10ನೇ ತರಗತಿ ಪ್ರಥಮ ಭಾಷೆ ಕನ್ನಡ | ಪದ್ಯ - 7 ವೀರಲವ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು | SSLC Kannada Veera Lava |
1) ಜೈಮಿನಿ
ಭಾರತವನ್ನು ಬರೆದ ಕವಿ ಯಾರು ?
ಉತ್ತರ :
ಲಕ್ಷ್ಮೀಶ
2) ಯಜ್ಞಾಶ್ವವನ್ನು
ಕಟ್ಟಿದವರು ಯಾರು ?
ಉತ್ತರ :
ಲವ
3) ಕುದುರೆಯನ್ನು
ಲವನು ಯಾವುದರಿಂದ ಕಟ್ಟಿದನು ?
ಉತ್ತರ :
ತನ್ನ ಉತ್ತರೀಯದಿಂದ
4) ಮುನಿಸುತರು
ಹೆದರಲು ಕಾರಣವೇನು ?
ಉತ್ತರ :
ಲವನು ರಾಜರ ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ
5) ಯಜ್ಞದ
ಕುದುರೆ ಯಾರ ಆಶ್ರಮ ಪ್ರವೇಶಿಸಿತು ?
ಉತ್ತರ :
ವಾಲ್ಮೀಕಿ ಆಶ್ರಮವನ್ನು ಪ್ರವೇಶಿಸಿತು
6) ವಾಲ್ಮೀಕಿಯ
ವನವನ್ನು ಯಾರು ಕಾಯುತ್ತಿದ್ದರು ?
ಉತ್ತರ :
ವಾಲ್ಮೀಕಿಯ ವನವನ್ನು ಲವನು ಕಾಯುತ್ತಿದ್ದನು.
7) ಕುದುರೆಯನ್ನು
ಕಟ್ಟಿದಾಗ ಮುನಿಸುತರು ಲವನಿಗೆ ಏನೆಂದು ಹೇಳಿದರು ?
ಉತ್ತರ :
ಅರಸುಗಳ ಕುದುರೆಯನ್ನು ಬಿಡದಿದ್ದರೆ ಅವರು ನಮ್ಮನ್ನು
ಹೊಡೆಯುವರು.
8) ಯಜ್ಞಾಶ್ವದ
ಬೆಂಗಾವಲಿಗೆ ಯಾರು ಬಂದಿದ್ದರು ?
ಉತ್ತರ :
ಶತ್ರುಘ್ನ.
9) ಯಜ್ಞಾಶ್ವದ
ಹಣೆಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?
ಉತ್ತರ :
ಭೂಮಂಡಲದಲ್ಲಿ ಕೌಶಲ್ಯೆಯ ಮಗನಾದ ರಾಮನೊಬ್ಬನೇ ವೀರನು.
ಇದು ಅವನ ಯಜ್ಞದ ಕುದುರೆ. ತಡೆಯುವ ಸಾಮಥ್ರ್ಯವುಳ್ಳವರು ಯಾರೇ ಆದರೂ ತಡೆಯಲಿ ಎಂದು ಯಜ್ಞಾಶ್ವದ ಹಣೆಪಟ್ಟಿಯಲ್ಲಿ
ಬರೆದಿತ್ತು.
10) ವಾಲ್ಮೀಕಿ
ಮುನಿಗಳು ಎಲ್ಲಿಗೆ ಹೋಗಿದ್ದರು ?
ಉತ್ತರ :
ವರುಣನ ಲೋಕಕ್ಕೆ.
11) ರಾಮನ
ತಂದೆ ತಾಯಿ ಯಾರು ?
ಉತ್ತರ :
ತಂದೆ ದಶರಥ, ತಾಯಿ ಕೌಶಲ್ಯೆ.
12) ಕುದುರೆ
ಪದದ ಸಮಾನಾರ್ಥಕಗಳನ್ನು ಬರೆಯಿರಿ ?
ಉತ್ತರ :
ಹಯ, ಅಶ್ವ, ತುರಗ, ತುರಂಗ, ವಾಜಿ.
13) ಮುನಿಸುತರು
ಕುದುರೆಯನ್ನು ಕಟ್ಟಬೇಡ ಎಂದು ಲವನಿಗೆ ಹೇಳಿದಾಗ ಲವನು ಏನು ಹೇಳಿದನು ?
ಉತ್ತರ :
‚ಬ್ರಾಹ್ಮಣರ ಮಕ್ಕಳು ಇದಕ್ಕೆ ಹೆದರಿದರೆ, ಜಾನಕಿಯ
ಮಗನು ಇದಕ್ಕೆ ಹೆದರುವನೇ ? ನೀವು ಹೋಗಿ ಎಂದನು.
14) ತನ್ನ
ತಾಯಿಯ ಬಗ್ಗೆ ಜನರು ಏನೆಂದು ಆಡಿಕೊಳ್ಳುವರು ಎಂದು ಲವನು ಮುನಿಸುತರಿಗೆ ಹೇಳಿದನು ?
