10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-4 ಭಾಗ್ಯಶಿಲ್ಪಿಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Bhagyashilpigalu |
1) ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು ?
ಉತ್ತರ
: ಕ್ರಿ.ಶ. 1895
2) ನಾಲ್ವಡಿ
ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣಬದ್ಧರಾಗಿದ್ದರು ?
ಉತ್ತರ
: ತಮ್ಮ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ
3) ಏಷ್ಯಾ ಖಂಡದಲ್ಲಿಯೇ
ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು ?
ಉತ್ತರ
: ಕಾವೇರಿ ನದಿಗೆ ಸ್ಥಾಪಿಸಿದ ಶಿವನ ಸಮುದ್ರ
(1900)
4) ಬ್ರಿಟಿಷ
ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿ ನೀಡಿ ಗೌರವಿಸಿತು ?
ಉತ್ತರ
: ಸರ್ ಪದವಿ
5) ವಿಶ್ವೇಶ್ವರಯ್ಯರವರನ್ನು
ದಿವಾನರಾಗಿ ನೇಮಿಸಿದವರು ಯಾರು ?
ಉತ್ತರ
: ನಾಲ್ವಡಿ ಕೃಷ್ಣರಾಜ ಒಡೆಯರು
6) ವಿಶ್ವೇಶ್ವರಯ್ಯನವರ
ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ದಿನಾಚರಣೆ ಯಾವುದು ?
ಉತ್ತರ
: ಎಂಜಿನಿಯರ್ಸ್ ದಿನ
7) ನಾಲ್ವಡಿ
ಕೃಷ್ಣರಾಜ ಒಡೆಯರು ಒಡೆಯರ ರಾಜ ಸಂತತಿಯ ಎಷ್ಟನೇ ರಾಜರಾಗಿದ್ದರು ?
ಉತ್ತರ
: 24 ನೆಯ ರಾಜ
8) ನಾಲ್ವಡಿ
ಕೃಷ್ಣರಾಜ ಒಡೆಯರಿಗೆ ರೀಜೆಂಟರಾಗಿ ಆಡಳಿತ ನಿರ್ವಹಿಸಿದವರು ಯಾರು ?
ಉತ್ತರ
: ಮಹಾರಾಣಿ ವಾಣಿವಿಲಾಸ
9) ಮೈಸೂರು
ಯಾವಾಗ ನಾಲ್ವಡಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು ?
ಉತ್ತರ
: 8 ಅಗಷ್ಟ 1902
10) ಪ್ರಜಾ
ಪ್ರತಿನಿಧಿ ಸಭೆಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡಿದರು
?
ಉತ್ತರ
: 1923
11) ನಾಲ್ವಡಿ
ಕೃಷ್ಣರಾಜ ಒಡೆಯರು ಯಾವಾಗ ನ್ಯಾಯ ವಿಧೇಯಕ ಸಭೆಯನ್ನು ಸ್ಥಾಪಿಸಿದರು ?
ಉತ್ತರ
: 1907
12) ನ್ಯಾಯ
ವಿಧೇಯಕ ಸಭೆಯು ಯಾವ ಯಾವ ತಿಂಗಳುಗಳಲ್ಲಿ ಎಲ್ಲಿ ಸಮಾವೇಶಗೊಳ್ಳುತ್ತಿತ್ತು ?
ಉತ್ತರ
: ಜೂನ ಮತ್ತು ಡಿಸೆಂಬರ - ಬೆಂಗಳೂರಿನಲ್ಲಿ ಸೇರುತ್ತಿತ್ತು
13) ಸಾಮಾಜಿಕ
ಕಾನೂನುಗಳ ಹರಿಕಾರ ಎಂದು ಯಾರನ್ನು ಕರೆಯಲಾಗಿದೆ ?
ಉತ್ತರ
: ನಾಲ್ವಡಿ ಕೃಷ್ಣರಾಜ ಒಡೆಯರು
14) ಕರ್ನಾಟಕದ
ಮೊಟ್ಟ ಮೊದಲ ವಿಶ್ವವಿದ್ಯಾನಿಲಯ ಯಾವುದು ?
ಉತ್ತರ
: ಮೈಸೂರು ವಿಶ್ವವಿದ್ಯಾಲಯ (ಮಾನಸ ಗಂಗೋತ್ರಿ)
15) ವಿಶ್ವೇಶ್ವರಯ್ಯನವರ
ತಂದೆ-ತಾಯಿ ಯಾರು ?
