10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 3 ಹಲಗಲಿ ಬೇಡರು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Halagali Bedaru |
ಪದ್ಯ - 3 : ಹಲಗಲಿ ಬೇಡರು
ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1) ಕುಂಪಣಿ
ಸರಕಾರ ಹೊರಡಿಸಿದ ಆದೇಶ ಏನು ?
ಉತ್ತರ :
ಸರಕಾರದ ಅನುಮತಿಯಿಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು
ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧಗಳನ್ನು ಸರಕಾರಕ್ಕೆ ಒಪ್ಪಿಸಬೇಕು.
2) ಹಲಗಲಿಯ
ನಾಲ್ವರು ಪ್ರಮುಖರಾರು ?
ಉತ್ತರ :
ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ
3) ಹಲಗಲಿ
ಗುರುತು ಉಳಿಯದಂತಾದುದು ಏಕೆ ?
ಉತ್ತರ :
ಬ್ರಿಟಿಷರ ದಂಡು ದಾಳಿ ಮಾಡಿ ಬೆಂಕಿ ಹಚ್ಚಿದ್ದರಿಂದ
4) ಯಾವ ಘಟನೆ
ಹಲಗಲಿ ಲಾವಣಿಗೆ ಕಾರಣವಾಯಿತು ?
ಉತ್ತರ :
ಹಲಗಲಿ ಬೇಡರ ಹತಾರ ಕದನ (ನಿಶ್ಯಸ್ತ್ರೀಕರಣ ಕಾಯ್ದೆ)
5) ಹಲಗಲಿ
ಗ್ರಾಮ ಎಲ್ಲಿದೆ ?
ಉತ್ತರ :
ಮುಧೋಳ ಸಂಸ್ಥಾನದಲ್ಲಿದ್ದು, ಈಗ ಬಾಗಲಕೋಟೆ ಜಿಲ್ಲೆಯಲ್ಲಿದೆ.
6) ಕಾರ ಸಾಹೇಬ
ಎಂದರೆ ಯಾರು ?
ಉತ್ತರ :
ಅಲೆಗ್ಜಾಂಡರ್ ವಿಲಿಯಂ ಕೆರ್ರೆ ಎಂಬ ಬ್ರಿಟೀಷ ಅಧಿಕಾರಿ
7) ಕುಂಪಣಿ
ಎಂದರೇನು ?
ಉತ್ತರ :
ಈಸ್ಟ್ ಇಂಡಿಯಾ ಕಂಪನಿ ಎಂಬ ಬ್ರಿಟೀಷ ಸರಕಾರ ರಚಿಸಿದ್ದ
ಆಡಳಿತಾತ್ಮಕ ಸಂಸ್ಥೆ.
8) ಹಲಗಲಿಯ
ಬೇಡರು ದಂಗೆ ಏಳಲು ಕಾರಣವೇನು ?
ಉತ್ತರ :
ಬ್ರಿಟೀಷ ಸಿಪಾಯಿಗಳು ಬಲವಂತವಾಗಿ ಆಯುಧಗಳನ್ನು ಕಸಿದುಕೊಳ್ಳಲು
ಪ್ರಾರಂಭಿಸಿದ್ದರಿಂದ ಬೇಡರು ದಂಗೆ ಎದ್ದರು.
9) ಹಲಗಲಿಗೆ
ದಂಡು ಬರಲು ಕಾರಣವೇನು ?
ಉತ್ತರ :
ದಂಗೆ ಹತ್ತಿಕ್ಕಲು ಬಂದ ಕಾರಕೂನನ ಕಪಾಳಕ್ಕೆ ಬೇಡರು
ಹೊಡೆದರು ಮತ್ತು ಸಿಪಾಯಿಗಳನ್ನು ಹೊಡೆದು ಉರುಳಿಸಿದರು.
10) ದಂಡು
ಹಲಗಲಿಯ ಮೇಲೆ ಹೇಗೆ ದಾಳಿ ಮಾಡಿತು ?
ಉತ್ತರ :
ದಂಗೆ ಎದ್ದ ಬೇಡರ ಬೆನ್ನು ಹತ್ತಿ ಕೊಂದರು, ಕರುಣೆ
ಇಲ್ಲದೆ ಗುಂಡು ಹೊಡೆದು ಸಾಯಿಸಿದರು.
