10ನೇ ತರಗತಿ ಪ್ರಥಮ ಭಾಷೆ ಕನ್ನಡ | ಗದ್ಯ-1 ಯುದ್ಧ | ಒಂದು ಅಂಕದ ಪ್ರಶ್ನೆಗಳು | ಪರೀಕ್ಷಾ ಸಿದ್ದತೆಗಾಗಿ ಪ್ರಶ್ನೆಗಳು |
ಒಂದು ಅಂಕದ ಪ್ರಶ್ನೆಗಳು :
1) ರಾಹಿಲನು
ಯಾರು ?
ಉತ್ತರ
: ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಒಬ್ಬ ಡಾಕ್ಟರ್
2) ರಾಹಿಲನು
ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು ?
ಉತ್ತರ
: ಔಷಧ & ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ
3) ಗಡಿ
ಪ್ರದೇಶದಲ್ಲಿ ಬ್ಲಾಕ್ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?
ಉತ್ತರ
: ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳಲು
4) ರಾಹಿಲನು
ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯವುದು ?
ಉತ್ತರ
: ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ. ಸಂಕಷ್ಟಕೀಡಾದ
ಮನುಷ್ಯರ ಕಡೆಯವನು
5) ಯುದ್ಧದ
ಬಗ್ಗೆ ಮುದುಕಿಯ ಅಭಿಪ್ರಾಯವೇನು ?
ಉತ್ತರ
: ಎಲ್ಲರಿಗೂ ದೇಹಕ್ಕೂ ಮತ್ತು ಮನಸ್ಸಿಗೂ ಗಾಯ ಮಾಡುವುದೇ
ಯುದ್ಧ
6) ಪೈಲಟ್ಗೆ
ಯಾವುದರೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗಲಿಲ್ಲ ?
ಉತ್ತರ
: ಗ್ರೌಂಡಿನೊಡನೆ
7) ರಾಹಿಲನಿಗೆ
ನದಿಯಲ್ಲಿ ಈಜಲು ಏಕೆ ಕಷ್ಟವಾಗುತ್ತಿತ್ತು ?
ಉತ್ತರ
: ಸೈನಿಕ ಉಡುಪಿನಲ್ಲಿ ಇದ್ದುದರಿಂದ
8) ರಾಹಿಲನಿಗೆ
ನದಿಯ ತೀರ ಹೇಗೆ ಗೋಚರಿಸಿತು ?
ಉತ್ತರ
: ಮಿಂಚು ಮಿಂಚಿದ್ದರಿಂದ
9) ರಾಹಿಲನು
ತೆವಳುತ್ತಿದ್ದಾಗ ಕಿವಿಗೆ ಏನು ಕೇಳಿಸಿತು ?
ಉತ್ತರ
: ಮಹಿಳೆಯೊಬ್ಬಳ ಆರ್ತನಾದ ಕೇಳಿಸಿತು
10) ಹೆಂಗಸೊಬ್ಬಳು
ಮಗಳಿಗೆ ಏನೆಂದು ಸಾಂತ್ವನ ಮಾಡುತ್ತಿದ್ದಳು ?
ಉತ್ತರ
: ಏನು ಮಾಡಲಿ ಮಗಳೇ ? ಈ ಮಳೆಯಲ್ಲಿ ಈ ಕತ್ತಲೆಯಲ್ಲಿ
ನಾನು ಯಾರನ್ನು ಕರೆಯಲಿ ? ಒಮ್ಮೆ ಬೆಳಗಾಗಿದ್ದರೆ ಸಾಕಾಗಿತ್ತು.
11) ಬಾಗಿಲ
ಬಳಿ ನಿಂತು ರಾಹಿಲನು ಏನೆಂದು ಹೇಳಿದನು ?
ಉತ್ತರ
: ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಯಗೊಂಡಿದ್ದೇನೆ.
ಪ್ಲೀಸ್ .......
12) ಮುದುಕಿಯು
ದೀಪವನ್ನು ರಾಹಿಲನ ಬಳಿ ತಂದು ಏನೆಂದು ಪ್ರಶ್ನಿಸಿದಳು ?
