇಜ್ |
ಅಧ್ಯಾಯ 1 ಭಾರತಕ್ಕೆ ಯುರೋಪಿಯನ್ನರ ಆಗಮನ
ಒಂದು ಅಂಕದ ಪ್ರಶ್ನೆಗಳು
1. ಮಧ್ಯಯುಗದಲ್ಲಿ ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯುತ್ತಿದ್ದ ನಗರ
ಉತ್ತರ ಕಾನ್ಸ್ಟಾಂಟಿನೋಪಲ್ ನಗರ.
2. ಮಧ್ಯಯುಗದಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ಯುರೋಪಿನ ಹೆಬ್ಬಾಗಿಲು ಎಂದು ಕರೆಯಲು ಕಾರಣ
ಉತ್ತರ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿದ್ದರಿಂದ.
3. ಮಧ್ಯಯುಗದಲ್ಲಿ ಏಷ್ಯಾ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದವರು
ಉತ್ತರ ಅರಬ್ಬರು.
4. ಮಧ್ಯಯುಗದಲ್ಲಿ ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಇವರು ಏಕಸ್ವಾಮ್ಯ ಸಾಧಿಸಿದ್ದರು. ಉತ್ತರ ಇಟಲಿಯ ವರ್ತಕರು.
5. ಏಷ್ಯಾದ ಸರಕುಗಳು ಯೂರೋಪಿನ ಈ
ದೇಶದ ವ್ಯಾಪಾರಿಗಳಿಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತಿದ್ದವು.
ಉತ್ತರ ಇಟಲಿಯ ವರ್ತಕರು.
5. ಯುರೋಪಿನ ದೇಶಗಳ ರಾಜರು ಹೊಸ
ಜಲಮಾರ್ಗ ಕಂಡುಹಿಡಿಯಲು ನಾವಿಕರಿಗೆ ಪ್ರೋತ್ಸಾಹಿಸಲು ಕಾರಣ
ಉತ್ತರ ಇಟಲಿಯ ಏಕಸ್ವಾಮ್ಯವನ್ನು ಮುರಿಯಲು
6. ಭಾರತಕ್ಕೆ 1498ರಲ್ಲಿ ಹೊಸ ಜಲಮಾರ್ಗವನ್ನು ಕಂಡುಹಿಡಿದವರು.
ಉತ್ತರ ಪೋರ್ಚಗೀಸ್ ನಾವಿಕ ವಾಸ್ಕೋಡಿಗಾಮ.
7. ಭಾರತದೊಂದಿಗೆ ಮರುವ್ಯಾಪಾರ ಸಂಬಂಧವನ್ನು ಸ್ಥಾಪಿಸಿದ ಯುರೋಪಿಯನ್ನರಲ್ಲಿ ಮೊದಲಿಗರು
ಉತ್ತರ ಪೋರ್ಚಗೀಸರು.
8. ಭಾರತವನ್ನು ತೊರೆದ ಕೊನೆಯ ಯುರೋಪಿಯನ್ನರು
ಉತ್ತರ ಪೋರ್ಚಗೀಸರು.
9. ವಾಸ್ಕೋಡಿಗಾಮನ ನಂತರ ಪೋರ್ಚಗೀಸರ ವೈಸರಾಯ್ ಆಗಿ
ಭಾರತಕ್ಕೆ ಬಂದವನು.
ಉತ್ತರ ಫ್ರಾನ್ಸಿಸ್ಕೊ ಡಿ ಅಲ್ಮೇಡ್.
10. ಇವನು ಭಾರತದಲ್ಲಿ ಪೋರ್ಚಗೀಸ್ ಸಾಮ್ರಾಜ್ಯದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ.
ಉತ್ತರ ಅಲ್ಫೋನ್ಸೊ ಅಲ್ಬುಕರ್ಕ.
11. ಬಿಜಾಪುರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚಗೀಸರ ಆಡಳಿತ ಕೇಂದ್ರವಾಗಿ ಪರಿವರ್ತಿಸಿದನು.
ಉತ್ತರ ಅಲ್ಫೋನ್ಸೊ ಅಲ್ಬುಕರ್ಕ. (1510ರಲ್ಲಿ)
12. ಡಚ್ರು ಈ ದೇಶದವರು
ಉತ್ತರ ಹಾಲೆಂಡ್ ಅಥವಾ ನೆದರ್ಲ್ಯಾಂಡ್.
13. ಭಾರತದಲ್ಲಿ ಪೋರ್ಚಗೀಸರ ಏಕಸ್ವಾಮ್ಯವನ್ನು ಮುರಿದವರು
ಉತ್ತರ : ಡಚ್ಚರು.
14. ಡಚ್ಚರು ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ
ಉತ್ತರ : 1602
15. ಇಂಗ್ಲಿμï ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರವನ್ನು ಆರಂಭಿಸಿದ ವರ್ಷ
ಉತ್ತರ : 1613.
16. ಇಂಗ್ಲಿಷ ಈಸ್ಟ್ ಇಂಡಿಯಾ ಕಂಪನಿಗೆ ಸೂರತ್ನಲ್ಲಿ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆಯನ್ನು ತೆರೆಯಲು ಅನುಮತಿ ನೀಡಿದ ಮೊಘಲ್ ಸಾಮ್ರಾಟ
ಉತ್ತರ : ಜಹಂಗೀರ,
17. ಇಂಗ್ಲೆಂಡಿನ ರಾಜ
ಒಂದನೆಯ ಜೇಮ್ಸ್ನ
ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದವನು
ಉತ್ತರ : ಸರ್, ಥಾಮಸ್ ರೋ (1617ರಲ್ಲಿ)
19. ಬಾಂಬೆಯನ್ನು ಕಂಪನಿಗೆ ವಾರ್ಷಿಕ 10 ಪೌಂಡಗಳ ಬಾಡಿಗೆಗೆ ವಹಿಸಿಕೊಟ್ಟ ಇಂಗ್ಲಂಡಿನ ರಾಜಕುಮಾರ
ಉತ್ತರ : ಎರಡನೇ ಚಾಲ್ರ್ಸ, ( 1668ರಲ್ಲಿ )
20. ಭಾರತದಲ್ಲಿನ ಇಂಗ್ಲಿಷರ ರಾಜಧಾನಿ
ಉತ್ತರ : ಕಲ್ಕತ್ತಾ.
20. ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯು ಸ್ಥಾಪನೆಯಾದ ವರ್ಷ
ಉತ್ತರ : 1664.
22. ಪ್ರೆಂಚರ ಪ್ರಥಮ ದಾಸ್ತಾನು ಮಳಿಗೆ
ಉತ್ತರ : ಸೂರತ್ (1668ರಲ್ಲಿ)
21. ಫ್ರೆಂಚರ ರಾಜಧಾನಿ ಕೇಂದ್ರ
ಉತ್ತರ : ಪಾಂಡಿಚೇರಿ ಅಥವಾ ಪುದುಚೇರಿ.
22. ಫ್ರೆಂಚರ ಮಹತ್ವಾಕಾಂಕ್ಷಿ ಗವರ್ನರ್
ಉತ್ತರ : ಡೂಪ್ಲೆ.
23. ಅಲಿವರ್ದಿ ಖಾನನ ನಂತರ ಬಂಗಾಳದ ನವಾಬರಾದವರು
ಉತ್ತರ : ಸಿರಾಜ್ ಉದ್ ದೌಲ್.