ಉತ್ತರ
: ತಂದೆ - ಶ್ರೀನಿವಾಸ ಶಾಸ್ತ್ರಿ, ತಾಯಿ - ವೆಂಕಟಲಕ್ಷ್ಮಮ್ಮ
16) ವಿಶ್ವೇಶ್ವರಯ್ಯನವರು
ಯಾವಾಗ ಎಲ್ಲಿ ಜನಿಸಿದರು ?
ಉತ್ತರ
: ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ
15 ಸೆಪ್ಟೆಂಬರ 1860 ರಂದು ವಿಶ್ವೇಶ್ವರಯ್ಯ ಜನಿಸಿದರು
17) ವಿಶ್ವೇಶ್ವರಯ್ಯನವರ
ಕುಟುಂಬ ಕರ್ನಾಟಕಕ್ಕೆ ವಲಸೆ ಬಂದು ಎಲ್ಲಿ ನೆಲಸಿದರು ?
ಉತ್ತರ
: ಚಿಕ್ಕಾಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ
18) ವಿಶ್ವೇಶ್ವರಯ್ಯನವರಿಗೆ
ಮಾರ್ಗದರ್ಶನ ನೀಡಿದ ಸೋದರ ಮಾವ ಯಾರು ?
ಉತ್ತರ
: ಎಚ್. ರಾಮಯ್ಯ
19) ವಿಶ್ವೇಶ್ವರಯ್ಯನವರು
ಪ್ರೌಢ ಶಿಕ್ಷಣ ಎಲ್ಲಿ ಪಡೆದರು ?
ಉತ್ತರ
: ಬೆಂಗಳೂರಿನ ವೆಸ್ಲಿಯನ್ ಪ್ರೌಢ ಶಾಲೆಯಲ್ಲಿ
20) ವಿಶ್ವೇಶ್ವರಯ್ಯನವರು
ಪೂನಾದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾವ ಬಹುಮಾನ ಪಡೆದರು ?
ಉತ್ತರ
: ಜೇಮ್ಸ್ ಬಕ್ರ್ಲಿ ಬಹುಮಾನ
21) ವಿಶ್ವೇಶ್ವರಯ್ಯನವರು
ಪ್ರಪ್ರಥಮವಾಗಿ ಯಾವ ಜಲಾಶಯಕ್ಕೆ ಸ್ವಯಂ ಚಾಲಿತ ಬಾಗಿಲು ಅಳವಡಿಸಿದರು ?
ಉತ್ತರ
: ಪೀಪ್ ಜಲಾಶಯಕ್ಕೆ
22) ವಿಶ್ವೇಶ್ವರಯ್ಯನವರು
ಯಾವ ಯಾವ ಜಲಾಶಯಗಳಿಗೆ ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಿದರು ?
ಉತ್ತರ
: ಪೀಪ್ ಜಲಾಶಯ (ಪೂನಾ), ತಿಗ್ರಾ ಜಲಾಶಯ (ಗ್ವಾಲಿಯರ್)
, ಕೃಷ್ಣರಾಜ ಸಾಗರ (ಮಂಡ್ಯ)
23) ಕೈಗಾರಿಕೆಗಳ
ಬಗ್ಗೆ ವಿಶ್ವೇಶ್ವರಯ್ಯನವರು ಮಾಡಿದ ಘೋಷಣೆ ಏನು ?
ಉತ್ತರ
: ಕೈಗಾರಿಕೀರಣ ಇಲ್ಲವೇ ಅವನತಿ
24) ಸಿಂದ್
ಪ್ರಾಂತದ ಯಾವ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ವಿಶ್ವೇಶ್ವರಯ್ಯನವರು ರೂಪಿಸಿದರು ?
ಉತ್ತರ
: ಸುಕ್ಕೂರು ಪಟ್ಟಣಕ್ಕೆ
25) ಹೈದರಾಬಾದ್ನಲ್ಲಿ
ಪ್ರವಾಹ ಉಂಟು ಮಾಡುತ್ತಿದ್ದ ನದಿಗಳು ಯಾವುವು ?
ಉತ್ತರ
: ಈಸಿ ಮತ್ತು ಮೂಸಿ
26) ಕನ್ನಡ
ಸಾಹಿತ್ಯ ಪರಿಷತ್ನ ಸ್ಥಾಪಕರು ಯರು ?
ಉತ್ತರ
: ವಿಶ್ವೇಶ್ವರಯ್ಯನವರು
27) ಮೈಸೂರು
ಬ್ಯಾಂಕ್ನ್ನು ಯಾವಾಗ ಸ್ಥಾಪಿಸಲಾಯಿತು ?
