ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಪ್ರಶ್ನೋತ್ತರಗಳು |
2. ಮಧ್ಯಕಾಲೀನ ಭಾರತ ಮತ್ತು ರಾಜಕೀಯ ಸಂಕ್ರಮಣ
I ಖಾಲಿ ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ಗುರ್ಜರ-ಪ್ರತಿಹಾರ ರಜಪೂತ ಮನೆತನ ಸ್ಥಾಪಕ _____
ಉತ್ತರ: ನಾಗಭಟ್ಟ
2. ಪೃಥ್ವಿರಾಜ ಚೌವ್ಹಾಣನು ಮೊದಲನೆಯ ತರೈನ್ ಕಾಳಗದಲ್ಲಿ
_____ ನನ್ನು ಸೋಲಿಸಿದನು.
ಉತ್ತರ: ಘೋರಿ ಮಹಮ್ಮದ್
3. ಮೊಹಮ್ಮದ್ ಘೋರಿಯ ಪ್ರಮುಖ ದಂಡನಾಯಕ ____
ಉತ್ತರ: ಕುತ್ಬುದ್ದೀನ್ ಐಬಕ್
4. ದೆಹಲಿ ಸುಲ್ತಾನರಲ್ಲಿ ಆಳ್ವಿಕೆ ಮಾಡಿದ ಪ್ರಥಮ ಮಹಿಳೆ _____
ಉತ್ತರ: ರಜಿಯಾ ಸುಲ್ತಾನಾ
5. ಖಿಲ್ಜಿ ವಂಶದ ಪ್ರಸಿದ್ಧ ಸುಲ್ತಾನ _____
ಉತ್ತರ: ಅಲಾವುದ್ದೀನ್ ಖಿಲ್ಜಿ
6. ತುಘಲಕ್ ಕಾಲದಲ್ಲಿ ರಾಜಧಾನಿಯನ್ನು ದೆಹಲಿಯಿಂದ ____ ಗೆ ವರ್ಗಾಯಿಸಲಾಯಿತು.
ಉತ್ತರ: ದೇವಗಿರಿ
II ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ರಜಪೂತ ಅರಸರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ವಿವರಿಸಿ.
ಉತ್ತರ: ರಜಪೂತ ಅರಸರು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳೆಂದರೆ:
* ರಜಪೂತ ಅರಸರು ಸ್ವತ: ವಿದ್ವಾಂಸರಾಗಿದ್ದಾರೆ.
* ಭೋಜ, ಮುಂಜ, ಮೊದಲಾದ ಅರಸರೇ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ.
* ಮುಂಜ ರಾಜನು ಪದ್ಮಗುಪ್ತ, ಹಲಾಯುಧ ಎಂಬ ಕವಿಗಳಿಗೆ ಆಶ್ರಯ ನೀಡಿದ್ದನು.
* ಭೋಜ ರಾಜನ ಕಾಲದಲ್ಲಿ ಶಾಂತಿಸೇನ, ಪ್ರಭಾಚಂದ್ರ ಸೂರಿ, ಘನಪಾಲ ಎಂಬ ಜೈನ ಪಂಡಿತರು ಆಶ್ರಯ ಪಡೆದಿದ್ದರು.
* ಜಯದೇವನ ʻಗೀತಗೋವಿಂದʼ
* ಭಾರವಿಯ ʻಕಿರಾತಾರ್ಜುನೀಯʼ
* ಭರ್ತೃಹರಿಯ ʻರಾವಣ ವಧಾʼ.
* ಮಹೇಂದ್ರಪಾಲನ ʻಕಾವ್ಯ ಮೀಮಾಂಸೆʼ ಕಾವ್ಯಗಳು ಇವರ ಕಾಲದಲ್ಲಿ ರಚನೆಯಾದವು.