24. ಸಿರಾಜ-ಉದ್-ದೌಲನ ನಂತರ ಬಂಗಾಳದ ನವಾಬನಾದವನು
ಉತ್ತರ : ಮೀರ್ ಜಾಫರ್.
25. ಮೀರ್ ಜಾಫರ್ನ
ನಂತರ ಬಂಗಾಳದ ನವಾಬನಾದವನು
ಉತ್ತರ : ಮೀರ್ ಕಾಸಿಂ.
26. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಸದ ‘ದಿವಾನಿ’ ಹಕ್ಕನ್ನು ನೀಡಿದವರು.
ಉತ್ತರ : ಮೊಗಲ್ ದೊರೆ 2ನೇ ಷಾ ಆಲಂ.
27. ಬಂಗಾಳದಲ್ಲಿ ‘ದ್ವಿ ಪ್ರಭುತ್ವ’ವನ್ನು ಜಾರಿಗೆ ತಂದವನು
ಉತ್ತರ : ರಾಬರ್ಟ ಕ್ಲೈವ್ (1765)
28. ಪೂರ್ವ ರೋಮನ್ (ಬೈಜಾಂಟಿನ್) ಸಾಮ್ರಾಜ್ಯದ ರಾಜಧಾನಿ
ಉತ್ತರ : ಕಾನ್ಸ್ಟಾಂಟಿನೋಪಲ್.
29. ಮಧ್ಯಯುಗದಲ್ಲಿ ಏಷ್ಯಾ ಮತ್ತು ಯುರೋಪಗಳ ನಡುವೆ ವ್ಯಾಪಾರವು ಈ
ನಗರದ ಮೂಲಕ ನಡೆಯುತ್ತಿತ್ತು.
ಉತ್ತರ : ಕಾನ್ಸ್ಟಾಂಟಿನೋಪಲ್.
30. ದಸ್ತಕ ಎಂದರೆ
ಉತ್ತರ : ಮುಕ್ತ ವ್ಯಾಪಾರ ಮಾಡಲು ಪರವಾನಗಿ ನೀಡುವುದು.
31. ಫ್ರಾನ್ಸಿಸ್ಕೋ ಡಿ
ಅಲ್ಮೇಡ್ ನೀಲಿ ನೀರಿನ ನೀತಿ ಜಾರಿಗೆ ತಂದ
ಉದೇಶ
ಉತ್ತರ : ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾ ಶಕ್ತಿಯನ್ನು ಬಲಪಡಿಸಲು.
32. ಪೋರ್ಚಗೀಸರ ಪ್ರಧಾನ ವ್ಯಾಪಾರ ಕೇಂದ್ರ
ಉತ್ತರ : ಗೋವಾ.
33. ಮದ್ರಾಸ್ನ್ನು ವಶಪಡಿಸಿಕೊಂಡ ಫ್ರೆಂಚ್ ಸೇನಾ ಮುಖ್ಯಸ್ಥ
ಉತ್ತರ : ಲಾಬೋರ್ಡಿನಾ.
34. ಮೊದಲ ಕಾರ್ನಾಟಿಕ್ ಯುದ್ಧ ಕೊನೆಗೊಂಡ ಒಪ್ಪಂದ
ಉತ್ತರ : ಏಕ್ಸ್-ಲಾ-ಚಾಪಲ್ ಒಪ್ಪಂದ.
35. ಎರಡನೇ ಕಾರ್ನಾಟಿಕ್ ಯುದ್ಧ ಕೊನೆಗೊಂಡ ಒಪ್ಪಂದ
ಉತ್ತರ : ಪಾಂಡಿಚೇರಿ ಒಪ್ಪಂದ.
36. ಮೂರನೇ ಕಾರ್ನಾಟಿಕ್ ಯುದ್ಧ ಕೊನೆಗೊಂಡ ಒಪ್ಪಂದ.
ಉತ್ತರ : ಪ್ಯಾರೀಸ್ ಒಪ್ಪಂದ.
37. ಮೂರನೇ ಕಾರ್ನಾಟಿಕ್ ಯುದ್ಧದ ಸಮಯದಲ್ಲಿ ವಾಂಡಿವಾಷ ಕೋಟೆಗೆ ಮುತ್ತಿಗೆ ಹಾಕಿದ ಫ್ರೆಂಚ್ ಸೇನಾನಾಯಕ
ಉತ್ತರ : ಕೌಂಟ್ ಡಿ ಲಾಲಿ
38. 3ನೇ ಕಾರ್ನಾಟಿಕ್ ಯುದ್ಧದಲ್ಲಿ ಫ್ರೆಂಚರನ್ನು ಸೋಲಿಸಿದ ಇಂಗ್ಲಿಷ ಸೇನಾಧಿಕಾರಿ
ಉತ್ತರ : ಸರ್ ಐರ್ಕೂಟ.
39. ಬ್ರಿಟಿಷರು ಪ್ಲಾಸಿ ಮತ್ತು ಬಕ್ಸಾರ ಕದನಗಳ ಮೂಲಕ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದ ಪ್ರಾಂತ್ಯ
ಉತ್ತರ : - ಬಂಗಾಳ
II. ಒಂದು ಅಂಕದ ಪ್ರಶ್ನೆಗಳು
1. ಯುರೋಪಿನಲ್ಲಿ ಭಾರತದ ಯಾವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇತ್ತು?
ಉತ್ತರ : ಭಾರತದ ಸಾಂಬಾರ ಪದಾರ್ಥಗಳಾದ ಮೆಣಸು, ಜೀರಿಗೆ, ದಾಲ್ಚಿನ್ನಿ, ಏಲಕ್ಕಿ, ಶುಂಠಿ ಮುಂತಾದ ಉತ್ಪನ್ನಗಳಿಗೆ ಯುರೋಪಿನಲ್ಲಿ ಅಪಾರ ಬೇಡಿಕೆ ಇತ್ತು.
2. ಕಾನ್ಸ್ಟಾಂಟಿನೋಪಲ್ ನಗರವನ್ನು ಯಾವಾಗ, ಯಾರು ವಶಪಡಿಸಿಕೊಂಡರು?
ಉತ್ತರ : 1453ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
3. ಕಾನ್ಸ್ಟಾಂಟಿನೋಪಲ್ ಪತನದ ನಂತರ ವರ್ತಕರಿಗೆ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ ಏಕೆ?
ಉತ್ತರ : ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರದ ಮೇಲೆ ತೀವ್ರತರದ ತೆರಿಗೆಗಳನ್ನು ವಿಧಿಸಿದರು. ಇದರಿಂದಾಗಿ ವರ್ತಕರಿಗೆ ಕಾನ್ಸ್ಟಾಂಟಿನೋಪಲ್ ಮಾರ್ಗದ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.
4. ವಾಸ್ಕೋಡಿಗಾಮಾನು ಭಾರತಕ್ಕೆ ಹೊಸಜಲಮಾರ್ಗ ಕಂಡು ಹಿಡಿಯುವಲ್ಲಿ ಹೇಗೆ ಯಶಸ್ವಿಯಾದನು?
ಉತ್ತರ : ಯುರೋಪಿನ ಲಿಸ್ಟನ್ನಿಂದ ಹೊರಟ ಪೋರ್ಚಗಲ್ ನಾವಿಕ ವಾಸ್ಕೋಡಿಗಾಮನು 1498ರಲ್ಲಿ ಭಾರತದ ಪಶ್ಚಿಮ ಕರಾವಳಿ ತೀರದ ಕಲ್ಲಿಕೋಟೆ ಸಮೀಪದ ‘ಕಾಪ್ಪಡ್’ ಎಂಬಲ್ಲಿಗೆ ಬಂದು ತುಪಿದನು. ಆ
ಮೂಕ ಭಾರತಕ್ಕೆ ಹೊಸ ಜಲಮಾರ್ಗ ಕಂಡುಹಿಡಿಯುವಲ್ಲಿ ಯಶಸ್ವಿಯಾದನು.
