ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು | 9ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು | ಒಂಬತ್ತನೇ ತರಗತಿ ಇತಿಹಾಸ ಅಧ್ಯಾಯಗಳು |
ಅಧ್ಯಾಯ - 3. ಮತ ಪ್ರವರ್ತಕರು ಮತ್ತು ಸಮಾಜ ಸುಧಾರಕರು
I ಕೆಳಗೆ ಕೊಟ್ಟಿರುವ ವಾಕ್ಯಗಳನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.
1. ಶಂಕರಾಚಾರ್ಯರು ಕೇರಳದ _____ ಲ್ಲಿ ಜನಿಸಿದರು
ಉತ್ತರ: ಕಾಲಡಿ
2. ಜಗತ್ತು ಮಾಯೆ, ಬ್ರಹ್ಮ ಮಾತ್ರ ಸತ್ಯ ಎಂದು ಪ್ರತಿಪಾದಿಸಿದವರು _____
ಉತ್ತರ: ಶಂಕರಾಚಾರ್ಯರು
3. ದ್ವೈತ ಸಿದ್ದಾಂತದ ಪ್ರತಿಪಾದಕರು
____
ಉತ್ತರ: ಮಧ್ವಾಚಾರ್ಯರು
II ಕೆಳಕಂಡ ಪ್ರಶ್ನೆಗಳಿಗೆ ಗುಂಪುಗಳಲ್ಲಿ ಚರ್ಚಿಸಿ ಉತ್ತರಿಸಿರಿ.
1. ಅದ್ವೈತ ಸಿದ್ದಾಂತವನ್ನು ಕುರಿತು ವಿವರಿಸಿ
ಉತ್ತರ:
* ಶಂಕರರು ಅದ್ವೈತ ಸಿದ್ದಾಂತವನ್ನುಪ್ರತಿಪಾದಿಸಿದರು.
* ʻಅದ್ವೈತʼ ಎಂದರೆ ಏಕ ಅಥವಾ ಒಂದೆ ಎಂದರ್ಥ.
* ಇದರ ಪ್ರಕಾರ ಜೀವಾತ್ಮ ಮತ್ತು ಪರಮಾತ್ಮ ಬೇರೆ ಬೇರೆಯಲ್ಲ. ಎರಡೂ ಒಂದೇ.
* ಬ್ರಹ್ಮನೊಬ್ಬನೇ ಸತ್ಯ ಉಳಿದ ಜಗತ್ತು ಮಿಥ್ಯ.
* ಜಗತ್ತು ಒಂದು ಮಾಯೆ, ಬ್ರಹ್ಮ ಮಾತ್ರ ಸತ್ಯ.
* ಜ್ಞಾನ ಮಾರ್ಗದಿಂದ ನಾವು ಪ್ರಪಂಚದ ಮಾಯೆಯನ್ನು ತಿಳಿದು ಪರಮ ಸತ್ಯವಾದ ಬ್ರಹ್ಮನೊಡನೆ ನಮ್ಮ ಜೀವಾತ್ಮವನ್ನು ವಿಲೀನಗೊಳಿಸಬೇಕು.
* ಆಗ ಮಾತ್ರ ಎಲ್ಲರಿಗೂ ಮೋಕ್ಷ ಪ್ರಾಪ್ತಿ ಸಾಧ್ಯ.
2. ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ದಾಂತ ಯಾವುದು? ಅವರ ಮತವನ್ನು ಏನೆಂದು ಕರೆಯಲಾಗಿದೆ?
ಉತ್ತರ:
* ರಾಮಾನುಜಾರ್ಚಾರು ಪ್ರತಿಪಾದಿಸಿದ ಸಿದ್ದಾಂತ ವಿಶಿಷ್ಟಾದ್ವೈತ.
* ಇವರ ಮತವನ್ನು ಶ್ರೀವೈಷ್ಣವ ಮತ ಎಂದು ಕರೆಯಲಾಗಿದೆ.
