10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-5 ಎದೆಗೆ ಬಿದ್ದ ಅಕ್ಷರ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Edege Bidda Akshara |

karntakaeducations

ಗದ್ಯ - 5 : ಎದೆಗೆ ಬಿದ್ದ ಅಕ್ಷರ

10th Kannada Notes edege bidda akshara
Eduge Bidda Akshara


ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ:

1) ಇಂದಲ್ಲ ನಾಳೆ ಫಲ ಕೊಡುವ ಅಂಶಗಳಾವುವು ?

ಉತ್ತರ :  ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ


2) ಮನೆ ಮಂಚಮ್ಮ ಯಾರು ?

ಉತ್ತರ :  ಕಥೆಯಲ್ಲಿನ ಗ್ರಾಮದೇವತೆ


3) ಮನೆ ಮಂಚಮ್ಮನ ಕತೆ ಹೇಳಿದ ಕವಿ ಯಾರು ?

ಉತ್ತರ :  ಸಿದ್ದಲಿಂಗಯ್ಯ


4) ಶಿವಾನುಭವ ಶಬ್ದಕೋಶ ಬರೆದವರು ಯಾರು ?

ಉತ್ತರ :  ಫ. ಗು. ಹಳಕಟ್ಟಿ


5) ವಚನಕಾರರಿಗೆ ಯಾವುದು ದೇವರಾಗಿತ್ತು ?

ಉತ್ತರ :  ಅವರವರ ಪ್ರಜ್ಞೆಯೇ ದೇವರಾಗಿತ್ತು.


6) ಅಶೋಕ ಪೈ ಅವರ ವೃತ್ತಿ ಯಾವುದು ?

ಉತ್ತರ :  ಮನೋವೈದ್ಯರು


7) ದೇವನೂರರ ಪ್ರಕಾರ ದೇವರು ಯಾರು ?

ಉತ್ತರ :  ಚಾವಣಿಯಿಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇರಿಸಿದರೆ ಅದೇ ದೇವರು.


8) ಮಂಚಮ್ಮ ದೇವತೆ ಏನೆಂದು ಅಬ್ಬರ ಮಾಡುತ್ತಾಳೆ ?

ಉತ್ತರ :  ನಿಲ್ಸಿ ನನ್ ಮಕ್ಕಳಾ


9) ವೈಚಾರಿಕ ಚಿಂತನೆ ತೀವ್ರವಾಗಲು ಕಾರಣವೇನು ?

ಉತ್ತರ :  ಶಿಕ್ಷಣ, ವಿಜ್ಞಾನ, ನಗರೀಕರಣದ ಪ್ರಭಾವದಿಂದ ವೈಚಾರಿಕ ಚಿಂತನೆ ತೀವ್ರವಾಯಿತು.


10) ಸಾಮಾಜಿಕ ಸಾಮರಸ್ಯಕ್ಕೆ ಮೊದಲನೆಯ ಅಡ್ಡಿ ಯಾವುದು ?

ಉತ್ತರ :  ಮೌಢ್ಯವೇ ಸಾಮಾಜಿಕ ಸಾಮರಸ್ಯಕ್ಕೆ ಅಡ್ಡಿಯಾಗಿದೆ


11) ಮನೆ ಮಂಚಮ್ಮ ದೇವತೆ ಇಂದು ಹೇಗೆ ಪೂಜಿತಳಾಗುತ್ತಿದ್ದಾಳೆ ?

ಉತ್ತರ :  ಚಾವಣಿಯಿಲ್ಲದ ಗುಡಿಯೊಳಗೆ


12) ಗ್ರಾಮದೇವತೆಗಾಗಿ ಊರಿನವರು ಏನು ಕಟ್ಟುತ್ತಿದ್ದರು ?

ಉತ್ತರ :  ಗುಡಿ ಕಟ್ಟುತ್ತಿದ್ದರು


13) ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೇನು ?

ಉತ್ತರ :  ಅರಿವು ಎಂದರೆ ತನ್ನಷ್ಟಕ್ಕೆ ತಾನಿರುವ ಕೇವಲ ತಿಳಿವಳಿಕೆ, ಜ್ಞಾನವಲ್ಲ. ಅರಿವು ಇದು ಕ್ರಿಯೆಯ ಅನುಭವದಿಂದ ಒಡಮೂಡುವುದು. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ. ಅದು ತರ್ಕವಲ್ಲ. ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.


14) ಸಮಾಜದ ಸ್ವಾಸ್ಥ್ಯ ಸ್ಥಿರಗೊಳ್ಳುವುದು ಯಾವಾಗ ?