5. ನೀಲಿ ನೀರಿನ ನೀತಿ ಎಂದರೇನು? ಇದನ್ನು ಜಾರಿಗೆ ತಂದವರು ಯಾರು?
ಉತ್ತರ : ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಬಡಿಸುವ ನೀತಿಯೇ ‚ ನೀಲಿ ನೀರಿನ ನೀತಿ‛ಯಾಗಿದೆ. ಇದನ್ನು ಫ್ರಾನ್ಸಿ ಡಿ ಅಲ್ಮೇಡ್ ಜಾರಿಗೆ ತಂದನು.
6. ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ
ಯರೋಪಿಯನ್ ಕಂಪನಿಗಳು ಯಾವವು?
ಉತ್ತರ : ಪೋರ್ಚಗೀಸ್, ಡಚ್ಚ್, ಇಂಗ್ಲಿಷ ಮತ್ತು ಪ್ರೆಂಚ್ ವ್ಯಾಪಾರಿ ಕಂಪನಿಗಳು ಭಾರತಕ್ಕೆ ಬಂದವು.
7. ಡಚ್ರು ಪೂರ್ವ ದೇಶಗಳೊಂದಿಗೆ ವ್ಯಾಪಾರವನ್ನು ಹೇಗೆ ಆರಂಭಿಸಿದರು?
ಉತ್ತರ : ಡಚ್ಚರು 1602ರಲ್ಲಿ ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿಕೊಂಡು ಭಾರತ & ಜಾವಾ, ಸುಮಾತ್ರಾ, ಇಂಡೋನೇಷಿಯಾ ಮೊದಲಾದ ಸಾಂಬಾರು ಪ್ರಸಿದ್ಧ ದ್ವೀಪಗಳಲ್ಲಿ ವ್ಯಾಪಾರವನ್ನು ಆರಂಭಿಸಿದರು.
8. ಡಚ್ಚರು ಭಾರತದ ವ್ಯಾಪಾರವನ್ನು ಬಿಟ್ಟು ಕೇವಲ ಸಾಂಭಾರು ದ್ವೀಪಗಳಿಗೆ ಸೀಮಿತವಾಗಲು ಕಾರಣವೇನು?
ಉತ್ತರ : ಭಾರತಕ್ಕೆ ಬಂದ
ಇಂಗ್ಲಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾಗದೆ ಡಚ್ಚರು ಸಾಂಬಾರು ದ್ವೀಪಗಳಿಗೆ ಮಾತ್ರ ಸೀಮಿತರಾದರು.
9. ಇಂಗ್ಲಿಷ ಈಸ್ಟ್ ಇಂಡಿಯಾ ಕಂಪನಿಗೆ ಪೂರ್ವ ದೇಶಗಳೊಂದಿಗೆ ವ್ಯಾಪಾರ ಮಾಡಲು ಯಾರು, ಯಾವಾಗ ಅನುಮತಿ ನೀಡಿದರು?
ಉತ್ತರ : ಇಂಗ್ಲೆಂಡಿನ ಎಲಿಜಿಬೆತ್ ರಾಣಿಯು 1600 ಡಿಸೆಂಬರ್ 31ರಂದು ಇಂಗ್ಲಿಷ ಈಸ್ಟ್ ಇಂಡಿಯಾ ಕಂಪನಿಗೆ ಪೂರ್ವ ದೇಶಗಳೊಂದಿಗೆ ವ್ಯಾಪಾರ ನಡೆಸಲು 15 ವರ್ಷಗಳ ಪರವಾನಗಿ ನೀಡಿದಳು.
10. ಬ್ರಿಟಿಷರು ಸೆಂಟ್ ಜಾರ್ಜ ಫೋರ್ಟ ಕೋಟೆಯನ್ನು ಹೇಗೆ ಕಟ್ಟಿದರು?
ಉತ್ತರ : ಇಂಗ್ಲಿಷರು 1639ರಲ್ಲಿ ಚಂದ್ರಗಿರಿಯ ರಾಜನಿಂದ ಮದ್ರಾಸನಲ್ಲಿ ಭೂಮಿಯನ್ನು ಪಡೆದು ಸೆಂಟ್ ಜಾರ್ಜ ಫೋರ್ಟ್ ಎಂಬ
ಬಲಿಷ್ಠ ಕೋಟೆಯನ್ನು ಕಟ್ಟಿದರು.
11. ಬ್ರಿಟಿಷರು ಫೋರ್ಟ ವಿಲಿಯಂ ಕೋಟೆಯನ್ನು ಹೇಗೆ ಕಟ್ಟಿದರು?
ಉತ್ತರ : ಬ್ರಿಟಿಷರು 1690ರ
ದಶಕದಲ್ಲಿ ಬಂಗಾಳದ ರಾಜ್ಯಪಾಲನಿಂದ ಹೂಗ್ಲಿ ನದಿ
ದಂಡೆಯ ಮೇಲೆ ಸುತನುತಿ, ಕಲ್ಕತ್ತ ಮತ್ತು ಗೋವಿಂದಪುರ ಎಂಬ
ಮೂರು ಹಳ್ಳಿಗಳನ್ನು ಖರೀದಿಸಿ ಫೋರ್ಟ ವಿಲಿಯಂ ಕೋಟೆಯನ್ನು ಕಟ್ಟಿದರು.
12. ಇಂಗ್ಲಿಷರ ಪ್ರಮುಖ ಪ್ರೆಸಿಡೆನ್ಸಿ ಕೇಂದ್ರಗಳು ಯಾವುವು?
ಉತ್ತರ : ಮದ್ರಾಸ್, ಬಾಂಬೆ ಮತ್ತು ಕಲ್ಕತ್ತಾಗಳು ಇಂಗ್ಲಿಷರ ಪ್ರಮುಖ ಪ್ರೆಸಿಡೆನ್ಸಿ ಕೇಂದ್ರಗಳಾಗಿವೆ.
13. ಫೆಂಚರು ಪಾಂಡಿಚೇರಿಯನ್ನು ಹೇಗೆ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು?
ಉತ್ತರ : ಫ್ರೆಂಚರು 1674ರಲ್ಲಿ ವಾಲಿಕೊಂಡಪುರಂ ನ ಸ್ಥಳೀಯ ಮುಸ್ಲಿಂ ಅಧಿಕಾರಿಯಿಂದ ಒಂದು ಹಳ್ಳಿಯನ್ನು ಪಡೆದರು. ಕ್ರಮೇಣ ಇದನ್ನೇ ದೊಡ್ಡ ವ್ಯಾಪಾರ ಕೇಂದ್ರವಾಗಿ ಮಾರ್ಪಡಿಸಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.
14. ಕರ್ನಾಟಿಕ್ ಯುದ್ಧಗಳಿಗೆ ಕಾರಣವೇನು?