3. ರಾಮಾನುಜಾಚಾರ್ಯರ ಸಿದ್ಧಾಂತದ ಸಾರವನ್ನು ವಿವರಿಸಿ.
ಉತ್ತರ:
* ರಾಮಾನುಚಾರ್ಯರು ಪ್ರತಿಪಾದಿಸಿದ ಸಿದ್ದಾಂತವನ್ನು ʻವಿಶಿಷ್ಟಾದ್ವೈತʼ ಎಂದರು ಕರೆಯಲಾಗಿದೆ.
* ಇದರ ಪ್ರಕಾರ ಜೀವ ಮತ್ತು ಪ್ರಕೃತಿ ಬ್ರಹ್ಮನ ಅಧೀನ.
* ಆತ್ಮ ಮತ್ತು ಪರಮಾತ್ಮ ಏಕಕಾಲದಲ್ಲಿ ಒಂದಾಗಲು ಸಾಧ್ಯವಿಲ್ಲವೇಂದು ತಿಳಿಸಿದರು.
* ಜಗತ್ತು ಬ್ರಹ್ಮನ ವ್ಯಕ್ತಗೊಂಡ ರೂಪವೆಂದು ಮತ್ತು ಜಗತ್ತು ಇಹಸತ್ಯವೆಂದು ಪ್ರತಿಪಾದಿಸಿದರು.
* ಮುಕ್ತಿ ಸಾಧನಗೆ ಭಕ್ತಿ ಮತ್ತು ಪ್ರಪತ್ತಿ (ಅತೀವ ಶರಣಾಗತ ಭಕ್ತಿ) ಬಹಳ ಮುಖ್ಯವೆಂದು ತಿಳಿಸಿದರು.
* ಜಾತಿವಾದವನ್ನು ಖಂಡಿಸಿದ ರಾಮಾನುಜರು ಭಕ್ತಿ ತತ್ವವನ್ನು ಎಲ್ಲಾ ಜಾತಿಯ ಜನರಿಗೂ ಉಪದೇಶಿಸಿದರು.
* ಆಸೆಗಳಿಂದ ದೂರಾಗಿ ಆತ್ಮ ಪರಿಶುದ್ಧತೆಯಿಂದ ಭಗವಂತನಿಗೆ ಶರಣಾಗಬೇಕೆಂದು ತಿಳಿಸಿದರು.
* ಹೀಗೆ ಮೋಕ್ಷ ಸಾಧನೆಗಾಗಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದರು.
4. ಮಧ್ವಾಚಾರ್ಯರು ಪ್ರತಿಪಾದಿಸಿದ ತತ್ವಗಳಾವುವು?
ಉತ್ತರ:
*ಮಧ್ವಾಚಾರ್ಯರ ಪ್ರಕಾರ ಜಗತ್ತು ಮಾಯೆಯಲ್ಲ. ಅದು ಪರಮಾತ್ಮನಷ್ಟೇ ಸತ್ಯವಾಗಿದೆ.
* ಇವುಗಳಲ್ಲಿ ಈಶ್ವರ ಮಾತ್ರ ಸ್ವತಂತ್ರ. ಉಳಿದ ಜಗತ್ತು ಮಿಥ್ಯೆ (ಭ್ರಮೆ) ರೂಪವಾದದ್ದು.
* ಪರಮಾತ್ಮನಿಗೂ, ಜೀವಿಗಳಿಗೂ ಸ್ವಾಮಿ-ಸೇವಕ ಸಂಬಂಧವಿದೆ.
* ವಿಷ್ಣು ಅಥವಾ ನಾರಾಯಣ ಒಬ್ಬನೇ ಸರ್ವೋತ್ತಮ.
* ವಿಷ್ಣುವನ್ನು ಭಕ್ತಿಯಿಂದ ಪೂಜಿಸುವುದರಿಂದ ಆತ್ಮೋದ್ಧಾರ ಅಥವಾ ಮುಕ್ತಿ ಸಾಧ್ಯವೆಂದು ತಿಳಿಸಿದರು.