* ನಾಟಕಗಳಾದ ರಾಜಶೇಖರ ರಚಿಸಿದ ʻಬಾಲ ರಾಮಾಯಣʼ ಮತ್ತು ʻಕರ್ಪೂರ ಮಂಜರಿʼ
* ಭವಭೂತಿ ರಚಿಸಿದ ʻಮಹಾವೀರಚರಿತʼ ಹಾಗೂ ʻಉತ್ತರರಾಮಚರಿತʼ
* ಐತಿಹಾಸಿಕ ಕೃತಿಗಳಾದ ಕಲ್ಲಣನ ʻರಾಜತರಂಗಿಣಿʼ
* ಜಯನಿಕನ ʻಪೃಥ್ವಿರಾಜ ವಿಜಯʼ
* ಹೇಮಚಂದ್ರನ ʻಕುಮಾರಪಾಲಚರಿತʼ
* ರಜಪೂತ ಅರಸರ ಜೀವನ ಕೃತಿಗಳಾದ ʻಪೃಥ್ವಿರಾಜ ರಾಸೋʼವನ್ನು ಚಂದ್ ಬರದಾಯಿ ರಚಿಸಿದನು
* ʻಭೋಜ ಪ್ರಬಂಧʼ ವನ್ನು ಬಲ್ಲಾಳ ಎಂಬುವರು ರಚಿಸಿದರು.
* ಈ ಕಾಲದಲ್ಲಿ ಗುಜರಾತಿ, ರಾಜಸ್ತಾನಿ, ಹಿಂದಿ ಭಾಷೆಗಳು ಅಭಿವೃದ್ಧಿಯಾದವು.
* ರಜಪೂತರು ವಿದ್ಯಾಕೇಂದ್ರಗಳಾದ ನಳಂದಾ, ಕಾಶಿ, ವಿಕ್ರಮಶಿಲ, ಉಜ್ವಯಿನಿಗಳಿಗೆ ಪ್ರೋತ್ಸಾಹ ನೀಡಿದರು.
2. ಇಲ್ತಮಶ್ನ ಆಡಳಿತ ಪದ್ಧತಿಯನ್ನು ಸ್ಥೂಲವಾಗಿ ವಿವರಿಸಿ?
ಉತ್ತರ: ಇಲ್ತಮಶ್ ರಾಜ್ಯವನ್ನು ಅನೇಕ ಇಕ್ತಾಗಳನ್ನಾಗಿ ವಿಂಗಡಿಸಿ.
q ಆಡಳಿತ ನಿರ್ವಹಣೆಗಾಗಿ ಇಕ್ತಾದಾರನ್ನು ನೇಮಿಸಿದನು.
q ಆಡಳಿತದಲ್ಲಿ ಸಲಹೆ ಸೂಚನೆ ನೀಡಲು ʻನಲವತ್ತು ಸರದಾರರ ಕೂಟʼ ನೇಮಕ ಮಾಡಿದನು.
q ಪ್ರಧಾನ ಮಂತ್ರಿ, ನ್ಯಾಯಾಧೀಶರು ಸುಲ್ತಾನನಿಗೆ ಸಲಹೆ ನೀಡುತ್ತಿದ್ದರು.
q ಇಲ್ತಮಶ್ನು ಬಂಗಾರ ಮತ್ತು ಬೆಳ್ಳಿಯ ನಾಣ್ಯಗಳನ್ನು ಚಲಾವಣೆಗೆ ತಂದನು.
q ಇವನು ಕುತ್ಬುದ್ದೀನನ ಕಾಲದಲ್ಲಿ ನಿರ್ಮಿಸಲು ಪ್ರಾರಂಭವಾಗಿದ್ದ ದೆಹಲಿಯ ಕುತುಬ್ಮಿನಾರನ್ನು ಪೂರ್ಣಗೊಳಿಸಿದನು.
3. ಅಲ್ಲಾವುದ್ಧೀನ್ ಖಿಲ್ಜಿಯ ಆಡಳಿತಾತ್ಮಕ ಸುಧಾರಣೆಗಳಾವುವು?