ಉತ್ತರ : ಪ್ರೆಂಚ್ ಗವರ್ನರ್ ಡುಪ್ಲೆಯು ದಕ್ಷಿಣ ಭಾರತದಲ್ಲಿ ಫ್ರೆಂಚರ ಅಧಿಪತ್ಯವನ್ನು ಸ್ಥಾಪಿಸಲು ಹವಣಿಸಿ ಇಂಗ್ಲಿಷರೊಡನೆ ಸಂಘರ್ಷಕ್ಕಿಳಿದನು. ಇದು
ಕರ್ನಾಟಿಕ್ ಯುದ್ಧಗಳಿಗೆ ಕಾರಣವಾಯಿತು.
15. ಬಂಗಾಳದಲ್ಲಿ ಬ್ರಿಟಿಷರ ವ್ಯಾಪಾರ ಹೆಚ್ಚು ಲಾಭದಾಯಕವಾಗಲು ಕಾರಣವೇನು?
ಉತ್ತರ : 1717ರಲ್ಲಿ ಮೊಗಲ್ ದೊರೆ ಫಾರೂಕ್ ಶಿಯಾರನು ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಕಂಪನಿಗೆ ನೀಡಿದ ‘ದಸ್ತಕ’ ಗಳಿಂದ ಬ್ರುಟಿಷರು ಲಾಭಗಳಿಸಲು ಕಾರಣವಾಗಿತ್ತು.
III. ದೀರ್ಘ ಉತ್ತರದ ಪ್ರಶ್ನೆಗಳು
1. ಮಧ್ಯಕಾಲದಲ್ಲಿ ಯುರೋಪ್, ಭಾರತ ಮತ್ತು ಇತರ ಏಷ್ಯಾ ದೇಶಗಳ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು? ಅಥವಾ
ಕಾನ್ಸ್ಟಾಂಟಿನೋಪಲ್ ನಗರವು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಟ್ಟಿತು. ಈ ಹೇಳಿಕೆಯನ್ನು ಸಮರ್ಥಿಸಿ. ಅಥವಾ
‘ಕಾನ್ಸ್ಟಾಂಟಿನೋಪಲ್’ ನಗರವು ಮಧ್ಯಯುಗದ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿತ್ತು’. ಸಮರ್ಥಿಸಿ.
ಉತ್ತರ : ಮಧ್ಯಕಾಲದಲ್ಲಿ ಭಾರತ ಮತ್ತು ಯುರೋಪಗಳ ನಡುವೆ ವ್ಯಾಪಾರ ಸಂಬಂಧ –
* ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಕಾನ್ಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.
* ಇಟಲಿಯ ವರ್ತಕರು ಅವುಗಳನ್ನು ಕೊಂಡು ಯುರೋಪಿನ ದೇಶಗಳಿಗೆ ಮಾರುತ್ತಿದ್ದರು.
* ಕಾನ್ಸ್ಟಾಂಟಿನೋಪಲ್ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗುವ ಮೂಲಕ ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಗಣಿಸಲ್ಟಟ್ಟಿತು.
* ಏಷ್ಯಾದ ಸರಕುಗಳು ಇಟಲಿಯ ವರ್ತಕರಿಗೆ ಒಳ್ಳೆಯ ಲಾಭವನ್ನು ತಂದು ಕೊಡುತ್ತಿದ್ದವು.
2. ಭಾರತಕ್ಕೆ ಹೊಸ
ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳನ್ನು ಚರ್ಚಿಸಿರಿ ಅಥವಾ
‚ಕಾನ್ಸ್ಟಾಂಟಿನೋಪಲ್ ನಗರದ ಪತನವು ಏಷ್ಯಾಕ್ಕೆ ಸಮುದ್ರ ಮಾರ್ಗಗಳ ಅನ್ವೇಶಣೆಗೆ ದಾರಿ ಮಾಡಿಕೊಟ್ಟಿತು‛ ಈ ಶಿರ್ಷಿಕೆಯನ್ನು ಸಮರ್ಥಿಸಿ.
ಉತ್ತರ : ಭಾರತಕ್ಕೆ ಹೊಸ
ಜಲಮಾರ್ಗ ಕಂಡು ಹಿಡಿಯಲು ಕಾರಣವಾದ ಅಂಶಗಳು –
* 1453ರಲ್ಲಿ ಅಟೋಮನ್ ಟರ್ಕರು ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು.
* ಈ ಮಾರ್ಗದ ವ್ಯಾಪಾರದ ಮೇಲೆ ಟರ್ಕರು ತೀವ್ರತರದ ತೆರಿಗೆಗಳನ್ನು ವಿಧಿಸತೊಡಗಿದರು.
* ವರ್ತಕರಿಗೆ ವ್ಯಾಪಾರವು ಲಾಭದಾಯಕವಾಗಿ ಪರಿಣಮಿಸಲಿಲ್ಲ.
* ಯುರೋಪಿನ ದೇಶಗಳ ರಾಜರು ಹೊಸ
ಸಮುದ್ರ ಮಾರ್ಗಗಳನ್ನು ಹುಡುಕಲು ಸಾಹಸಿ ನಾವಿಕರಿಗೆ ಪ್ರೋತ್ಸಾಹಿಸಲಾರಂಭಿಸಿದರು.
* ಹೊಸ ವೈಜ್ಞಾನಿಕ ಆವಿಷ್ಕಾರಗಳಾದ ದಿಕ್ಸೂಚಿ, ಆಸ್ಟ್ರೋಲೋಬ್ (ನಕ್ಷತ್ರ ಉನ್ನತಿ ಮಾಪಕ) ಸಿಡಿಮದ್ದು ಮೊದಲಾದವುಗಳು ನಾವಿಕರ ನೆರವಿಗೆ ಬಂದವು.
3. ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ‛ ಈ
ಹೇಳಿಕೆಯನ್ನು ಸಮರ್ಥಿಸಿ. ಅಥವಾ ವೈಜ್ಞಾನಿಕ ಆವಿಷ್ಕಾರಗಳು ಹೊಸ ಸಮುದ್ರ ಮಾರ್ಗಗಳ ಅನ್ವೇಷಣೆಗೆ ಸಹಕಾರಿಯಾದವು ಹೇಗೆ?
ಉತ್ತರ : ಯುರೋಪಿನಲ್ಲಿ ಅನೇಕ ವೈಜ್ಞಾನಿಕ ಸಂಶೋಧನೆಗಳು ಹೊಸ
ಸಮುದ್ರಮಾರ್ಗಗಳ ಆವಿಷ್ಕಾರಕ್ಕೆ ಕಾರಣವಾದವು. ಇವುಗಳಲ್ಲಿ ಪ್ರಮುಖವಾದವುಗಳೆಂದರೆ
* ದಿಕ್ಸೂಚಿ,
* ಅಸ್ಟ್ರೋಲೋಬ್ (ನಕ್ಷತ್ರ ಉನ್ನತಿ ಮಾಪಕ)
* ಸಿಡಿಮದ್ದು,
* ನೌಕಾ ಉಪಕರಣಗಳು,
* ಭೂಪಟ ಇತ್ಯಾದಿಗಳು
4. ಅಲ್ಫಾನ್ಸೋ ಅಲ್ಬುಕರ್ಕ ಭಾರತದಲ್ಲಿ ಪೋರ್ಚಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ ಏಕೆ?
ಉತ್ತರ : ಅಲ್ಫಾನ್ಸೋ ಅಲ್ಬುಕರ್ಕ ಭಾರತದಲ್ಲಿ ಪೋರ್ಚಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ. ಏಕೆಂದರೆ
* ಇವನು ಸಾ.ಶ. 1510ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡನು.