ಉತ್ತರ :
ಯಜ್ಞದ ಕುದುರೆಯನ್ನು ಕಟ್ಟದಿದ್ದರೆ ಜನರು ತನ್ನ ತಾಯಿ
ಜಾನಕಿಯನ್ನು ಬಂಜೆ ಎನ್ನುವುದಿಲ್ಲವೇ.
15) ಯಜ್ಞದ
ಕುದುರೆಯನ್ನು ಲವನು ಯಾವುದಕ್ಕೆ ಕಟ್ಟಿ ಹಾಕಿದನು ?
ಉತ್ತರ :
ಬಾಳೆ ಗಿಡಕ್ಕೆ (ಕದಳೀದ್ರುಮಕ್ಕೆ).
16) ಅಗಡು
- ಪದದ ಅರ್ಥವೇನು ?
ಉತ್ತರ :
ಶೌರ್ಯ.
17) ‘ಅರಸುಗಳ
ವಾಜಿಯಂ ಬಿಡು’ ಎಂದು ಹೇಳಿದವರಾರು ?
ಉತ್ತರ :
ಮುನಿಸುತರು ಲವನಿಗೆ.
18) ಲವನು
ಯಾರು ?
ಉತ್ತರ :
ಲವನು ಶ್ರೀರಾಮ ಮತ್ತು ಸೀತೆಯರಲ್ಲಿ ಜನಿಸಿದ ಅವಳಿ
ಮಕ್ಕಳಲ್ಲಿ ಚಿಕ್ಕವನು.
19) ಲವ ಕುಶರು
ಜನಿಸಿದ ಸ್ಥಳ ಯಾವುದು ?
ಉತ್ತರ :
ವಾಲ್ಮೀಕಿಯ ಆಶ್ರಮ.
20) ಆದಿಕಾವ್ಯ
ರಾಮಾಯಣ ಬರೆದವರು ಯಾರು ?
ಉತ್ತರ :
ವಾಲ್ಮೀಕಿ.
21) ಶ್ರೀರಾಮನು
ಅಶ್ವಮೇಧ ಯಾಗ ಮಾಡಲು ಕಾರಣವೇನು ?
ಉತ್ತರ :
ರಾವಣನ ವಧೆಯಿಂದ ಬ್ರಹ್ಮಹತ್ಯಾದೋಷ ಬಂದಿರುವುದನ್ನು
ಪರಿಹರಿಸಿ ಕೊಳ್ಳುವುದಕ್ಕಾಗಿ ಅಶ್ವಮೇಧ ಯಾಗ ಮಾಡುತ್ತಾನೆ.
22) ಲಕ್ಷ್ಮೀಶ
ಕವಿಗೆ ಇರುವ ಬಿರುದುಗಳು ಯಾವುವು ?
ಉತ್ತರ :
ಉಪಮಾಲೋಲ, ಕರ್ಣಾಟ ಕವಿ ಚೂತನವನ
ಚೈತ್ರ.
23) ರಾಮನು
ಮಾಡಿದ ಯಜ್ಞ ಯಾವುದು ?
ಉತ್ತರ :
ಅಶ್ವಮೇಧ ಯಾಗ.
24) ಲವಕುಶರು
ಯಾರ ಆಶ್ರಮದಲ್ಲಿ ಬೆಳೆದರು ?
ಉತ್ತರ :
ವಾಲ್ಮೀಕಿ ಆಶ್ರಮದಲ್ಲಿ.
25) ಕವಿ
ಲಕ್ಷ್ಮೀಶನ ಸ್ಥಳ ಯಾವುದು ?
ಉತ್ತರ :
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರು.
26) ಕವಿ
ಲಕ್ಷ್ಮೀಶನಿಗಿದ್ದ ಬಿರುದುಗಳು ಯಾವುವು ?
ಉತ್ತರ :
ಉಪಮಾಲೋಲ, ಕರ್ಣಾಟ ಕವಿ ಚೂತವನ ಚೈತ್ರ.
27) ‘ಅಬ್ಧಿಪ’
ಪದದ ಅರ್ಥವೇನು ?
ಉತ್ತರ :
ಅಬ್ಧಿ - ಸಮುದ್ರ, ಪ – ಒಡೆಯ ಅಂದರೆ ವರುಣ.
28) ಲವ ಮತ್ತು
ಮುನಿಸುತರು ಆಶ್ರಮದಲ್ಲಿ ಹೇಗೆ ಕಾಲ ಕಳೆಯುತ್ತಿದ್ದರು ?
ಉತ್ತರ :
ಲವನು ತನ್ನ ಒಡನಾಡಿಗಳಾದ ಮುನಿಸುತರೊಂದಿಗೆ ಆಶ್ರಮದಲ್ಲಿ
ಆಟವಾಡುತ್ತ ಕಾಲ ಕಳೆಯುತ್ತಿದ್ದನು.
29) ಯಜ್ಞಾಶ್ವವನ್ನು
ಕಂಡು ಲವನು ಕೋಪಗೊಳ್ಳಲು ಕಾರಣವೇನು ?
Comments
Post a Comment
If any doubt Comment me