ಉತ್ತರ: ಅಲ್ಲಾವುದ್ದೀನ್ ಖಿಲ್ಜಿಯು ಆಡಳಿತದಲ್ಲಿ ಹಲವು ಸುಧಾರಣೆಗಳನ್ನು ಕೈಗೊಂಡನು ಅವುಗಳೆಂದರೆ:-
q ಧಾರ್ಮಿಕ ದತ್ತಿ ಇನಾಮ್ ಭೂಮಿ ಮತ್ತು ಸಹಾಯಧನಗಳನ್ನು ರದ್ದುಗೊಳಿಸಿದನು.
q ದಕ್ಷ ಗೂಢಾಚರ ವ್ಯವಸ್ಥೆ ರಚಿಸಿದನು.
q ಮದ್ಯಪಾನ, ಮಾದಕ ವಸ್ತುಗಳ ಮಾರಾಟ, ಪಗಡೆಯಾಟಗಳನ್ನು ನಿಷೇಧಿಸಿದನು.
q ಸರದಾರರ ಕೂಟ, ಸಾರ್ವಜನಿಕರೊಂದಿಗಿನ ಸ್ನೇಹ ಸಮಾರಂಭ ಹಾಗೂ ಗಣ್ಯವರ್ಗಗಳ ನಡುವೆ ವೈವಾಹಿಕ ಸಂಬಂಧಗಳನ್ನು ನಿರ್ಬಂಧಿಸಿದನು.
q ಇವನ ಕಾಲದಲ್ಲಿ ಸಣ್ಣ ಸಣ್ಣ ಹಿಡುವಳಿಯ ಭೂಮಿಗಳಲ್ಲಿ ವ್ಯವಸಾಯ ಮಾಡುತಿದ್ದ ಕೆಳವರ್ಗದ ರೈತರಿಂದ ಹಿಡಿದು ದೊಡ್ಡ ದೊಡ್ಡ ಭೂ ಮಾಲೀಕರೂ ಸಹ ತೆರಿಗೆ ಪಾವತಿಸಲೇಬೇಕಾಗಿತ್ತು.
q ರೈತರಿಂದ ನಿಗದಿತ ಪ್ರಮಾಣದ ತೆರಿಗೆಯನ್ನು ಸಂಗ್ರಹಿಸಲು ಕಂದಾಯ ಅಧಿಕಾರಿಗಳನ್ನು ನೇಮಕ ಮಾಡಿದನು.
4. ಮೊಹಮ್ಮದ್-ಬಿನ್ ತುಘಲಕ್ನು ಜಾರಿಗೊಳಿಸಿದ ಆಡಳಿತ ಸುಧಾರಣೆಗಳಾವುವು?
ಉತ್ತರ: ಕಂದಾಯ ಸುಧಾರಣೆ:
q ಸಾಮ್ರಾಜ್ಯದ ಭೂಕಂದಾಯಕ್ಕೆ ಸಂಬಂಧಿಸಿದಂತೆ ಭೂಮಿಯ ಎಲ್ಲ ವಿವರಗಳನ್ನು ಒಳಗೊಂಡ ಅಧಿಕೃತ ದಾಖಲೆಗಳಿರುವ ಪುಸ್ತಕವನ್ನು ಜಾರಿಗೊಳಿಸಿದನು.
q ಕೃಷಿ ಇಲಾಖೆಯನ್ನು ಸ್ಥಾಪಿಸಿದನು.
q ಕೃಷಿಗೆ ಒಳಪಡದ ಭೂಮಿಗಳಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಲು ರೈತರಿಗೆ ಪ್ರೋತ್ಸಾಹಿಸಿ ಹಲವು ತೆರಿಗೆ ವಿನಾಯಿತಿಯನ್ನು ನೀಡಿದನು.
q ರೈತರಿಗೆ ಆರ್ಥಿಕ ನೆರವು ನೀಡಲು ತಕಾವಿ ಸಾಲ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದನು.
q ಆದರೂ ದೋ-ಅಬ್ ಪ್ರದೆಶದ ರೈತರು ಇವನ ಕಾಲದಲ್ಲಿ ಹೆಚ್ಚು ಭೂ ಕಂದಾಯವನ್ನು ಕಟ್ಟಬೇಕಾಯಿತು.