ಉತ್ತರ
: ಯಾರಪ್ಪ ನೀನು ? ನಮ್ಮ ಕಡೆಯವನು ತಾನೇ ?
13) ರಾಹಿಲನು
ಮಹಿಳೆಯನ್ನು ಪರೀಕ್ಷಿಸುವಾಗ ಬಾಂಬಿನ ಸದ್ದು ಕೇಳಿ ಮನದಲ್ಲಿ ಅಂದುಕೊಂಡಿದ್ದೇನು ?
ಉತ್ತರ
: ಜೀವಿಯೊಂದನ್ನು ಜೀವಸಹಿತ ಹೊರಹಾಕಲು ಈ ಹೆಣ್ಣು
ಮಗಳು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. ಹೊರಗೆ ಯುದ್ಧದ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ
ಕೊಲೆಯಾಗುತ್ತಿದೆ
14) ರಾಹಿಲನ
ಕಣ್ಣುಗಳನ್ನು ಕಂಡಾಗ ಮುದುಕಿಯು ಏನೆಂದುಕೊಂಡಳು ?
ಉತ್ತರ
: ಓ.... ಈ ಕಣ್ಣುಗಳು ಯುದ್ಧಕ್ಕೆ ಹೋದ ತನ್ನ ಮಗನ
ಕಣ್ಣುಗಳಂತೆಯೇ ಇವೆಯಲ್ಲ ?
15) ಸೈನಿಕರ
ಉಡುಪಿನಲ್ಲಿ ಬಂದವರು ಮುದುಕಿಗೆ ಏನೆಂದು ಪ್ರಶ್ನಿಸಿದರು ?
ಉತ್ತರ
: ಯಾರಾದರೂ ಗಾಯಗೊಂಡ ಸೈನಿಕರು ಈ ಕಡೆ ಬಂದಿದ್ದಾರೆಯೇ
?
16) ಮುದುಕಿಯ
ಮಗ ಎಲ್ಲಿಗೆ ಹೋಗಿದ್ದನು ?
ಉತ್ತರ
: ಸೈನಿಕನಾಗಿದ್ದರಿಂದ ಯುದ್ಧಕ್ಕೆ ಹೋಗಿದ್ದನು
17) ಯುದ್ಧ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯನ ಹೆಸರು?
ಉತ್ತರ
: ರಾಹಿಲ
18) ಡಾಕ್ಟರ್
ರಾಹಿಲನು ಯಾವ ಉಡುಪು ಧರಿಸಿದ್ದನು ?
ಉತ್ತರ
: ಸೈನಿಕರ ಉಡುಪು
19) ರಾಹಿಲನನ್ನು
ಮುದುಕಿಯು ಎಲ್ಲಿ ಅಡಗಿಸಿಟ್ಟಳು ?
ಉತ್ತರ
: ಸೋಸೆ ಮಲಗಿದ್ದ ಕೋಣೆಯ ಮಂಚದಡಿಯಲ್ಲಿ
20) ಯುದ್ಧ
ವಿಮಾನ ಸ್ಪೋಟಿಸಿದಾಗ ಹೇಗೆ ಚದುರಿ ಬಿತ್ತು ?
ಉತ್ತರ
: ನೂರು ಹೋಳುಗಳಾಗಿ ಚದುರಿ ಬಿತ್ತು.
21) ಡಾಕ್ಟರ್
ರಾಹಿಲನಿಗೆ ಆದ ತೊಂದರೆ ಏನು ?
ಉತ್ತರ
: ಒಂದು ಕಾಲಿಗೆ ಪೆಟ್ಟಾಗಿತ್ತು ಮತ್ತು ಸೈನಿಕನ ಉಡುಪಿನಲ್ಲಿ
ಇದ್ದುದರಿಂದ ಈಜಲು ಬಹಳ ತೊಂದರೆಯಾಗುತ್ತಿತ್ತು.
22) ರಾಹಿಲನಿಗೆ
ಮಿಂಚಿನ ಬೆಳಕಿನಲ್ಲಿ ಕಣ್ಣಿಗೆ ಏನು ಕಾಣಿಸಿತು ?
