ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ | 9ನೇ ತರಗತಿ ಸಮಾಜ ವಿಜ್ಞಾನ | 9ನೇ ತರಗತಿ ಇತಿಹಾಸ ಪ್ರಶ್ನೋತ್ತರಗಳು |
ಇತಿಹಾಸ ಅಧ್ಯಾಯ-9
ಕ್ರಾಂತಿಗಳು ಮತ್ತು ರಾಷ್ಟ್ರಗಳ ಏಕೀಕರಣ
I. ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ.
1. ಇಂಗ್ಲೆಂಡ್ ಅಟ್ಲಾಂಟಿಕ್ ತೀರದಲ್ಲಿ ಸ್ಥಾಪಿಸಿದ ಹದಿಮೂರು ವಸಾಹತುಗಳನ್ನು ______ ಎಂದು ಕರೆಯಲಾಗಿತ್ತು.
ಉತ್ತರ : ಹೊಸ ಇಂಗ್ಲೀಷ್ ವಸಾಹತುಗಳು
2. 1774 ರಲ್ಲಿ ಹದಿಮೂರು ವಸಾಹತುಗಳ ಪ್ರತಿನಿಧಿಗಳು ಸಭೆ ಸೇರಿದ್ದು ______ ದಲ್ಲಿ
ಉತ್ತರ : ಫಿಲಿಡೆಲ್ಫಿಯಾ
3. ಅಮೆರಿಕ ಸ್ವಾತಂತ್ರ ಘೋಷಣೆ ಆದದ್ದು ______ ರಂದು
ಉತ್ತರ : 1776 ಜುಲೈ 4
4. ಸ್ಪಿರಿಟ್ ಆಫ್ ಲಾಸ್ ನ ಕರ್ತೃ ______
ಉತ್ತರ : ಮಾಂಟೆಸ್ಕೂ
5. ‘ತರುಣ ಇಟಲಿ’ ಎಂಬ ಪಕ್ಷವನ್ನು ಇಟಲಿಯಲ್ಲಿ ಕಟ್ಟಿದವನು ______
ಉತ್ತರ : ಮ್ಯಾಜಿನಿ
6. ‘ರಕ್ತ ಮತ್ತು ಕಬ್ಬಿಣ’ ತತ್ವವನ್ನು ಪ್ರತಿಪಾದಿಸಿವನು ______
ಉತ್ತರ : ಬಿಸ್ಮಾರ್ಕ್
II. ಕೆಳಕಂಡ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
1. ಅಮೆರಿಕದ ಸ್ವಾತಂತ್ರ ಸಂಗ್ರಾಮಕ್ಕೆ ಕಾರಣಗಳನ್ನು ಹೆಸರಿಸಿ.
ಉತ್ತರ : ಅಮೆರಿಕದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣಗಳು:
• ವಸಾಹತುಗಳ ಬಗ್ಗೆ ಇಂಗ್ಲೇಂಡಿನ ಧೋರಣೆ ಮತ್ತು ವಸಾಹತುಗಳಲ್ಲಿ ಬೆಳೆಯಲು ಆರಂಭಗೊಂಡ ಸ್ವಾತಂತ್ರ್ಯ ಪ್ರೇಮ,
• ಸಪ್ತವಾರ್ಷಿಕ ಯುದ್ಧದ ಪರಿಣಾಮಗಳು,
• ನೌಕಾ ಕಾಯಿದೆಗಳು,
• ಥಾಮಸ್ ಪೈನ್, ಜಾನ್ ಆಡಮ್ಸ್, ಸ್ಯಾಮುಯಲ್ ಆಡಮ್ಸ್, ಜಾನ್ ಎಡ್ವರ್ಡ್ ಕೋಕ್ ಮತ್ತು ಬೆಂಜಮಿನ್ ಫ್ರಾಂಕ್ ಲಿನ್ ಮುಂತಾದ ಬರಹಗಾರರ ಪ್ರಭಾವ,
• ಕ್ವಿಬೆಕ್ ಕಾಯಿದೆ,
• ಟೌನ್ ಶೆಂಡ್ ತೆರಿಗೆಗೆಳು
• ಬಾಸ್ಟನ್ ಚಹಾಕೂಟ ಮುಂತಾದ ಕಾರಣಗಳಿಂದಾಗಿ ಅಮೇರಿಕದಲ್ಲಿ ಕ್ರಾಂತಿ ಉಂಟಾಯಿತು.
