10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-2 ಶಬರಿ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Chapter 2 Shabari |
ಗಧ್ಯ- 2 : ಶಬರಿ
ಉತ್ತರ
: ದಶರಥ
2) ಶ್ರೀರಾಮನಿಗೆ
ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು ?
ಉತ್ತರ
: ಪರಿಮಳದ ಹೂವು, ಮಧುಪರ್ಕ, ರುಚಿಕರವಾದ ಹಣ್ಣು ಹಂಪಲಗಳು
3) ಮತಂಗಾಶ್ರಮದಲ್ಲಿ
ವಾಸವಾಗಿದ್ದ ತಪಸ್ವಿನಿ ಯಾರು ?
ಉತ್ತರ
: ಶಬರಿ
4) ರಾಮಲಕ್ಷ್ಮಣರಿಗೆ
ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು ?
ಉತ್ತರ
: ಧನು (ಕಬಂಧ)
5) ಶಬರಿ
ಗೀತನಾಟಕದ ಕರ್ತೃ ಯಾರು ?
ಉತ್ತರ
: ಪು. ತಿ. ನರಸಿಂಹಾಚಾರ್ಯ
6) ಶಬರಿಯ
ರೂಪ ಹೇಗಿತ್ತು ?
ಉತ್ತರ
: ವೃದ್ಧೆ, ಮರುಳೆ, ಶ್ರಮಣಿಯಂತೆ ರೂಪ, ಬುದ್ಧಿಹೀನ
7) ಶಬರಿಯು
ರಾಮನಿಗಾಗಿ ನಿಂತಲ್ಲಿಯೇ ನಾ ನಿಂತಿರುವೆ ಎಂದು ಹಾಡಿದ ಪರಿ ಹೇಗೆ ?
ಉತ್ತರ
: ಬಯಕೆಯ ಹುಚ್ಚಿನಲ್ಲಿ ಹಾಡಿದಳು
8) ಭೂಮಿಜಾತೆ,
ಆತ್ಮ ಕಾಮಕಲ್ಪಲತೆ ಯಾರೆಂದು ರಾಮ ಹೇಳಿದ್ದಾನೆ ?
ಉತ್ತರ
: ಸೀತೆ
9) ಸೀತೆಯು
ಕಣ್ಮರೆಯಾಗಿದ್ದು ಎಲ್ಲಿ ?
ಉತ್ತರ
: ಚಿತ್ರಕೂಟದಲ್ಲಿ
10) ಮಧುಪರ್ಕ
ಎಂದರೇನು ?
ಉತ್ತರ
: ಅತಿಥಿಗಳಿಗೆ ನೀಡುವ ಮೊಸರು, ತುಪ್ಪ, ಹಾಲು, ಜೇನುತುಪ್ಪ,
ಸಕ್ಕರೆ ಮಿಶ್ರಿತ ಪಾನೀಯ
11) ದನುವಿಗಿದ್ದ
ಇನ್ನಿತರ ಹೆಸರುಗಳು ಯಾವುವು ?
ಉತ್ತರ
: ಕಬಂಧ, ಉದರಮುಖ
12) ನಾನು
ಹೇಗೆ ಸುಖಿಯಾಗಿಹೆನು ಎಂದು ಶಬರಿ ಹಾಡಿದಳು ?
ಉತ್ತರ
: ನನ್ನ ಆಸೆಯೆಲ್ಲ ತೀರಿಹೋಯಿತು, ನನ್ನ ಹಂಬಲ ಅಳಿದು
ಸಂತೋಷ ತುಂಬಿದೆ. ಸುಖಿ ನಾನು ಸುಖಿ ನಾನು
13) ಶಬರಿಯು
ಯಾವ ಹರಕೆ ಮಾಡೆಂದು ರಾಮನಿಗೆ ಹೇಳಿದಳು ?
ಉತ್ತರ
: ತನಗೆ ಪುಣ್ಯಲೋಕ ದೊರೆಯಲೆಂದು
14) ವೇದಿಯಲ್ಲಿ
ಶಬರಿಯು ಏನೆಂದು ಹಾಡುತ್ತಾ ಪ್ರವೇಶಿಸಿದಳು ?
ಉತ್ತರ
: ನಮೋ ನಮೋ ನಿಮಗೆ ನಮೋ, ಬನಕೆ ನಮೋ, ಬೆಟ್ಟಕ್ಕೆ
ನಮೋ, ಎಲ್ಲರಿಗೂ ಎಲ್ಲಕ್ಕೂ ಶರಣು ಎಂದು ಪ್ರಾರ್ಥಿಸುತ್ತಾಳೆ.
15) ಶಬರಿ
ಗದ್ಯ ಪಾಠದ ಆಕರ ಗ್ರಂಥ ಯಾವುದು ?
ಉತ್ತರ
: ಶಬರಿ ಗೀತನಾಟಕ (ಏಕಾಂಕ ನಾಟಕಗಳು)
16) ಶಬರಿಯ
ತಂದೆಯ ಹೆಸರೇನು ?