ರಾಜಧಾನೀಯ ವರ್ಗಾವಣೆ:
q ಮಹಮ್ಮದ್ ಬಿನ್ ತುಘಲಕ್ ತನ್ನ ರಾಜಧಾನಿಯನ್ನು ದೆಹಲಿಯಿಂದ ಮಧ್ಯ ಭಾಗದಲ್ಲಿದ್ದ ದೇವಗಿರಿಗೆ ವರ್ಗಾಯಿಸಿದನು.
q ಇದರ ಮುಖ್ಯ ಉದ್ದೇಶ ವಿಶಾಲವಾದ ಸಾಮ್ರಾಜ್ಯಕ್ಕೆ ರಾಜಧಾನಿ ಕೇಂದ್ರಭಾಗದಲ್ಲಿರಬೇಕು. ಹಾಗೂ
q ಪರಕೀಯ ದಾಳಿಗಳಿಂದ ರಕ್ಷಿಸಲು ಅನುಕೂಲವಾಗಿರಬೇಕೆಂಬುದಾಗಿತ್ತು.
q ಯೋಜನೆ ಉತ್ತಮವಾಗಿದ್ದರೂ ಸ್ಥಳಾಂತರಕ್ಕೆ ಸೂಕ್ತ ಏರ್ಪಾಡುಗಳನ್ನು ಕೈಗೊಂಡಿರಲಿಲ್ಲ.
q ಅಸಂಖ್ಯಾತ ಜನರು ಸಂಕಷ್ಟಕ್ಕೀಡಾದರು.
ಸಾಂಕೇತಿಕ ನಾಣ್ಯ ಪ್ರಯೋಗ:
q ನಾಣ್ಯಗಳ ಮೌಲ್ಯಗಳನ್ನು ತನ್ನ ಕಾಲದ ಬಂಗಾರ ಮತ್ತು ಬೆಳ್ಳಿಯ ಮೌಲ್ಯಕ್ಕೆ ಸರಿಹೊಂದುವಂತೆ ಮಾಡಿದನು.
q ʻದಿನಾರʼ ಎಂಬ ಬಂಗಾರದ ಹಾಗೂ ʻಅದಲಿʼ ಎಂಬ ಬೆಳ್ಳಿ ನಾಣ್ಯಗಳನ್ನು ಚಲಾವಣೆಗೆ ತಂದನು.
q ಅವುಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಿದ್ದನು.
q ಕೆಲವು ವರ್ಷಗಳ ನಂತರ ತಾಮ್ರ ಮತ್ತು ಹಿತ್ತಾಳೆಯ ಸಂಕೇತಿಕ ನಾಣ್ಯಗಳ ಚಲಾವಣೆಗೆ ತಂದನು.
5. ದೆಹಲಿ ಸುಲ್ತಾನರು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಾವುವು? ಉದಾಹರಿಸಿ.
ಉತ್ತರ: ದೆಹಲಿ ಸುಲ್ತಾನರು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು:-
q ದೆಹಲಿ ಸುಲ್ತಾನರು ಭಾರತದಲ್ಲಿ ʻಇಂಡೋ-ಇಸ್ಲಾಮಿಕ್ʼ ಎಂಬ ಹೊಸ ಶೈಲಿಯ ವಾಸ್ತುಶಿಲ್ಪವನ್ನು ಪರಿಚಯಿಸಿದರು.
q ಕಮಾನುಗಳು, ಗುಮ್ಮಟಗಳು ಹಾಗೂ ಮಿನಾರ್ಗಳು ಈ ಶೈಲಿಯ ಮುಖ್ಯ ಲಕ್ಷಣಗಳು.
q ದೆಹಲಿ ಸುಲ್ತಾನರು ಕೋಟೆ, ಮಸೀದಿ, ಅರಮನೆ, ಸಾರ್ವಜನಿಕ ಕಟ್ಟಡ ಮದರಸಾ, ಧರ್ಮ ಶಾಲೆಗಳನ್ನು ನಿರ್ಮಿಸಿದರು.
q ಇಂಡೋ-ಇಸ್ಲಾಮಿಕ್ ಶೈಲಿಗೆ ಉದಾಹರಣೆ: ದೆಹಲಿಯ ಕುವತ್-ಉಲ್-ಇಸ್ಲಾಂ ಮಸೀದಿ,
q ಕುತುಬ್ ಮೀನಾರ್,
q ಅಲೈ ದರವಾಜಾ,
q ಜಮೈತ್ ಖಾನಾ ಮಸಿದಿಗಳು.
Comments
Post a Comment
If any doubt Comment me