2. ಅಮೆರಿಕ ಸ್ವಾತಂತ್ರ್ಯ ಸಂಗ್ರಾಮದ ಮಹತ್ವವನ್ನು ತಿಳಿಸಿ.
ಉತ್ತರ : ಅಮೆರಿಕ ಸ್ವತಂತ್ರ ಸಂಗ್ರಾಮದ ಮಹತ್ವ:
• ಇದು ಫ್ರಾನ್ಸ್ ಮಹಾಕ್ರಾಂತಿಗೆ ಪ್ರಚೋದನೆ ನೀಡಿತು.
• ವಸಾಹತುಗಾರರ ಪಕ್ಷ ವಹಿಸಿ ಹೋರಾಡಿದ ಅನೇಕ ಫ್ರೇಂಚರು ಫ್ರಾನ್ಸಿನ ಮಹಾಕ್ರಾಂತಿಯ ನಾಯಕರಾದರು.
• ಅಮೆರಿಕದಲ್ಲಿನ ಅನೇಕ ಸ್ಪೈನ್ ಮತ್ತು ಪೋರ್ಚುಗಲ್ ನ ವಸಾಹತುಗಳು ತಮ್ಮ ತಾಯ್ನಾಡಿನ ವಿರುದ್ಧ ದಂಗೆ ಎದ್ದು ಸ್ವತಂತ್ರ್ಯರಾಗಲು ಉತ್ತೇಜನ ಪಡೆದವು.
• ಅಮೆರಿಕಾ ಸಂಯುಕ್ತ ಸಂಸ್ಥಾನ ಎಂಬ ಹೊಸ ರಾಷ್ಟ್ರದ ಉದಯವಾಯಿತು.
3. ಫ್ರಾನ್ಸಿನ ಕ್ರಾಂತಿಗೆ ಆರ್ಥಿಕ ಅಂಶಗಳು ಹೇಗೆ ಕಾರಣವಾದವು.
ಉತ್ತರ : * ಫ್ರಾನ್ಸ್ ಕೃಷಿ ಪ್ರಧಾನವಾದ ದೇಶವಾಗಿತ್ತು.
• ಕೃಷಿ ಪದ್ಧತಿಯಲ್ಲಿ ಅಭಿವೃದ್ಧಿಗಳು ಆಗಿದ್ದರೂ ಸಹ, ಕೃಷಿ ಬಹಳ ಹಿಂದುಳಿದಿತ್ತು.
• ಭೂಮಿಯ ಉತ್ಪತ್ತಿ ಬಹಳ ಕಡಿಮೆ ಇತ್ತು.
• ರೈತರೇ ಹೆಚ್ಚಿನ ತೊಂದರೆಗೊಳಗಾಗಿದ್ದವರು.
• ಬರಗಾಲಗಳು ಸಾಮಾನ್ಯವಾಗಿದ್ದವು.
• ಇದರಿಂದ ಆಹಾರಕ್ಕಾಗಿ ದಂಗೆಗಳಾಗುತ್ತಿದ್ದವು.
• ಕೈಗಾರಿಕೆಗಳು ವೃತ್ತಿಸಂಘಗಳ ಅಧೀನದಲ್ಲಿದ್ದವು.