11) ಲಾವಣಿಗಳನ್ನು
ಏಕೆ ವೀರಗೀತೆಗಳು ಎನ್ನಲಾಗಿದೆ ?
ಉತ್ತರ :
ಲಾವಣಿಗಳು ವೀರತನ ಮತ್ತು ಸಾಹಸವನ್ನು ವರ್ಣಿಸುವುದರಿಂದ
ವೀರಗೀತೆಗಳು ಎನಿಸಿಕೊಂಡಿವೆ.
12) ಬ್ರಿಟೀಷರು
ನಿಶ್ಯಸ್ತ್ರೀಕರಣ ಕಾಯ್ದೆಯನ್ನು ಯಾವಾಗ ಜಾರಿಗೆ ತಂದರು ?
ಉತ್ತರ :
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ನಿಶ್ಯಸ್ತ್ರೀಕರಣ
ಜಾರಿಗೆ ಬಂದಿತು.
13) ಬೇಡರ
ಮನವೊಲಿಸಲು ಹಲಗಲಿಗೆ ಬಂದ ಬ್ರಿಟಿಷ ಅಧಿಕಾರಿ ಯಾರು ?
ಉತ್ತರ :
ಹೆಬಲಕ್ ಎಂಬ ಅಧಿಕಾರಿ.
14) ಹಲಗಲಿಯ
ಬೇಡರು ಯಾವ ಬ್ರಿಟೀಷ ಅಧಿಕಾರಿಯನ್ನು ಕೊಂದರು ?
ಉತ್ತರ :
ಹೆಬಲಕ್
15) ಹಲಗಲಿಯ
ದಂಗೆಯ ಕೊನೆಯ ಪರಿಣಾಮವೇನು ?
ಉತ್ತರ :
ಹಲಗಲಿಯನ್ನು ಲೂಟಿ ಮಾಡಿ, ಬೆಂಕಿ ಹಚ್ಚಿ ಸುಟ್ಟು
ಹಾಕಿದ್ದರಿಂದ ಗುರುತು ಉಳಿಯದಂತಾಯಿತು.
16) ಎಲ್ಲ
ಜನರಿಗೆ ಜೋರ ಮಾಡಿ ಕಸಿದುಕೊಳ್ಳಿರಿ ಹತಾರ - ಇಲ್ಲಿರುವ ಸ್ವಾರಸ್ಯವೇನು ?
ಉತ್ತರ :
ಭಾರತೀಯರ ಮೇಲಿನ ಬ್ರಿಟೀಷರ ದರ್ಪ ವ್ಯಕ್ತವಾಗಿದೆ.
17) ಆಯುಧಗಳನ್ನು
ನೀಡಲು ಬೇಡರು ಏಕೆ ಒಪ್ಪಲಿಲ್ಲ ?
ಉತ್ತರ :
ಆಯುಧಗಳು ಅವರ ಜೀವನಕ್ಕೆ ಆಧಾರವಾಗಿದ್ದವು. ‘ಆಯುಧಗಳನ್ನು
ನೀಡಿದರೆ ನಾವು ಸತ್ತಂತೆ’ ಎಂದು
ತಿಳಿದುಕೊಂಡಿದ್ದರಿಂದ
ಕೊಡಲು ಒಪ್ಪಲಿಲ್ಲ.
18) ಆಯುಧಗಳ
ಬಗ್ಗೆ ಬೇಡರಲ್ಲಿದ್ದ ಭಾವನೆ ಎಂತಹದು ?
ಉತ್ತರ :
‚ಆಯುಧಗಳು ತಮ್ಮ ಪ್ರಾಣಕ್ಕಿಂತ ಮಿಗಿಲಾದವು ಎಂಬ ಭಾವನೆಯನ್ನು
ಹಲಗಲಿ ಬೇಡರು ಹೊಂದಿದ್ದರು.
19) ಹಲಗಲಿ
ಬೇಡರು - ಲಾವಣಿಯ ಆಕರ ಗ್ರಂಥ ಯಾವುದು ?
ಉತ್ತರ :
ಬಿ.ಎಸ್. ಗದ್ದಗಿಮಠ ಸಂಪಾದಿಸಿರುವ ‚ಕನ್ನಡ ಜನಪದ
ಗೀತೆಗಳು.