ಉತ್ತರ
: ಸಮೀಪದಲ್ಲಿ ತೀರ, ಒಂಟಿ ಮನೆ ಕಾಣಿಸಿತು
23) ದೇಹಕ್ಕೂ
ಮನಸ್ಸಿಗೂ ಗಾಯ ಮಾಡುವುದು ಯಾವುದು ?
ಉತ್ತರ
: ಯುದ್ಧ
24)
‘ಯುದ್ಧ’ ಪಾಠವು ಕನ್ನಡ ಸಾಹಿತ್ಯದ ಯಾವ ಪ್ರಕಾರದಲ್ಲಿದೆ ?
ಉತ್ತರ
: ಸಣ್ಣ ಕಥೆಗಳು
25) ಯುದ್ಧಕ್ಕೆ
ಕಾರಣವಾದ ಅಂಶಗಳು ಯಾವುವು ?
ಉತ್ತರ
: ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ,
ಕೌಟುಂಬಿಕ ಕಲಹಗಳು, ದ್ವೇಷ ಸಾಧನೆ
*****
SSLC 2021 Exam Questions
All Subjects MCQ :
First Language Kannada ಪ್ರಥಮ ಭಾಷೆ ಕನ್ನಡ
ಗದ್ಯ-1 ಯುದ್ಧ
ಗದ್ಯ – 2 ಶಬರಿ
ಗದ್ಯ – 3 ಲಂಡನ್ ನಗರ
ಗದ್ಯ – 4 ಭಾಗ್ಯಶಿಲ್ಪಿಗಳು
ಗದ್ಯ – 5 ಎದೆಗೆ ಬಿದ್ದ ಅಕ್ಷರ
ಗದ್ಯ – 6 ವ್ಯಾಘ್ರಗೀತೆ
ಗದ್ಯ -7 ವೃಕ್ಷಸಾಕ್ಷಿ
ಗದ್ಯ – 8 ಸುಕುಮಾರ ಸ್ವಾಮಿಯ ಕತೆ
ಪದ್ಯ -1 ಸಂಕಲ್ಪಗೀತೆ
ಪದ್ಯ – 2 ಹಕ್ಕಿಹಾರುತಿದೆ ನೋಡಿದಿರಾ
ಪದ್ಯ -3 ಹಲಗಲಿ ಬೇಡರು
ಪದ್ಯ – 4 ಕೌರವೇಂದ್ರನ ಕೊಂದೆ ನೀನು
ಪದ್ಯ – 5 ಹಸುರು
ಪದ್ಯ – 6 ಛಲಮನೆ ಮೆರೆವೆಂ
ಪದ್ಯ -7 ವೀರಲವ
ಪದ್ಯ -8 ಕೆಮ್ಮನೆ ಮೀಸೆವೊತ್ತನೇ
ಪೂರಕ ಅಧ್ಯಯನ -1 ಸ್ವಾಮಿ ವಿವೇಕಾನಂದರ ಚಿಂತನೆಗಳು
ಪೂರಕ ಅಧ್ಯಯನ -2 ವಸಂತ ಮುಖ ತೋರಲಿಲ್ಲ
ಪೂರಕ ಅಧ್ಯಯನ -3 ಭಗತ್ ಸಿಂಗ್
ಪೂರಕ ಅಧ್ಯಯನ -4 ಮೃಗ ಮತ್ತು ಸುಂದರಿ
ಪೂರಕ ಅಧ್ಯಯನ -5 ಜನಪದ ಒಗಟುಗಳು
Second Language English ದ್ವಿತೀಯ ಭಾಷೆ ಇಂಗ್ಲೀಷ
SSLC Second Language English MCQ
Prose -3 Gentleman of Rio en Medio
English KSEEB Paper-1 With Ans
Third Language Hindi ತೃತೀಯ ಭಾಷೆ ಹಿಂದಿ
1 Mark Questions Effects of British Role In India
Social Science English Medium Quiz
Comments
Post a Comment
If any doubt Comment me