* ಗೋವಾವನ್ನು ಪೋರ್ಚಗೀಸರ ಆಡಳಿತ ಕೇಂದ್ರವನ್ನಾಗಿ ಪರಿವರ್ತಿಸಿದನು.
* ಪೋರ್ಚಗೀಸರು ಮುಂದೆ ಒಂದು ಶತಮಾನ ಕಾಲ
ಭಾರತದ ವ್ಯಾಪಾರದ ಮೇಲೆ ಪ್ರಶ್ನಾತೀತ ಏಕಸ್ವಾಮ್ಯವನ್ನು ಸ್ಥಾಪಿಸಿದರು.
5. ಮೊದಲ ಕರ್ನಾಟಿಕ ಯುದ್ಧ ನಡೆದ ಬಗೆಯನ್ನು ವಿವರಿಸಿ. ಅಥವಾ
ಮೊದಲ ಕರ್ನಾಟಿಕ್ ಯುದ್ಧಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.
ಉತ್ತರ : ಮೊದಲ ಕರ್ನಾಟಿಕ ಯುದ್ಧ ನಡೆದ ಬಗೆ
–
* ಡೂಪ್ಲೆಯ ಕೋರಿಕೆಯ ಮೇರೆಗೆ ಲಾಬೋರ್ಡಿನಾ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್ನಿಂದ ಬಂದು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು.
* ಬ್ರಿಟಿಷರು ಕರ್ನಾಟಿಕ್ ನವಾಬ ಅನ್ವರುದ್ದೀನ್ನಲ್ಲಿ ಮೊರೆ ಇಟ್ಟರು.
* ಫ್ರೆಂಚರಿಂದ ಅನ್ವರುದ್ದೀನ್ ಕಳುಹಿಸಿಕೊಟ್ಟ ಸೇನೆಯು ಸೋತಿತು.
* ಲಾಬೋರ್ಡಿನನು ಬ್ರಿಟಿಷರಿಂದ ಹಣಪಡೆದು ಮದ್ರಾಸನ್ನು ಬಿಟ್ಟುಕೊಟ್ಟು ಮಾರಿಷಸ್ಗೆ
ಹೊರಟುಹೋದನು.
* ಕೊನೆಗೆ ಈ
ಯುದ್ಧವು ‘ಎಕ್ಸ್-ಲಾ-ಚಾಪಲ್ ಒಪ್ಪಂದೊಂದಿಗೆ ಮುಕ್ತಾಯವಾಯಿತು
.
6. ಎರಡನೇ ಕಾರ್ನಾಟಿಕ್ ಯದ್ಧ ನಡೆದ ಬಗೆಯನ್ನು ತಿಳಿಸಿ.
ಎರಡನೇ ಕರ್ನಾಟಿಕ್ ಯುದ್ಧಕ್ಕೆ ಕಾರಣ ಮತ್ತು ಪರಿಣಾಮಗಳನ್ನು
ತಿಳಿಸಿ.
ಉತ್ತರ : ಎರಡನೇ ಕಾರ್ನಾಟಿಕ್ ಯದ್ಧ ನಡೆದ ಬಗೆ –
* ಫ್ರೆಂಚರು ಸಲಾಬತ್ ಜಂಗನನ್ನು ಹೈದರಾಬಾದಿನ ನಿಜಾಮನಾಗಿ ಮಾಡಿದರು.
* ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್ನ ನವಾಬನಾಗಿದ್ದನು.
* ರಾಬರ್ಟಕ್ಲೈವನು ಆರ್ಕಾಟಿನ ಮೇಲೆ ದಾಳಿ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು.
* ಈ ಯುದ್ದದಲ್ಲಿ ಚಂದಾಸಾಹೇಬನನ್ನು ಹತ್ಯೆ ಮಾಡಿ ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ನವಾಬನ್ನಾಗಿ ನೇಮಕ ಮಡಲಾಯಿತು.
* ಎರಡನೇ ಕರ್ನಾಟಿಕ್ ಯುದ್ಧವು ‘ಪಾಂಡಿಚೇರಿ ಒಪ್ಪಂದ’ದೊಂದಿಗೆ ಮುಕ್ತಾಯವಾಯಿತು.
7. ಮೂರನೇ ಕಾರ್ನಾಟಿಕ್ ಯದ್ಧ ನಡೆದ ಬಗೆಯನ್ನು ತಿಳಿಸಿ. ಅಥವಾ
ಮೂರನೇ ಕರ್ನಾಟಿಕ್ ಯುದ್ಧಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.
ಉತ್ತರ : ಮೂರನೇ ಕಾರ್ನಾಟಿಕ್ ಯದ್ಧ ನಡೆದ ಬಗೆ –
* ಫ್ರೆಂಚರ ‘ಕೌಂಟ್ ಡಿ ಲಾಲಿಯು 1760ರಲ್ಲಿ ವಾಂಡಿವಾಷ ಕೋಟೆಗೆ ಮುತ್ತಿಗೆ ಹಾಕಿದನು.
* ಬ್ರಿಟಿಷ ಸೇನಾಧಿಕಾರಿ ಸರ್ ಐರ್ಕೂಟನು ಫ್ರೆಂಚರನ್ನು
ಸೋಲಿಸಿದನಲ್ಲದೆ,
ಬುಸ್ಸಿಯನ್ನು
ಸೆರೆಹಿಡಿದನು.
* ಕೌಂಟ್ ಡಿ ಲಾಲಿಯು ತಪ್ಪಿಸಿಕೊಂಡು ಪಾಂಡಿಚೇರಿಯಲ್ಲಿ ತಲೆಮರೆಸಿಕೊಂಡನು.
* ಐರ್ಕೂಟನು ಪಾಂಡಿಚೇರಿಗೂ ಮುತ್ತಿಗೆ ಹಾಕಿದಾಗ ಲಾಲಿಯು 1761ರಲ್ಲಿ ಬೇಷರತ್ತಾಗಿ ಶರಣಾದನು.
* ಈ ಯುದ್ಧವು ಪ್ಯಾರಿಸ್ ಒಪ್ಪಂದದೊಂದಿಗೆ ಕೊನೆಗೊಂಡಿತು.
8. ಭಾರತದಲ್ಲಿ ಕರ್ನಾಟಿಕ ಯುದ್ಧಗಳು ಯಾರ ಯಾರ ನಡುವೆ ನಡೆದವು? ಈ ಯುದ್ಧಗಳ ಪರಿಣಾಮವೇನು?
ಉತ್ತರ : ಭಾರತದಲ್ಲಿ ಕರ್ನಾಟಿಕ್ ಯುದ್ಧಗಳು ಬ್ರಿಟಿಷರು ಮತ್ತು ಪ್ರೆಂಚರ ನಡುವೆ ನಡೆದವು.
ಭಾರತದಲ್ಲಿ ನಡೆದ ಕರ್ನಾಟಿಕ್ ಯುದ್ದಗಳ ಪರಿಣಾಮಗಳು –
* ಫ್ರೆಂಚರು ಭಾರತದಲ್ಲಿ ತಮ್ಮ ಎಲ್ಲಾ ನೆಲೆಗಳನ್ನು ಕಳೆದುಕೊಂಡರು.
* 1773ರಲ್ಲಿ ನಡೆದ ಪ್ಯಾರಿಸ್ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು
ಹಿಂತಿರುಗಿಸಲಾಯಿತು.
* ಬ್ರಿಟಿಷರು ದಕ್ಷಿಣ ಭಾರತವನ್ನು ಗೆಲ್ಲುವ ಕಾರ್ಯದಲ್ಲಿ ಮಗ್ನರಾದರು.