ಉತ್ತರ
: ಶಬರಿಯ ತಂದೆ ಶಬರ
17) ಲಕ್ಷ್ಮಣನಿಗೆ
ಸೌಮಿತ್ರಿ ಎಂದು ಹೆಸರು ಬರಲು ಕಾರಣವೇನು ?
ಉತ್ತರ
: ಸುಮಿತ್ರೆಯ ಮಗನಾಗಿದ್ದರಿಂದ
18) ಜಟಿಲ
ಕಬರಿ ಎಂದು ಯಾರನ್ನು ಕರೆಯಲಾಗಿದೆ ?
ಉತ್ತರ
: ಶಬರಿಯನ್ನು
19) ಉದರಮುಖ
ಎಂದರೆ ಯಾರು ?
ಉತ್ತರ
: ದಂಡಕಾರಣ್ಯದಲ್ಲಿ ವಾಸವಾಗಿದ್ದ ಕಬಂದ ಹೆಸರಿನ ರಾಕ್ಷಸ.
ಇವನಿಗೆ ದನು ಎಂಬ ಹೆಸರೂ ಇದೆ.
20) ಶಬರಿಯು
ಯಾರಿಗಾಗಿ ಹಂಬಲಗೊಂಡಿದ್ದಾಳೆ ?
ಉತ್ತರ
: ರಾಮನಿಗಾಗಿ
21) ಶಬರಿಯು
ಎಲ್ಲಿ ಹಂಬಲಗೊಂಡಿದ್ದಾಳೆ ?
ಉತ್ತರ
: ಮತಂಗಾಶ್ರಮದಲ್ಲಿ ಪರ್ಣಶಾಲೆಯ ಮುಂದಿರುವ ವನದಲ್ಲಿ
ಶಬರಿಯು ಹಂಬಲಗೊಂಡಿದ್ದಾಳೆ
22) ತೇಜಕ್ಕೆ
ಎಡೆ ಯಾರು ?
ಉತ್ತರ
: ಸೂರ್ಯ
23) ಧೈರ್ಯಕ್ಕೆ
ಎಡೆ ಯಾರು ?
ಉತ್ತರ
: ರಾಮ
24) ರಾಮನು
ಪ್ರೇಮಶುದ್ಧೆ ಎಂದು ಯಾರನ್ನು ಕರೆದಿದ್ದಾನೆ ?
ಉತ್ತರ
: ಶಬರಿಯನ್ನು
25) ಶಬರಿಯು
ರಾಮನಲ್ಲಿ ಏನನ್ನು ಬೇಡುತ್ತಾಳೆ ?
ಉತ್ತರ
: ಮುಕ್ತಿಯನ್ನು
26) ಅಂಜಿಸುವವರು
ಅಂಜುವಂತೆ ಮಾಡಿದವನು ಯಾರು ?
ಉತ್ತರ
: ರಾಮ
27) ರಾಮನು
ಗಿರಿವನಗಳನ್ನು ಏನೆಂದು ಪ್ರಾರ್ಥಿಸಿದನು ?
ಉತ್ತರ
: ಸೀತೆ ದೊರೆಯುವಳೇ? ದೊರೆಯಳೇ ? ಅವಳ ನೆಲೆ ಯಾರೂ
ಅರಿಯಿರೇ ?
28) ಲಕ್ಷ್ಮಣನು
ಅಣ್ಣನನ್ನು ಹೇಗೆ ಸಂತೈಸಿದನು ?
ಉತ್ತರ
: ತಾಳಿಕೋ ಅಣ್ಣ, ಸೂರ್ಯನೇ ಧೈರ್ಯಗೆಟ್ಟರೆ ಕಾಂತಿ
ನೀಡುವವರು ಯಾರು? ರಾಮನೇ ಧೈರ್ಯಗೆಟ್ಟರೆ ಲೋಕಕ್ಕೆ ಸ್ಥೈರ್ಯ ನೀಡುವವರು ಯಾರು ? ಎಂದು ಸಂತೈಸಿದನು
29) ಶಬರಿಯ
ತಾಳ್ಮೆಯ ಪ್ರತಿಫಲವೇನು ?
ಉತ್ತರ : ರಾಮನ ದರ್ಶನ ಮತ್ತು ಮುಕ್ತಿ ದೊರೆಯಿತು.
30) ಆತಿಥ್ಯ
ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು ?
ಉತ್ತರ
: “ನಿನ್ನ ಪ್ರೀತಿಯಿಂದ ಸಂತಸ,
ಸುಖ, ಆನಂದ ಅನುಭವಿಸುವ ಪುಣ್ಯ ನಮ್ಮದಾಯಿತು. ನಿನ್ನನ್ನು ತಾಯಿಯಂತೆ ಕಂಡೆವು. ನಾವು ನಿನಗೆ ಎಂದೆಂದಿಗೂ
ಋಣಿಗಳು”
ಎಂದರು
Comments
Post a Comment
If any doubt Comment me