20) ಹಲಗಲಿ
ಬೇಡರ ಕದನವು ಪ್ರಧಾನವಾಗಿ ಒಳಗೊಂಡಿರುವ ಪ್ರಧಾನರಸ ಯಾವುದು ?
ಉತ್ತರ :
ವೀರರಸ
21) ಕುಂಪಣಿ
ಸರಕಾರ ಜಾರಿಗೆ ತಂದ ಶಾಸನ ಯಾವುದು ?
ಉತ್ತರ :
ನಿಶ್ಯಸ್ತ್ರೀಕರಣ
22) ಹಲಗಲಿ
ಬೇಡರು - ಬರೆದ ಲಾವಣಿಕಾರ ಅಂಕಿತಗೊಳಿಸಿರುವ ದೈವ ಯಾವುದು ?
ಉತ್ತರ :
ಕುರ್ತಕೋಟಿ ಕಲ್ಮೇಶ
23) ಯಾರು
ದಡ ಮುಟ್ಟಲಿಲ್ಲ ಎಂದು ಲಾವಣಿಕಾರ ಹೇಳಿದನು ?
ಉತ್ತರ :
ಹಲಗಲಿ ಬಂಟರು.
24) ಯಾವ
ಸರಕಾರ ಹುಕುಂ ಕಳಿಸಿತು ?
ಉತ್ತರ :
ವಿಲಾಯಿತಿಯಿಂದ ಕುಂಪಣಿ ಸರಕಾರ
25) ಕುಂಪಣಿ
ಸರಕಾರ ಏನೆಂದು ಹುಕುಂ ಕಳಿಸಿತು ?
ಉತ್ತರ :
ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ
26) ಹಲಗಲಿಯಲ್ಲಿ
ಯಾರು ಒಳಗಿಂದೊಳಗ ವಚನ ಕೊಟ್ಟರು ?
ಉತ್ತರ :
ಹಲಗಲಿಯ ಎಲ್ಲ ಬೇಡರು
27) ಯಾವ
ಸಾಹೇಬನು ಬೇಡರಿಗೆ ಬುದ್ಧಿ ಮಾತು ಹೇಳಿದನು ?
ಉತ್ತರ :
ಹೆಬಲಕ ಸಾಹೇಬ (ಹೆನ್ರಿ ಹ್ಯಾವಲಾಕ್)
28) ಬ್ರಿಟಿಷರು
ವಿಶ್ವಾಸ ಘಾತುಕರು ಎಂದು ಹೇಳಿದವರು ಯಾರು ?
ಉತ್ತರ :
ಜಡಗ
29) ಯಾವ
ಸಾಹೇಬನನ್ನು ಹಲಗಲಿ ಬೇಡರು ಕೊಂದರು ?
ಉತ್ತರ :
ಹೆಬಲಕ್ ಅಧಿಕಾರಿ (ಹೆನ್ರಿ ಹ್ಯಾವಲಾಕ್)
30) ಬ್ರಿಟೀಷರು
ಹಲಗಲಿಯಲ್ಲಿ ಏನೇನು ದೋಚಿದರು ?
ಉತ್ತರ :
ಕೊಡಲಿ, ಕೋರೆ, ಕುಡ, ಕಬ್ಬಿಣ, ಮೊಸರು, ಬೆಣ್ಣೆ,
ಹಾಲು, ಉಪ್ಪು, ಎಣ್ಣೆ, ಅರಿಷಿಣ, ಜೀರಗಿ, ಅಕ್ಕಿ, ಸಕ್ಕರಿ, ಬೆಲ್ಲ, ಗಂಗಳ, ಚೆರಗಿ, ಮಂಗಳ ಸೂತ್ರ,
ಬೀಸುಕಲ್ಲ
31) ಯಾರ
ದಯದಿಂದ ಈ ಹಾಡು ಹಾಡಿದೆನೆಂದು ಲಾವಣಿಕಾರ ಹೇಳಿದ್ದಾನೆ ?
ಉತ್ತರ :
ಕುರ್ತಕೋಟಿ ಕಲ್ಮೇಶ.
Comments
Post a Comment
If any doubt Comment me