9. ಪ್ಲಾಸಿ ಕದನಕ್ಕೆ ಕಾರಣಗಳೇನು?
ಉತ್ತರ : ಪ್ಲಾಸಿ ಕದನಕ್ಕೆ ಕಾರಣಗಳು –
* ‘ದಸ್ತಕ’ಗಳನ್ನು ಬ್ರಿಟಿಷ ನೌಕರರು ದುರುಪಯೋಗ ಪಡಿಸಿಕೊಂಡರು.
* ನವಾಬನ ಅನುಮತಿಯನ್ನು ಪಡೆಯದೆ ಬ್ರಿಟಿಷರು ಕಲ್ಕತ್ತಾದ ಕೋಟೆಯನ್ನು ಬಲಪಡಿಸಿದರು.
* ಕಪ್ಪು ಕೋಣೆ ದುರಂತದಲ್ಲಿ ಬ್ರಿಟಿಷ
ಸೈನಿಕರು ಸೆರೆಸಿಕ್ಕು ಸಾವನ್ನಪ್ಪಿದರು.
* ಇದರಿಂದ ರಾಬರ್ಟ್ಕ್ಲೈವ್ ಬಂಗಾಳದ ಮೇಲೆ ದಾಳಿ ಮಾಡಿದನು. ಇದೇ ಪ್ಲಾಸಿ ಕದನ.
10. ಪ್ಲಾಸಿ ಕದನವು ಯಾವಾಗ, ಯಾರ ಯಾರ ನಡುವೆ ನಡೆಯಿತು? ಯುದ್ದದ ಫಲಿತಾಂಶವೇನು?
ಉತ್ತರ : ಬಂಗಾಳದ ನವಾಬನಾದ ಸಿರಾಜ್-ಉದ್-ದೌಲನಿಗೂ ಮತ್ತು ಬ್ರಿಟಿಷರಿಗೂ
1757 ಜೂನ್ 23ರಂದು ಪ್ಲಾಸಿ ಕದನ ನಡೆಯಿತು. ಯುದ್ದದಲ್ಲಿ ಸಿರಾಜ್-ಉದ್-ದೌಲನನ್ನು ಸರೆಹಿಡಿದು ಕೊಲ್ಲಲಾಯಿತು.
11. ಕಪ್ಪು ಕೋಣೆ ದುರಂತ ಎಂದರೇನು? ಅಥವಾ
ಪ್ಲಾಸಿ ಕದನಕ್ಕೆ ಕಪ್ಪು ಕೋಣೆ ದುರಂತ ಹೇಗೆ ಕಾರಣವಾಯಿತು?
ಉತ್ತರ :
* ಸಿರಾಜನು ಪೋರ್ಟ ವಿಲಿಯಂ ಕೋಟೆಯನ್ನು ಗೆದ್ದನು.
* ಆಕ್ರಮಣದಲ್ಲಿ ಸೆರೆ ಸಿಕ್ಕ 146 ಬ್ರಿಟಿಷರನ್ನು
ಚಿಕ್ಕ ಕೋಠಡಿಯೊಂದರಲ್ಲಿ
ಬಂಧಿಸಿಟ್ಟನು.
* ಅದರಲ್ಲಿ 123 ಮಂದಿ ಅಸುನೀಗಿದರು.
* ಇದನ್ನು ಕಪ್ಪು ಕೋಣೆಯ ದುರಂತ ಎಂದು ಕರೆಯಲಾಗಿದೆ.
* ಈ ಘಟನೆಯಿಂದ 1757 ಜೂನ್ 23ರಂದು ಪ್ಲಾಸಿ ಕದನ ಆರಂಭವಾಯಿತು.
12. ರಾಬರ್ಟ ಕ್ಲೈವ್ನು ಪ್ಲಾಸಿ ಕದನದಲ್ಲಿ ಬಂಗಾಳದ ನವಾಬನ ವಿರುದ್ಧ ಹೇಗೆ ಜಯಗಳಿಸಿದನು?
ಉತ್ತರ :
* ರಾಬರ್ಟಕ್ಲೈವ್ನು ನವಾಬನ ವಿರೋಧಿಗಳನ್ನು ತನ್ನತ್ತ ಸೆಳೆದುಕೊಂಡನು.
* ಮೀರ್ ಜಾಫರನಿಗೆ ನವಾಬನನ್ನಾಗಿ ಮಾಡುವ ಆಮಿಷವೊಡ್ಡಿದ್ದರಿಂದ ಯುದ್ಧದಲ್ಲಿ ತಟಸ್ಥವಾಗಿರಲು ಒಪ್ಪಿದನು.
* ರಾಬರ್ಟಕ್ಲೈವನು 1757 ಜೂನ್ 23ರಂದು ಸಿರಾಜ್-ಉದ್-ದೌಲನ ಮೇಲೆ ಕದನ ಸಾರಿದನು.
* ಯುದ್ದದಲ್ಲಿ ಸಿರಾಜ್-ಉದ್-ದೌಲನನ್ನು ಸರೆಹಿಡಿದು ಕೊಲ್ಲಲಾಯಿತು.
13. ಪ್ಲಾಸಿ ಕದನದ ಪರಿಣಾಮಗಳೇನು?
ಉತ್ತರ : ಪ್ಲಾಸಿ ಕದನದ ಪರಿಣಾಮಗಳು –
* ಭಾರತೀಯರಲ್ಲಿದ್ದ ಅನೈಕ್ಯತೆ, ಅಸಂಘಟನೆ ಪ್ರದರ್ಶಿಸಿತು.
* ಮೀರ್ ಜಾಫರನು ಬಂಗಾಳದ ನವಾಬನಾದನು.
* ಕಂಪನಿಯು ಬಂಗಾಳ ಪ್ರಾಂತ್ಯದಲ್ಲಿ ವ್ಯಾಪಾರ ನಡೆಸಲು ಹಕ್ಕನ್ನು ಪಡೆಯಿತು.
* ಯುದ್ಧ ಪರಿಹಾರವಾಗಿ ಮೀರ್ ಜಾಫರನು ಕಂಪನಿಗೆ 17 ಕೋಟಿ 70 ಲಕ್ಷ ರೂಪಾಯಿಗಳನ್ನು
ನೀಡಿದನು.
14. ಬಕ್ಸಾರ್ ಕದನಕ್ಕೆ ಕಾರಣಗಳೇನು? ಅಥವಾ
ಬ್ರಿಟಿಷರು ಮೀರ್ ಖಾಸಿಂನನ್ನು ಬಂಗಾಳದ ನವಾಬ ಹುದ್ದೆಯಿಂದ ಪದಚ್ಯುತಗೊಳಿಸಿದರು ಏಕೆ?
ಉತ್ತರ : ಬಕ್ಸಾರ್ ಕದನಕ್ಕೆ ಕಾರಣಗಳು –
* ಮೀರ್ ಕಾಸಿಂನು ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕಮುಕ್ತ ಎಂದು ಘೋಷಿಸಿದನು.
* ಭಾರತೀಯರು ಸುಂಕವಿಲ್ಲದೆ ವ್ಯಾಪಾರ ನಡೆಸುವ ಮೂಲಕ ಬ್ರಿಟಿಷರೊಡನೆ
ನೇರ ಸ್ಪರ್ಧೆಗಿಳಿದರು.
* ಬ್ರಿಟಿಷರ ವ್ಯಾಪಾರಕ್ಕೆ ಭಾರಿ ಒಡೆತ ಬಿದ್ದಿತು.