ಉತ್ತರ
: 1913
28) ವಿಶ್ವೇಶ್ವರಯ್ಯನವರ
ಆತ್ಮ ಚರಿತೆ ಯಾವುದು ?
ಉತ್ತರ
: ಮೆಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್
29) ವಿಶ್ವೇಶ್ವರಯ್ಯನವರ
ಶತಮಾನೋತ್ಸವ ದಿನದಂದು ಯಾವ ಗ್ರಂಥವನ್ನು ಪ್ರಕಟಿಸಲಾಯಿತು ?
ಉತ್ತರ
: ಸರ್. ಎಂ.ವಿ.
30) ವಿಶ್ವೇಶ್ವರಯ್ಯನವರು
ಎಷ್ಟು ವರ್ಷಗಳವರೆಗೆ ಬದುಕಿದ್ದರು ?
ಉತ್ತರ
: 102 ವರ್ಷಗಳು
31) ವಿಶ್ವೇಶ್ವರಯ್ಯನವರು
ಯಾವ ನದಿಯ ನೀರಾವರಿ ಕಾಲುವೆಗೆ ತೂಬು ಮೇಲ್ಗಾಲುವೆ ನಿರ್ಮಿಸಿದರು ?
ಉತ್ತರ
: ಪಂಜ್ರಾ
32) ವಿಶ್ವೇಶ್ವರಯ್ಯನವರ
ಕಾರ್ಯವೈಖರಿಯನ್ನು ಹಾಡಿ ಹೊಗಳಿದ ಮುಂಬೈ ಪ್ರಾಂತ್ಯದ ಗವರ್ನರ್ ಯಾರು ?
ಉತ್ತರ
: ಲಾರ್ಡ್ ಸಂಡ್ ಹರ್ಸ್ಟ್
33) ಯಾವ
ವರ್ಷದಲ್ಲಿ “ದೇವದಾಸಿ ಪದ್ದತಿ ನಿಷೇಧ”
ಜಾರಿಗೆ
ಬಂದಿತು ?
ಉತ್ತರ
: 1909
34) ಶಾಲಾ
ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ
ಜಾರಿಗೆ
ಬಂದ ವರ್ಷ ಯಾವುದು ?
ಉತ್ತರ
: 1914
35) ಪ್ರಜಾ
ಪ್ರತಿನಿಧಿ ಸಭೆಯು ಯಾವಾಗ ಸಭೆ ಸೇರುತ್ತಿತ್ತು ?
ಉತ್ತರ
: ಜೂನ-1 : ಮಹಾರಾಜರ ವರ್ಧಂತಿ, ಅಕ್ಟೋಬರ-2: ದಸರಾ
ಮಹೋತ್ಸವ
36) ಪ್ರಜಾ
ಪ್ರತಿನಿಧಿ ಸಭೆಯಲ್ಲಿದ್ದ ಒಟ್ಟು ಸದಸ್ಯರ ಸಂಖ್ಯೆ ಎಷ್ಟು ?
ಉತ್ತರ
: 275
37) ಒಡೆಯರ
ಕಾಲದಲ್ಲಿ ಮೇಲ್ಮನೆಯಂತೆ ಕಾರ್ಯ ನಿರ್ವಹಿಸುತ್ತಿದ್ದ ಸಭೆ ಯಾವುದು ?
ಉತ್ತರ
: ನ್ಯಾಯ ವಿಧಾಯಕ ಸಭೆ
38) ಮೈಸೂರು
ನಾಲ್ವಡಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಾಗ ದಿವಾನರಾಗಿದ್ದವರು ಯಾರು ?
ಉತ್ತರ
: ಕೆ. ಶೇಷಾದ್ರಿ ಅಯ್ಯರ್
39) ನ್ಯಾಯ
ವಿಧಾಯಕ ಸಭೆಯು ಯಾವ ರೀತಿ ಕಾರ್ಯ ನಿರ್ವಹಿಸುತ್ತಿತ್ತು ?
ಉತ್ತರ
: ಮೇಲ್ಮನೆಯಂತೆ
40) ಮೈಸೂರನ್ನು
ಮಾದರಿ ಸಂಸ್ಥಾನವನ್ನಾಗಿಸಿದ ನಾಲ್ವಡಿ ಕೃಷ್ಣರಾಜ ಒಡೆಯರು ಏನೆಂದು ಹೆಸರಾದರು ?
ಉತ್ತರ
: ಸಾಮಾಜಿಕ ಕಾನೂನುಗಳ ಹರಿಕಾರ
41) ವಿಶ್ವೇಶ್ವರಯ್ಯನವರ
ಪೂರ್ವಜರು ಎಲ್ಲಿಯವರು ?