ಉತ್ತರ :  ನಡೆನುಡಿಗಳಲ್ಲಿ ಅರಿವು ಮೂಡಿಸಿಕೊಂಡು, ದ್ವೇಷ ಅಸೂಯೆ ಬಿಟ್ಟು, ಎಲ್ಲರ ಒಳಿತಿಗಾಗಿ ಸಾಮರಸ್ಯದ ಬದುಕು ರೂಪಿಸಿಕೊಂಡರೆ ಸಮಾಜದ ಸ್ವಾಸ್ಥ್ಯ ಸ್ಥಿರಗೊಳ್ಳುವುದು.


15) ಮನೋವೈದ್ಯ ಅಶೋಕ ಪೈ ಅವರ ಸಂಶೋಧನಾ ಸತ್ಯವೇನು ?

ಉತ್ತರ : ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ


16) ಜಗತ್ತು ಯಾವುದರಿಂದ ನರಳುತ್ತಿದೆ ?

ಉತ್ತರ :  ಕೊಲೆ, ಸುಲಿಗೆ, ದ್ವೇಷ, ಅಸೂಯೆಗಳಿಂದ ನರಳುತ್ತಿದೆ


17) ಮನುಷ್ಯರೊಳಗೆ ಕಾರುಣ್ಯ ಯಾವ ಅವಸ್ಥೆಯಲ್ಲಿದೆ ?

ಉತ್ತರ :  ಮೂರ್ಛಾವಸ್ಥೆಯಲ್ಲಿದೆ


18) ಎಲ್ಲರೂ ಎಂತಹ ಮನಸ್ಸಿನಲ್ಲಿರುತ್ತಾರೆ ?

ಉತ್ತರ :  ಸಮಸ್ಟಿ ಮನಸ್ಸಿನಲ್ಲಿ ಇರುತ್ತಾರೆ


19) ಅಂತರಂಗದ ಹೊಂದಾಣಿಕೆಯಿಂದ ಏನನ್ನು ಸಾಧಿಸಬಹುದು ?

ಉತ್ತರ :  ಸಮಾನತೆ ಮತ್ತು ಸಾಮರಸ್ಯ ಸಾಧಿಸಬಹುದು


20) ‘ಎದೆಗೆ ಬಿದ್ದ ಅಕ್ಷರ’ ಪಾಠದ ಆಷಯವೇನು ?

ಉತ್ತರ :  ಕಾರುಣ್ಯ, ಸಮತೆ, ಪ್ರಜ್ಞೆಗಳೇ ದೇವರು. ಅವು ಜಾಗೃತವಾಗಬೇಕು


21) ವಚನಕಾರರು ತಮ್ಮ ಪ್ರಜ್ಞೆಯ ಮುಂದೆ ಏನು ಹೇಳಿಕೊಳ್ಳುತ್ತಿದ್ದರು ?

ಉತ್ತರ :  ವಚನಕಾರರು ತಮ್ಮ ಕಷ್ಟ-ಸುಖ, ದುಃಖ-ದುಮ್ಮಾನ, ಏಳು-ಬೀಳು, ಮತ್ತು ಅವರ ಇಚ್ಛೆಗಳನ್ನು ಹೇಳಿಕೊಳ್ಳುತ್ತಿದ್ದರು


22) ಸುಳ್ಳು ಯಾವುದರ ಮುಂದೆ ನಡೆಯುವುದಿಲ್ಲ ?

ಉತ್ತರ :  ಪ್ರಜ್ಞೆಯ ಮುಂದೆ.


*****

Karnataka Educations 10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-5 ಎದೆಗೆ ಬಿದ್ದ ಅಕ್ಷರ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Edege Bidda Akshara


SSLC ALL Subject Passing Package


10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್


Class 10 2nd Language English Notes


10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು


Class10 Social Science Notes English Medium


|


Comments

Popular posts from this blog

Karnataka SSLC Board Exam Result 2024 | How to Check Karnataka SSLC Exam Result 2024

2nd PUC Sociology Notes | ಅಧ್ಯಾಯ-1 | ಭಾರತೀಯ ಸಮಾಜದ ನಿರ್ಮಾಣ ಮತ್ತು ಜನಸಂಖ್ಯಾ ಶಾಸ್ತ್ರ

SSLC Social Science New Text Book Question Ans | 10ನೇ ತರಗತಿ ಸಮಾಜ ವಿಜ್ಞಾನ ಹೊಸ ಪಠ್ಯಪುಸ್ತಕದ ಪ್ರಶ್ನೋತ್ತರಗಳು |

Middle Adds

amezon