5. ಬಸವೇಶ್ವರರ ಕಾಯಕ ತತ್ವದ ಬಗ್ಗೆ ಬರೆಯಿರಿ
ಉತ್ತರ:
* ಬಸವೇಶ್ವರರು ಕಾಯಕ ತತ್ವವನ್ನು ಪ್ರತಿಪಾದಿಸಿದರು.
* ಪ್ರತಿಯೊಬ್ಬರೂ ದುಡಿದು ತಿನ್ನಬೇಕು ಎನ್ನುವ ಸ್ವಾವಲಂಬನೆ ತತ್ವವನ್ನು ಪ್ರತಿಪಾದಿಸಿದರು.
* ಬಸವೇಶ್ವರರು ವೃತ್ತಿಯಲ್ಲಿ ಹಿರಿದು ಕಿರಿದು ಎಂಬುವುದಿಲ್ಲ ಎಂದು ಸಾರಿದರು.
*ತಮ್ಮ ಕಾಯಕ ತತ್ವದ ಮುಖಾಂತರ ಜನರಲ್ಲಿ ದುಡಿಮೆ ಸಂಸ್ಕೃತಿಯನ್ನು ಬೆಳೆಸಿದರು.
* ʻದೇಹವೇ ದೇಗುಲʼ ಎಂದು ಸಾರಿದ ಬಸವಣ್ಣನವರು ಈ ತತ್ವವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದರು.
6. ಅನುಭವ ಮಂಟಪವನ್ನು ಯಾರು ಪ್ರಾರಂಭಿಸಿದರು? ಅದರ ಉದ್ದೇಶಗಳಾವುವು?
ಉತ್ತರ: ಅನುಭವ ಮಂಟಪವನ್ನು ಬಸವೇಶವರರು ಪ್ರಾರಂಭಿಸಿದರು.
ಉದ್ದೇಶಗಳು:
* ಬಸವಾದಿಯಾಗಿ ಎಲ್ಲ ಶಿವಶರಣರು ಸಾಮಾಜಿಕ ಸಮಸ್ಯೆಗಳಾದ ಜಾತಿ ಮತ್ತು ಲಿಂಗ ತಾರತಮ್ಯ ಸಮಸ್ಯೆಗಳನ್ನು ಚರ್ಚಿಸುವುದು.
* ಧಾರ್ಮಿಕ ಅಂಕುಡೊಂಕುಗಳನ್ನು ಚರ್ಚಿಸುವುದು.
* ಚಿಕಿತ್ಸಕ ಸಂದೇಶಗಳ ಮೂಲಕ ಪರಿಹಾರವನ್ನು ಸೂಚಿಸುವುದು
* ಆಧ್ಯಾತ್ಮಕ ವಿಚಾರಗಳನ್ನು ಚರ್ಚಿಸುವುದು.
7. ಶಂಕರಾಚಾರ್ಯರು ರಚಿಸಿದ ಗ್ರಂಥಗಳನ್ನು ಹೆಸರಿಸಿ.
ಉತ್ತರ: ಶಂಕರಾಚಾರ್ಯರು ರಚಿಸಿದ ಗ್ರಂಥಗಳು
*ಶಂಕರಭಾಷ್ಯ
*ಆನಂದಲಹರಿ
*ಸೌಂದರ್ಯ ಲಹರಿ
*ಶಿವಾನಂದ ಲಹರಿ
*ವಿವೇಕ ಚೂಡಾಮಣಿ
*ಪ್ರಬುದ್ಧ ಸುಧಾಕರ
*ಧಕ್ಷಿಣಾಮೂರ್ತಿ ಸ್ತೋತ್ರ
9ನೇ ತರಗತಿ ಸಮಾಜ ವಿಜ್ಞಾನ ಎಲ್ಲಾ ಅಧ್ಯಾಯಗಳ ವಿಡಿಯೋ ಪಾಠಗಳು ಮತ್ತು ನೋಟ್ಸ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
Comments
Post a Comment
If any doubt Comment me