• ಆಂತರಿಕ ಅಡ್ಡಿಗಳಿಂದಲೂ ಮತ್ತು ಅಧಿಕಾರಿಗಳ ಅತಿಯಾದ ಮಧ್ಯ ಪ್ರವೇಶದಿಂದಲೂ ಅವುಗಳ ಬೆಳವಣಿಗೆ ಕುಂಠಿತಗೊಂಡಿತ್ತು.
• ಇದರ ಫಲವಾಗಿ ಉತ್ಪಾದನೆ ಕೆಳಮಟ್ಟದಲ್ಲಿತ್ತು.
• ಇವುಗಳೆಲ್ಲವು ಫ್ರಾನ್ಸಿನ ಕ್ರಾಂತಿಗೆ ಆರ್ಥಿಕ ಕಾರಣಗಳಾಗಿವೆ.
4. ಇಟಲಿಯ ಏಕೀಕರಣದಲ್ಲಿ ಗ್ಯಾರಿಬಾಲ್ಡಿಯ ಪಾತ್ರವೇನು?
ಉತ್ತರ : * ಗ್ಯಾರಿಬಾಲ್ಡಿ ಒಬ್ಬ ಯೋಧ, ಯೋರಾಟಗಾರ.
• ಇವನು “ತರುಣ ಇಟಲಿ” ಪಕ್ಷವನ್ನು ಸೇರಿ ಅನೇಕ ಸಾರಿ ಅದರ ಕ್ರಾಂತಿಯ ನಾಯಕತ್ವವನ್ನು ವಹಿಸಿದ್ದನು.
• ಅನಂತರ “ಕೆಂಪಂಗಿ ದಳ” ಎಂಬ ಸೈನ್ಯವನ್ನು ವ್ಯವಸ್ಥೆಗೊಳಿಸಿ ಸಾರ್ಡೀನಿಯ ಜೊತೆಗೂಡಿ ಆಸ್ಟ್ರೀಯಾದೊಡನೆ ಹೋರಾಡಿದ.
• 1860ರಲ್ಲಿ ಎರಡು ಸಿಸಿಲಿಗಳ ರಾಜ್ಯದ ಮೇಲೆ ತನ್ನ “ಕೆಂಪಂಗಿ ದಳ”ದೊಡನೆ ದಾಳಿ ಮಾಡಿ ಅದನ್ನು ಆಕ್ರಮಿಸಿ ಇಟಲ ದೇಶದ ಏಕೀಕರಣವನ್ನು ತ್ವರಿತಗೊಳಿಸಿದನು.
5. ಜರ್ಮನಿಯ ಏಕೀಕರಣ ಶಿಲ್ಪಿ ಯಾರು? ಅವನ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.
ಉತ್ತರ : * ಜರ್ಮನಿಯ ಏಕೀಕರಣದ ಪ್ರಧಾನ ಶಿಲ್ಪಿ ಆಟ್ಟೋವಾನ್ ಬಿಸ್ಮಾರ್ಕ್.
• ಇವನು ಪ್ರಷ್ಯಾ ರಾಜ್ಯದ ದೊರೆ ಒಂದನೇ ವಿಲಿಯಂನ ಮುಖ್ಯಮಂತ್ರಿಯಾಗಿದ್ದನು.
• ಅವನು ಸರ್ಕಾರಿ ನೌಕರನಾಗಿ, ಜರ್ಮನಿಯ ಶಾಸನ ಸಭೆ ‘ಡಯಟ್’ನ ಸದಸ್ಯನಾಗಿ, ವಿದೇಶಗಳಲ್ಲಿ ರಾಯಭಾರಿಯಾಗಿ ವೃತ್ತಿಯನ್ನು ಆರಂಭಿಸಿ ಪ್ರಾಮುಖ್ಯತೆಗೆ ಬಂದಿದ್ದನು.
