10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪಠ್ಯಪೂರಕ ಅಧ್ಯಯನ - 5 ಜನಪದ ಒಗಟುಗಳು | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Swami Janapada Vagatugalu |
ಪಠ್ಯಪೂರಕ ಅಧ್ಯಯನ - 5 ಜನಪದ ಒಗಟುಗಳು.
1) ‘ಅಂಗಿ’
ಎಂಬ ಉತ್ತರ ಬರುವ ಬೆಡಗಿನ ಪ್ರಶ್ನೆಯನ್ನು ತಿಳಿಸಿ ?
ಉತ್ತರ :
ಕೈಯುಂಟು ಕಾಲಿಲ್ಲ, ಶಿರಹರಿದ ಮುಂಡ, ಮೈಯೊಳಗೆ ನವಗಾಯ,
ಒಂಭತ್ತು ತುಂಡ, ಒಯ್ಯನಿಯ್ಯನೇ ಬಂದು ಹೆಗಲೇರಿಕೊಂಡ, ರಾಯ ರಾಯರಿಗೆಲ್ಲ ತಾನೇ ಪ್ರಚಂಡ.
2) ಉಪ್ಪಿನ
ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿದೆ ?
ಉತ್ತರ :
ನೀರಿನಿಂದಲೇ ತಯಾರಾದ ಉಪ್ಪು ನೀರು ತಾಕಿದರೆ ಕರಗಿ
ಮಾಯವಾಗುತ್ತದೆ.
3) ಕೆಸರಿಗೂ
ಕಮಲಕ್ಕೂ ಇರುವ ಸಂಬಂಧವನ್ನು ಒಗಟು ಹೇಗೆ ವಿವರಿಸುತ್ತದೆ ?
ಉತ್ತರ :
ಕೆಸರಿನಲ್ಲಿಯೇ ಹುಟ್ಟಿ, ಕೆಸರಿನಲ್ಲಿಯೇ ಬೆಳೆಯುವ
ಸಸ್ಯವಾಗಿದ್ದು, ಕೆಸರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ.
4) ಒಗಟುಗಳಿಂದ
ಶೈಕ್ಷಣಿಕವಾಗಿ ಏನು ಲಾಭ ?
ಉತ್ತರ :
ವಿದ್ಯಾರ್ಥಿಗಳಲ್ಲಿ ಕಲ್ಪನಾಶೀಲತೆ, ಆಲೋಚನಾ ಶಕ್ತಿ,
ಸೃಜನಶೀಲತೆ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಮತ್ತು ಬುದ್ಧಿ ಕೌಶಲ ಬೆಳೆಯುತ್ತದೆ.
5) ಉತ್ತರಾಣಿ
ಮತ್ತು ಗರಿಕೆ ಕೊಡುವ ತೊಂದರೆ ಏನು ?
ಉತ್ತರ :
ಉತ್ತರಾಣಿಯ ಬೀಜಗಳು ಮುಳ್ಳಿನಂತಿದ್ದು ಮಹಿಳೆಯ ಸೀರೆ
ಸೆರಗು ಹಿಡಿಯುತ್ತದೆ, ಹೊಲದಲ್ಲಿರುವ ಗರಿಕೆಯನ್ನು ನಾಶಪಡಿಸಲು ರೈತ ಪ್ರಯತ್ನಪಟ್ಟರೂ ಸಾಧ್ಯವಾಗುವುದಿಲ್ಲ.
Comments
Post a Comment
If any doubt Comment me