* ಬ್ರಿಟಿಷರು ಮೀರ ಕಾಸಿಂನನ್ನು ಕೆಳಗಿಳಿಸಿ ಮತ್ತೆ ಮೀರ್ ಜಾಫರ್ನನ್ನು ನವಾಬನನ್ನಾಗಿ
ಮಾಡಿದರು.
* ಮೀರ್ ಕಾಸಿಂ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದೇ ಬಕ್ಸಾರ ಕದನಕ್ಕೆ ಕಾರಣವಾಯಿತು.
15. ಮೀರ್ ಕಾಸಿಂನು ಬ್ರಿಟಿಷರ ವಿರುದ್ಧ ಹೋರಾಡಲು ಹೇಗೆ ಸಿದ್ಧನಾದನು? ಮತ್ತು ಯುದ್ಧದ ಫಲಿತಾಂಶವೇನು?
ಬಕ್ಸಾರ ಕದನ ಯಾರ ಯಾರ ನಡುವೆ ನಡೆಯಿತು? ಯುದ್ಧದ ಫಲಿತಾಂಶವೇನು?
ಉತ್ತರ : ಬಕ್ಸಾರ ಕದನ ನಡೆದ ರೀತಿ –
* ಮೀರ್ ಖಾಸಿಂನು ಮೊಗಲ
ದೊರೆ ‘ಎರಡನೇ ಷಾ ಆಲಂ ಮತ್ತು ಔದ್ನ ನವಾಬ ‘ಶಿರಾಜ್-ಉದ್-ದೌಲ’ರೊಂದಿಗೆ ಒಪ್ಪಂದ ಮಾಡಿಕೊಂಡನು.
* ಮೀರ್ ಖಾಸಿಂನ ಸಂಯುಕ್ತ ಸೈನ್ಯ ಮತ್ತು ಹೆಕ್ಟರ್ ಮನ್ರೋ ನೇತೃತ್ವದ ಬ್ರಿಟಿಷ
ಸೈನ್ಯ 1764ರಲ್ಲಿ ‘ಬಕ್ಸರ್’ ಎಂಬಲ್ಲಿ ಮುಖಾಮುಖಿಯಾದವು.
* ಯುದ್ಧದಲ್ಲಿ ಮೀರ್ ಖಾಸಿಂ ಸೋತು ಪಲಾಯನ ಮಾಡಿದರೆ, ಷಾ ಆಲಂ ಶರಣಾಗತನಾದನು.
* ಬ್ರಿಟಿಷ ಶಕ್ತಿಗೆ ತಡೆಯೊಡ್ಡುವ ಈ ಒಕ್ಕೂಟದ ಪ್ರಯತ್ನ ಸಂಪೂರ್ಣ ವಿಫಲವಾಯಿತು.
16. ಬಕ್ಸಾರ ಕದನದ ಪರಿಣಾಮಗಳೇನು? ಅಥವಾ (ಎಪ್ರಿಲ್ 2019)
ಬಕ್ಸಾರ ಕದನವು ಬ್ರಿಟಿಷರಿಗೆ
ಅನೇಕ ಸೌಲಭ್ಯಗಳನ್ನು
ಪಡೆಯಲು ನೆರವಾಯಿತು. ಸ್ಪಷ್ಟಿಕರಿಸಿ.
ಅಥವಾ
ಬಕ್ಸಾರ್ ಕದನವು ಬ್ರಿಟಿಷರಿಗೆ ಭಾರತದಲ್ಲಿ ಭದ್ರವಾಗಿ ನೆಲಯೂರಲು ಹೇಗೆ ಸಹಕರಿಸಿತು?
ಉತ್ತರ : ಬಕ್ಸಾರ ಕದನದ ಪರಿಣಾಮಗಳು –
* ಈಷ್ಟ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ‘ದಿವಾನಿ ಹಕ್ಕನ್ನು ಎರಡನೇ ಷಾ ಆಲಂ ನೀಡಿದನು.
* ಔದ್ನ ನವಾಬನಾದ ಷುಜ್-ಉದ್-ದೌಲನು ಕಂಪನಿಗೆ ಯುದ್ಧನಷ್ಟ ಪರಿಹಾರವಾಗಿ 50 ಲಕ್ಷ ರೂಪಾಯಿಗಳನ್ನು ಕೊಡಬೇಕಾಯಿತು.
* ಮೀರ್ ಜಾಫರ್ ಮರಣ ಹೊಂದಿದ್ದರಿಂದ ಅವನ ಮಗನಿಗೆ ವಿಶ್ರಾಂತಿ ವೇತನ ನೀಡಿ ಬಂಗಾಳದ ಆಡಳಿತವನ್ನು ಕಂಪನಿಯು ನಿರ್ವಹಿಸತೊಡಗಿತು.
* ಬಕ್ಸಾರ್ ಕದನವು ಬ್ರಿಟಿಷರು ಬಂಗಾಳ, ಬಿಹಾರ ಮತ್ತು ಒರಿಸ್ಸಾದ ನಿಜವಾದ ಒಡೆಯರೆಂದು ದೃಡೀಕರಿಸಿತು.
17. ರಾಬರ್ಟಕ್ಲೈವ್ ಜಾರಿಗೆ ತಂದ ‘ದ್ವಿ ಪ್ರಭುತ್ವ’ ಪದ್ಧತಿಯನ್ನು ವಿವರಿಸಿ.
ಉತ್ತರ : ದ್ವಿ ಪ್ರಭುತ್ವ ಪದ್ಧತಿ –
* 1765ರಲ್ಲಿ
ರಾಬರ್ಟ ಕ್ಲೈವ್ನು ಬಂಗಾಸದಲ್ಲಿ ‘ದ್ವಿ ಪ್ರಭುತ್ವ’ ಪದ್ಧತಿಯನ್ನು ಜಾರಿಗೆ ತಂದನು.
* ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದರು.
* ನವಾಬನು ಆಡಳಿತ, ನ್ಯಾಯ ಮೊದಲಾದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು.
* ಬ್ರಿಟಿಷರು ತಮ್ಮ ವಾಣಿಜ್ಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ
ಸಲುವಾಗಿ ಭಾರತದಲ್ಲಿ ರಾಜಕೀಯ ಪರಮಾಧಿಕಾರವನ್ನು
ಸ್ಥಾಪಿಸಿದರು.
ಉತ್ತರ ಕಾನ್ಸ್ಟಾಂಟಿನೋಪಲ್ ನಗರ.
ಉತ್ತರ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿದ್ದರಿಂದ.
ಉತ್ತರ ಅರಬ್ಬರು.
ಉತ್ತರ ಇಟಲಿಯ ವರ್ತಕರು.
ಉತ್ತರ ಇಟಲಿಯ ಏಕಸ್ವಾಮ್ಯವನ್ನು ಮುರಿಯಲು
6. ಭಾರತಕ್ಕೆ 1498ರಲ್ಲಿ ಹೊಸ ಜಲಮಾರ್ಗವನ್ನು ಕಂಡುಹಿಡಿದವರು.
ಉತ್ತರ ಪೋರ್ಚಗೀಸ್ ನಾವಿಕ ವಾಸ್ಕೋಡಿಗಾಮ.
ಉತ್ತರ ಪೋರ್ಚಗೀಸರು.
ಉತ್ತರ ಪೋರ್ಚಗೀಸರು.