ಉತ್ತರ
: ಆಂದ್ರಪ್ರದೇಶದ ಕರ್ನೂಲ ಜಿಲ್ಲೆಯ ಗಿಡ್ಡಲೂರು ತಾಲೂಕಿನ
ಮೋಕ್ಷಗುಂಡಂ ಎಂಬ ಅಗ್ರಹಾರಕ್ಕೆ ಸೇರಿದವರು.
42) ವಿಶ್ವೇಶ್ವರಯ್ಯನವರ
ಮನೆತನ ಹೆಸರೇನು ?
ಉತ್ತರ
: ಮೋಕ್ಷಗುಂಡಂ
43) ವಿಶ್ವೇಶ್ವರಯ್ಯನವರ
ತಾಯಿಯು ತನ್ನ ಸಂಸಾರವನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿದ್ದು ಏಕೆ ?
ಉತ್ತರ
: ಮಕ್ಕಳ ವಿದ್ಯಾಭ್ಯಾಸಕ್ಕಾಗಿ
44) ವಿಶ್ವೇಶ್ವರಯ್ಯನವರು
ಯಾವುದು ಎಲ್ಲಾ ಸಮಸ್ಯೆಗಳಿಗೆ ಪರಮೋಚ್ಛ ಪರಿಹಾರವೆಂದು ನಂಬಿದ್ದರು ?
ಉತ್ತರ
: ಆಧುನಿಕ ಶಿಕ್ಷಣ
45) ವಿಶ್ವೇಶ್ವರಯ್ಯನವರು
ಯಾವ ಕ್ಷೇತ್ರಕ್ಕೆ ಅಗ್ರ ಪ್ರಾಶಸ್ತ್ಯವನ್ನು ನೀಡಿದರು ?
ಉತ್ತರ
: ಕೈಗಾರಿಕೆ
46) ವಿಶ್ವೇಶ್ವರಯ್ಯನವರಿಗೆ
ಭಾರತ ಸರಕಾರ ನೀಡಿದ ಪ್ರಶಸ್ತಿ ಯಾವುದು ?
ಉತ್ತರ
: ಭಾರತ ರತ್ನ
47) ನಾಲ್ವಡಿ
ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು ?
ಉತ್ತರ
: ಗ್ರಾಮ ನೈರ್ಮಲ್ಯೀಕರಣ, ವೈದ್ಯಕೀಯ ಸಹಾಯ, ವಿದ್ಯಾ
ಪ್ರಚಾರ, ನೀರಿನ ಸೌಕರ್ಯ, ಪ್ರಯಾಣ ಸೌಲಭ್ಯ
48) ನಾಲ್ವಡಿ
ಕೃಷ್ಣರಾಜ ಒಡೆಯರು ಜಾರಿ ಮಾಡಿದ ಸಾಮಾಜಿಕ ಕಾನೂನುಗಳು ಯಾವುವು ?
ಉತ್ತರ
: ದೇವದಾಸಿ ಪದ್ಧತಿ ನಿರ್ಮೂಲನೆ, ವಿಧವಾ ಮರುವಿವಾಹ
ಕಾಯ್ದೆ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ, ಸ್ತ್ರೀಯರಿಗೆ ಮತದಾನದ ಹಕ್ಕು, ಗ್ರಾಮ ಪಂಚಾಯತ ಕಾಯ್ದೆ,
49) ಶಿಕ್ಷಣ
ಕುರಿತು ವಿಶ್ವೇಶ್ವರಯ್ಯನವರ ಹೇಳಿಕೆ ಏನು ?
ಉತ್ತರ
: ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು, ಅದು ಕೆಲವೇ ಜನರ
ಸ್ವತ್ತಾಗದೇ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು
50) ಕೈಗಾರಿಕೀಕರಣ
ಇಲ್ಲವೇ ಅವನತಿ – ಎಂದು ಘೋಷಣೆ ಮಾಡಿದವರು ಯಾರು ?
ಉತ್ತರ
: ದಿವಾನ ಸರ್. ಎಂ. ವಿಶ್ವೇಶ್ವರಯ್ಯ
*****
SSLC ALL Subject Passing Package
10ನೇ ತರಗತಿ ಪ್ರಥಮ ಭಾಷೆ ಕನ್ನಡ ನೋಟ್ಸ್
Class 10 2nd Language English Notes
10ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು
Class10 Social Science Notes English Medium
Comments
Post a Comment
If any doubt Comment me