• ಇವನು ಆಸ್ಟ್ರೀಯ ನಾಯಕತ್ವದಲ್ಲಿನ ಜರ್ಮನ್ ರಾಜ್ಯಗಳ ಸಂಘದ ಕಾರ್ಯವೈಖರಿಗಳ ಬಗ್ಗೆ ಸೂಕ್ಷ್ಮ ಪರಿಚಯ ಹೊಂದಿದ್ದು, ಅದರ ದೌರ್ಬಲ್ಯಗಳೇನು ಎಂಬುದನ್ನು ತಿಳಿದಿದ್ದ.
• ಆಸ್ಟ್ರೀಯಾ ಫ್ರಾನ್ಸ್ ಮತ್ತು ರಷ್ಯಾಗಳಲ್ಲಿ ರಾಯಭಾರಿಯಾಗಿ ಕೆಲಸ ಮಾಡಿ, ಅವುಗಳ ಬಲಾಬಲಗಳನ್ನು ತಿಳಿದಿದ್ದ.
• ಜರ್ಮನ್ ಏಕೀಕರಣವನ್ನು ಸಾಧಿಸಲು ಪ್ರಷ್ಯಾ ಒಂದೇ ಸಮರ್ಥಶಾಲಿ ಎಂಬುದನ್ನು ಮನಗಂಡಿದ್ದ ಹಾಗೂ ಪ್ರಷ್ಯಾವನ್ನು ಜರ್ಮನಿಯಲ್ಲಿ ಅಗ್ರರಾಜ್ಯವನ್ನಾಗಿ ಮಾಡಬೇಕೆಂದು ಅಪೇಕ್ಷಿಸಿದ.
• ಈ ಉದ್ದೇಶದ ಸಾಧನೆಗಾಗಿ ಅವನ ಗುರಿಗಳು ಎರಡು ಬಗೆಯಾಗಿದ್ದವು.
• ಒಂದು ಆಸ್ಟ್ರೀಯಾವನ್ನು ಜರ್ಮನ್ ರಾಜ್ಯಗಳ ಸಂಘದಿಂದ ಹೊರಗಟ್ಟುವುದು.
• ಮತ್ತೊಂದು ಜರ್ಮನಿಯಲ್ಲಿ ಲೀನವಾಗಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳುವುದಕ್ಕಿಂತ ಜರ್ಮನಿಯನ್ನೇ ಪ್ರಾಷ್ಯಾಮಯವಾಗಿ ಮಾಡುವುದು.
• ಅಂದರೆ ಪ್ರಷ್ಯಾದ ಸಂಸ್ಕೃತಿ, ಸಂಪ್ರದಾಯ, ಆಡಳಿತ ಯಂತ್ರ ಮತ್ತು ಸೈನಿಕ ಬಲವನ್ನು ಜರ್ಮನಿ ದೇಶಕ್ಕೆಲ್ಲ ವಿಸ್ತರಿಸುವುದು.
• ಬಿಸ್ಮಾರ್ಕ್ ಜರ್ಮನಿಯ ಸಮಸ್ಯೆಯನ್ನು ಬಗೆಹರಿಸಲು “ರಕ್ತ ಮತ್ತು ಕಬ್ಬಿಣ” ತತ್ವದಿಂದ ಮಾತ್ರ ಸಾಧ್ಯವೆಂದು ಮನಗಂಡಿದ್ದನು.
• ರಕ್ತ ಮತ್ತು ಕಬ್ಬಿಣ ತತ್ವ ಎಂದರೆ ಯುದ್ಧ ನೀತಿ.
• ಇದರಿಂದ ಅವನು ಒಂದು ಬಲವಾದ ಸೈನ್ಯವನ್ನು ಕಟ್ಟಿದನು.
• ಬಿಸ್ಮಾರ್ಕ್ ನು ತನ್ನೇಲ್ಲ ನೀತಿಗಳ ಮೂಲಕ ಜರ್ಮನಿಯನ್ನು ಏಕೀಕರಣಗೊಳಿಸಿದನು.
9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
Comments
Post a Comment
If any doubt Comment me