ಉತ್ತರ ಫ್ರಾನ್ಸಿಸ್ಕೊ ಡಿ ಅಲ್ಮೇಡ್.
ಉತ್ತರ ಅಲ್ಫೋನ್ಸೊ ಅಲ್ಬುಕರ್ಕ. (1510ರಲ್ಲಿ)
ಉತ್ತರ ಹಾಲೆಂಡ್ ಅಥವಾ ನೆದರ್ಲ್ಯಾಂಡ್.
ಉತ್ತರ : ಡಚ್ಚರು.
ಉತ್ತರ : 1602
ಉತ್ತರ : 1613.
ಉತ್ತರ : ಜಹಂಗೀರ,
ಉತ್ತರ : ಸರ್, ಥಾಮಸ್ ರೋ (1617ರಲ್ಲಿ)
ಉತ್ತರ : ಎರಡನೇ ಚಾಲ್ರ್ಸ, ( 1668ರಲ್ಲಿ )
ಉತ್ತರ : ಕಲ್ಕತ್ತಾ.
ಉತ್ತರ : 1664.
ಉತ್ತರ : ಸೂರತ್ (1668ರಲ್ಲಿ)
ಉತ್ತರ : ಪಾಂಡಿಚೇರಿ ಅಥವಾ ಪುದುಚೇರಿ.
ಉತ್ತರ : ಡೂಪ್ಲೆ.
ಉತ್ತರ : ಸಿರಾಜ್ ಉದ್ ದೌಲ್.
ಉತ್ತರ : ಮೀರ್ ಜಾಫರ್.
ಉತ್ತರ : ಮೀರ್ ಕಾಸಿಂ.
ಉತ್ತರ : ಮೊಗಲ್ ದೊರೆ 2ನೇ ಷಾ ಆಲಂ.
ಉತ್ತರ : ರಾಬರ್ಟ ಕ್ಲೈವ್ (1765)
ಉತ್ತರ : ಕಾನ್ಸ್ಟಾಂಟಿನೋಪಲ್.
ಉತ್ತರ : ಕಾನ್ಸ್ಟಾಂಟಿನೋಪಲ್.
ಉತ್ತರ : ಮುಕ್ತ ವ್ಯಾಪಾರ ಮಾಡಲು ಪರವಾನಗಿ ನೀಡುವುದು.
ಉತ್ತರ : ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾ ಶಕ್ತಿಯನ್ನು ಬಲಪಡಿಸಲು.
ಉತ್ತರ : ಗೋವಾ.
ಉತ್ತರ : ಲಾಬೋರ್ಡಿನಾ.
ಉತ್ತರ : ಏಕ್ಸ್-ಲಾ-ಚಾಪಲ್ ಒಪ್ಪಂದ.
ಉತ್ತರ : ಪಾಂಡಿಚೇರಿ ಒಪ್ಪಂದ.
ಉತ್ತರ : ಪ್ಯಾರೀಸ್ ಒಪ್ಪಂದ.
ಉತ್ತರ : ಕೌಂಟ್ ಡಿ ಲಾಲಿ
38. 3ನೇ ಕಾರ್ನಾಟಿಕ್ ಯುದ್ಧದಲ್ಲಿ ಫ್ರೆಂಚರನ್ನು ಸೋಲಿಸಿದ ಇಂಗ್ಲಿಷ ಸೇನಾಧಿಕಾರಿ
ಉತ್ತರ : ಸರ್ ಐರ್ಕೂಟ.
ಉತ್ತರ : - ಬಂಗಾಳ
1. ಯುರೋಪಿನಲ್ಲಿ ಭಾರತದ ಯಾವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇತ್ತು?
1. ಮಧ್ಯಕಾಲದಲ್ಲಿ ಯುರೋಪ್, ಭಾರತ ಮತ್ತು ಇತರ ಏಷ್ಯಾ ದೇಶಗಳ ನಡುವೆ ವ್ಯಾಪಾರ ಹೇಗೆ ನಡೆಯುತ್ತಿತ್ತು? ಅಥವಾ
ಕಾನ್ಸ್ಟಾಂಟಿನೋಪಲ್ ನಗರವು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದೇ ಪರಿಗಣಿಸಲ್ಪಟ್ಟಿತು. ಈ ಹೇಳಿಕೆಯನ್ನು ಸಮರ್ಥಿಸಿ. ಅಥವಾ
‘ಕಾನ್ಸ್ಟಾಂಟಿನೋಪಲ್’ ನಗರವು ಮಧ್ಯಯುಗದ ಅಂತರಾಷ್ಟ್ರೀಯ ಸರಕು ವಿನಿಮಯ ಕೇಂದ್ರವಾಗಿತ್ತು’. ಸಮರ್ಥಿಸಿ.
‚ಕಾನ್ಸ್ಟಾಂಟಿನೋಪಲ್ ನಗರದ ಪತನವು ಏಷ್ಯಾಕ್ಕೆ ಸಮುದ್ರ ಮಾರ್ಗಗಳ ಅನ್ವೇಶಣೆಗೆ ದಾರಿ ಮಾಡಿಕೊಟ್ಟಿತು‛ ಈ ಶಿರ್ಷಿಕೆಯನ್ನು ಸಮರ್ಥಿಸಿ.
* ದಿಕ್ಸೂಚಿ,
4. ಅಲ್ಫಾನ್ಸೋ ಅಲ್ಬುಕರ್ಕ ಭಾರತದಲ್ಲಿ ಪೋರ್ಚಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ ಏಕೆ?
* ಇವನು ಸಾ.ಶ. 1510ರಲ್ಲಿ ಬಿಜಾಪುರ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡನು.
ಮೊದಲ ಕರ್ನಾಟಿಕ್ ಯುದ್ಧಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.
.
6. ಎರಡನೇ ಕಾರ್ನಾಟಿಕ್ ಯದ್ಧ ನಡೆದ ಬಗೆಯನ್ನು ತಿಳಿಸಿ.
ಮೂರನೇ ಕರ್ನಾಟಿಕ್ ಯುದ್ಧಕ್ಕೆ ಕಾರಣ ಮತ್ತು ಪರಿಣಾಮಗಳನ್ನು ತಿಳಿಸಿ.
ಪ್ಲಾಸಿ ಕದನಕ್ಕೆ ಕಪ್ಪು ಕೋಣೆ ದುರಂತ ಹೇಗೆ ಕಾರಣವಾಯಿತು?
ಬ್ರಿಟಿಷರು ಮೀರ್ ಖಾಸಿಂನನ್ನು ಬಂಗಾಳದ ನವಾಬ ಹುದ್ದೆಯಿಂದ ಪದಚ್ಯುತಗೊಳಿಸಿದರು ಏಕೆ?
ಬಕ್ಸಾರ್ ಕದನವು ಬ್ರಿಟಿಷರಿಗೆ ಭಾರತದಲ್ಲಿ ಭದ್ರವಾಗಿ ನೆಲಯೂರಲು ಹೇಗೆ ಸಹಕರಿಸಿತು?
****
Karnataka Edcucations | 10ನೇ ತರಗತಿ ಸಮಾಜ ವಿಜ್ಞಾನ | ಅಧ್ಯಾಯ 1 ಭಾರತಕ್ಕೆ ಯುರೋಪಿಯನ್ನರ ಆಗಮನ | ಸ್ಕೋರಿಂಗ್ ಪ್ಯಾಕೇಜ್ | ಪಾಸಿಂಗ್ ಪ್ಯಾಕೇಜ್ |
Comments
Post a Comment
If any doubt Comment me